ನನ್ನ ತಂದೆಯನ್ನೇಕೆ ಕೊಂದಿರಿ; ವಿಸ್ಮಯಾ ಪ್ರಶ್ನೆ
Team Udayavani, Mar 11, 2017, 3:45 AM IST
ಕಣ್ಣೂರು: ದೆಹಲಿಯಲ್ಲಿ ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್, “ನನ್ನ ಅಪ್ಪನನ್ನು ಕೊಂದಿದ್ದು ಪಾಕ್ ಅಲ್ಲ, ಯುದ್ಧ’ ಎಂದು ಹೇಳಿದ ವಿಡಿಯೋವೊಂದು ವಿವಾದ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಕೇರಳದಲ್ಲೂ ಇಂತಹುದೇ ಘಟನೆ ನಡೆದಿದೆ. ಇಲ್ಲಿ ವಿಸ್ಮಯ ಎಂಬ 12ರ ಹರೆಯದ ಬಾಲಕಿ, “ನನ್ನ ಅಪ್ಪನನ್ನು ಏಕೆ ಕೊಂದಿರಿ’ ಎಂದು ಪ್ರಶ್ನಿಸಿರುವ ವಿಡಿಯೋವೊಂದು ವೈರಲ್ ಆಗಿದೆ.
2 ತಿಂಗಳ ಹಿಂದಷ್ಟೇ ವಿಸ್ಮಯಾಳ ತಂದೆ ಸಂತೋಷ್ ಕುಮಾರ್(52)ರನ್ನು ಕಣ್ಣೂರಿನಲ್ಲಿ ಹತ್ಯೆಗೈಯ್ಯಲಾಗಿತ್ತು. ಎಡಪಕ್ಷದ ಕಾರ್ಯಕರ್ತರೇ ಈ ಕೊಲೆಗೈದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿನಿ ವಿಸ್ಮಯಾ ವಿಡಿಯೋದಲ್ಲಿ ತನ್ನ ನೋವನ್ನು ಹೇಳಿಕೊಂಡಿದ್ದಾಳೆ. “ನನ್ನ ಅಪ್ಪ ನನ್ನ ಕನಸುಗಳನ್ನು ಈಡೇರಿಸಲು ಬಯಸಿದ್ದರು. ಒಂದು ರಾತ್ರಿ ಆ ಎಲ್ಲ ಕನಸುಗಳೂ ಕೊಚ್ಚಿಹೋದವು. ಅವರು ಮಾಡಿದ ಒಂದೇ ತಪ್ಪೆಂದರೆ, ಬಿಜೆಪಿ ಮತ್ತು ಆರೆಸ್ಸೆಸ್ ಅನ್ನು ಬೆಂಬಲಿಸಿದ್ದು. ನನ್ನ ಭವಿಷ್ಯದಲ್ಲಿ ಈಗ ಎಲ್ಲವೂ ಕಗ್ಗತ್ತಲು. ಅವರು ನನ್ನ ತಂದೆಯನ್ನಷ್ಟೇ ಅಲ್ಲ, ನನ್ನ ಕನಸುಗಳು ಮತ್ತು ಭವಿಷ್ಯವನ್ನು ಕೊಂದರು. ನನ್ನ ಅಪ್ಪನನ್ನೇಕೆ ಕೊಂದರು ಎಂಬುದಕ್ಕೆ ನನಗಿನ್ನೂ ಉತ್ತರ ಸಿಕ್ಕಿಲ್ಲ,’ ಎಂದು ಆಕೆ ಹೇಳಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Art of Living ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ 87 ದೇಶಗಳು ಭಾಗಿ
NewsClick ಸಂಪಾದಕ ಪ್ರಬೀರ್ ಬಂಧನ ಕಾನೂನು ಬಾಹಿರ; ಬಿಡುಗಡೆಗೆ ಸುಪ್ರೀಂ ಆದೇಶ
IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್ ತೀಕ್ಷ್ಣ ತಿರುಗೇಟು!
Mind Game; ಪಾಶ್ಚಿಮಾತ್ಯ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ ಜೈಶಂಕರ್
Rajasthan; ಗಣಿಯಲ್ಲಿ ಲಿಫ್ಟ್ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ 14 ಮಂದಿಯ ರಕ್ಷಣೆ
MUST WATCH
ಹೊಸ ಸೇರ್ಪಡೆ
Vijayapura: ಪ್ರೇಮ ವಿವಾಹವಾಗಿದ್ದ ನವ ದಂಪತಿ ನೇಣಿಗೆ ಶರಣು
RCB ವಿರುದ್ಧ ನಾನು ಆಡಿದ್ದರೆ…: ಬಿಸಿಸಿಐ ನಿರ್ಧಾರದ ವಿರುದ್ಧ ಪಂತ್ ಅಸಮಾಧಾನ
London: ಭಾರತೀಯ ಮೂಲದ ಮಹಿಳೆಗೆ ಬಸ್ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ
ಹೃದಯ ಸಂಬಂಧಿ ಕಾಯಿಲೆ: ಬಿಗ್ ಬಾಸ್ ಖ್ಯಾತಿ, ನಟಿ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲು
Art of Living ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ 87 ದೇಶಗಳು ಭಾಗಿ