IFFI ಶ್ರೀಲಂಕಾ ತಮಿಳರ ಸಮಸ್ಯೆಯನ್ನು ಭಾರತ ಅರಿಯಲಾರದು: ಮುತ್ತಯ್ಯ ಮುರಳೀಧರನ್
ಇಫಿ ಚಲನಚಿತ್ರೋತ್ಸವ
Team Udayavani, Nov 27, 2023, 12:33 AM IST
ಪಣಜಿ: “ಭಾರತ ಎಂದಿಗೂ ಶ್ರೀಲಂಕಾ ತಮಿಳರ ಸಮಸ್ಯೆ ಯನ್ನು ಅರಿಯಲಾರದು’ ಎಂದು ಶ್ರೀಲಂಕಾದ ಕ್ರಿಕೆಟ್ ಪಟು ಮುತ್ತಯ್ಯ ಮುರಳೀ ಧರನ್ ಬೇಸರದಿಂದ ನುಡಿದರು.
ತಮ್ಮ ಜೀವನಗಾಥೆ ಕುರಿತ 800 ಸಿನೆಮಾದ ಕುರಿತು ಕಲಾ ಅಕಾಡೆಮಿಯಲ್ಲಿ ನಡೆದ ಸಂವಾದದಲ್ಲಿ ಪಾಲ್ಗೊಂಡ ಅವರು, “ಭಾರತ ಎಂದರೆ ತಮಿಳುನಾಡಿನ ತಮಿಳರು ಎಂಬ ಅರ್ಥದಲ್ಲಿ ಹೇಳುತ್ತಿ ದ್ದೇನೆ. ಶ್ರೀಲಂಕಾ ತಮಿಳರ ಸಮಸ್ಯೆಯೇ ಬೇರೆ. ಸಿಂಹಳೀ ಯ ತಮಿಳರು ಮತ್ತು ಭಾರತದ ತಮಿಳರ ನಡುವೆ ಬಹಳ ವ್ಯತ್ಯಾಸಗಳಿವೆ’ ಎಂದು ವಿವರಿಸಿದರು.
“ಹಾಗೆ ನೋಡಿದರೆ ಸಿಂಹಳೀ ಯರೂ ಭಾರತದ ಬಿಹಾರ ದವರು. ತಮಿಳುನಾಡಿನ ಸಾಕಷ್ಟು ಮಂದಿ ತಮಿಳರಿದ್ದಾರೆ. ನಮ್ಮ ಪೂರ್ವಜರೂ ಮೂಲದಲ್ಲಿ ಭಾರತದವರೇ. ನಾನು ಹುಟ್ಟಿ ಬೆಳೆದದ್ದು ಶ್ರೀಲಂಕಾದಲ್ಲಿ. ರಾಜಕೀ ಯವಾಗಿ ನಮ್ಮನ್ನು ಇಬ್ಭಾಗ ಮಾಡಲಾಗಿದೆ’ ಎಂದು ಹೇಳಿದರು.
ಶ್ರೀಲಂಕಾದ ಜನರು ನಾನು ಕಷ್ಟದಲ್ಲಿದ್ದಾಗ ಮುಖ್ಯವಾಗಿ ಬದುಕಿನ ಅತೀ ಸಂಕಷ್ಟದ ದಿನದಲ್ಲಿರುವಾಗಲೂ ಬೆಂಬ ಲಿಸಿದ್ದಾರೆ. ಸುಮಾರು ಮೂ ರ್ನಾಲ್ಕು ದಶಕಗಳಿಂದ ಶ್ರೀಲಂಕಾ ಸ್ವತಃ ನಾನಾ ಸವಾಲುಗಳನ್ನು ಎದುರಿಸುತ್ತಿದೆ. ಅಂಥ ಕಠಿನ ಸಂದ ರ್ಭದಲ್ಲೂ ನನ್ನನ್ನು ಬೆಂಬಲಿ ಸಿರುವುದು ಮರೆಯಲಾರ ದು. ಹಾಗಾಗಿಯೇ ನಾನು ಒಂದು ಟ್ರಸ್ಟ್ ಮೂಲಕ ನನ್ನ ಕೈಲಾದ ಜನಸೇವೆಯನ್ನು ಮಾಡುತ್ತಿರುವುದಾಗಿ ತಿಳಿಸಿದರು.
ಸುನಾಮಿ ಸಂತ್ರಸ್ತರನ್ನು ಕಂಡು ದಂಗಾಗಿ ಹೋದೆ. ಆ ದಿಸೆ ಯಲ್ಲಿ ಜನರಿಗೆ ನನ್ನ ಕೈಲಾದ ನೆರವು ನೀಡಲೆಂದೇ ಈ ಟ್ರಸ್ಟ್ ಸ್ಥಾಪಿಸಿದೆ. ಭಾರತದ ಕ್ರಿಕೆಟ್ ತಾರೆಯರಾದ ಸಚಿನ್ ತೆಂಡು ಲ್ಕರ್, ಯುವರಾಜ್ ಸಿಂಗ್ ಸೇರಿದಂತೆ ಹಲವರು ನಿಧಿ ಸಂಗ್ರಹಕ್ಕೆ ಮಾಡಿದ ಸಹಾ ಯವನ್ನು ಮರೆಯಲಾರೆ. ಎಲ್ಲರ ನೆರವಿಂದ ಈಗ ಪ್ರತೀ ವರ್ಷವೂ ಸಾವಿರಾರು ಜನ ರಿಗೆ ಸಹಾಯ ಮಾಡಲು ಸಾಧ್ಯವಾಗಿದೆ’ ಎಂದರು.
ತಮ್ಮ ಸಿನೆಮಾದ ಕುರಿತೂ ಮಾತನಾಡಿ, ನನ್ನ ಜೀವನ ಗಾಥೆ ಕುರಿತು ಸಿನೆಮಾ ಮಾಡುತ್ತಾರೆಂದಾಗ ಮೊದ ಲು ಒಪ್ಪಿರಲಿಲ್ಲ. ಹಿಂಜರಿಕೆ ಯಿತ್ತು. ಕಾರಣವಿಷ್ಟೇ. ಜೀವನಗಾಥೆ ಎಂದ ಮೇಲೆ ಕಹಿ ಹಾಗೂ ಸಿಹಿ ಎಲ್ಲ ಅನುಭವಗಳನ್ನು ದಾಖಲಿಸ ಬೇಕಾಗುತ್ತದೆ. ಇದು ಕೆಲವ ರಿಗೆ ಬೇಸರ ತರಬಹುದು, ಕೆಲ ವರು ನನ್ನನ್ನು ದ್ವೇಷಿಸಬಹು ದು. ಹಾಗೆಂದು ಸುಳ್ಳನ್ನಾ ಗಲೀ, ಬರೀ ಮಧುರವೆನಿಸುವುದನ್ನಾ ಗಲೀ ಹೇಳಲಾಗದು. ಆಗ ಅದು ಜೀವನ ಗಾಥೆ ಎನಿಸದು. ಈ ಹಿನ್ನೆಲೆಯಲ್ಲೇ ಬೇಡ ಎಂಬ ಮನಸ್ಸಿನಲ್ಲಿದ್ದೆ. ಬಳಿಕ ಹಲವರ ಮನವೊಲಿಕೆಯಿಂದ ಒಪ್ಪಿದೆ ಎಂದರು.
ಚಿತ್ರದ ನಿರ್ದೇಶಕ ಎಂ.ಎಸ್. ಶ್ರೀಪತಿ ಮಾತನಾಡಿ, “ಸಾಮಾ ನ್ಯವಾಗಿ ನಮಗೆ ಸಿನೆಮಾಗಳಲ್ಲಿ ಕೊಂಚ ನಾಟಕೀಯತೆ ಬೇಕು. ಆದರೆ ಈ ಸಿನೆಮಾದಲ್ಲಿ ಅವು ಗಳ ಅಗತ್ಯವೇ ಬರಲಿಲ್ಲ. ಯಾಕೆಂದರೆ ಮುರಳೀಧರನ್ ಅವರ ಜೀವನಗಾಥೆಯೇ ನೂರಾರು ಘಟನೆಗಳ ಗುತ್ಛ. ಅವುಗಳಲ್ಲಿ ಕೆಲವನ್ನು ಆಯ್ದು ಕೊಂಡು ಸಂಪೂರ್ಣತೆಯನ್ನು ನೀಡಲು ಪ್ರಯತ್ನಿಸಿದ್ದೇನೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಗಾಲ ಶಿಕ್ಷಕರ ನೇಮಕ ಸಿಬಿಐ ತನಿಖೆಗೆ ಮಾತ್ರ ತಡೆ: ಸುಪ್ರೀಂ ಕೋರ್ಟ್
NEET; ಕೋಟಾದಲ್ಲಿ ಮತ್ತೊಬ್ಬ ಆಕಾಂಕ್ಷಿ ಆತ್ಮಹತ್ಯೆ: ಇದು 8ನೇ ಪ್ರಕರಣ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ