ಸೋಂಕಿಗೆ ಯೋಧರಿಬ್ಬರ ಬಲಿ: ಗಡಿ ಭದ್ರತಾ ಪಡೆಗೆ ಮೊದಲ ಆಘಾತ

ಮತ್ತೆ 41 ಸೋಂಕು ಪ್ರಕರಣ ಪತ್ತೆ

Team Udayavani, May 8, 2020, 12:13 PM IST

ಸೋಂಕಿಗೆ ಯೋಧರಿಬ್ಬರ ಬಲಿ: ಗಡಿ ಭದ್ರತಾ ಪಡೆಗೆ ಮೊದಲ ಆಘಾತ

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಲಸೆ ಕಾರ್ಮಿಕರ ಕುಟುಂಬಗಳ ಸದಸ್ಯರಿಗೆ ವೈದ್ಯರು ತಪಾಸಣೆ ನಡೆಸಿದರು.

ಹೊಸದಿಲ್ಲಿ: ಆಘಾತಕಾರಿ ಮಾಹಿತಿಯೆಂಬಂತೆ, ಕೋವಿಡ್ ಸೋಂಕಿನಿಂದ ಬಳಲುತ್ತಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್)ಇಬ್ಬರು ಯೋಧರು ಗುರುವಾರ ಅಸುನೀಗಿದ್ದಾರೆ. ಈಗಾಗಲೇ ಬಿಎಸ್‌ಎಫ್ನಲ್ಲಿ ಹಲವು ಸಿಬಂದಿಗೆ ಸೋಂಕು ತಗಲಿದ್ದು, ಸಾವು ಸಂಭವಿಸಿರುವ ಮೊದಲ ಪ್ರಕರಣ ಇದಾ ಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಿಎಸ್‌ಎಫ್ನ ಕೊರೊನಾ ವಾರಿಯರ್ಸ್‌ ನಿಧನಹೊಂದಿ ರುವ ಕುರಿತು ತೀವ್ರ ಸಂತಾಪ ವ್ಯಕ್ತಪಡಿಸಿರುವ ಬಿಎಸ್‌ಎಫ್ ಮಹಾನಿರ್ದೇಶಕ ಮತ್ತು ಇತರ ಅಧಿಕಾರಿಗಳು, ಅವರ ಕುಟುಂಬಗಳಿಗೆ ನೋವು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೂ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮೃತರ ಕುಟುಂಬ ಗಳಿಗೆ ಸಾಂತ್ವನ ಹೇಳಿದ್ದಾರೆ.

41 ಹೊಸ ಪ್ರಕರಣ: ಇದೇ ವೇಳೆ, ಗುರುವಾರ ಮತ್ತೆ 41 ಯೋಧರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸುಮಾರು 200ರಷ್ಟು ಯೋಧರಿಗೆ ಸೋಂಕು ತಗಲಿ ದಂತಾ ಗಿದೆ. ಇಬ್ಬರು ಮಾತ್ರ ಗುಣಮುಖರಾಗಿದ್ದಾರೆ. ದಿಲ್ಲಿ, ಕೋಲ್ಕತಾ ಮತ್ತು ತ್ರಿಪುರದಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ, ಕೇಂದ್ರ ಅರೆಸೇನಾ  ಪಡೆಯಲ್ಲಿ ದೇಶಾದ್ಯಂತ 400 ಮಂದಿಗೆ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೂರತ್‌, ಅಹ್ಮದಾಬಾದ್‌ ಶಟ್‌ಡೌನ್‌: ಗುಜರಾತ್‌ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ವೃದ್ಧಿಸುತ್ತಲೇ ಇರುವ ಕಾರಣ, ಅತಿ ಹೆಚ್ಚು ಸೋಂಕು ಕಂಡಿರುವ
ಅಹ್ಮದಾ ಬಾದ್‌ ಹಾಗೂ ಸೂರತ್‌ ನಗರಗಳನ್ನು ಶಟ್‌ ಡೌನ್‌ ಮಾಡಿ ಆದೇಶ ಹೊರಡಿಸಲಾಗಿದೆ. ಅಹ್ಮದಾಬಾದ್‌ನಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆ ಕಂಡುಬಂದ ಕಾರಣ ನಗರವನ್ನು ಒಂದು ವಾರ ಕಾಲ ಶಟ್‌ಡೌನ್‌ ಮಾಡಿ ಬುಧವಾರ ರಾತ್ರಿ ಸ್ಥಳೀಯಾ ಡಳಿತ ಆದೇಶ ಹೊರಡಿಸಿದೆ. ಹೀಗಾಗಿ, ಮೇ 15ರ ರಾತ್ರಿಯವರೆಗೂ ನಗರವು ಸಂಪೂರ್ಣ ಸ್ತಬ್ಧವಾಗಿರಲಿದೆ. ಇದರ ಬೆನ್ನಲ್ಲೇ, ಸೂರತ್‌ ನಲ್ಲೂ ಮೇ 9ರ ಮಧ್ಯರಾತ್ರಿಯಿಂದ 14ರ ಮಧ್ಯ ರಾತ್ರಿ ಯವರೆಗೆ ಎಲ್ಲ ತರಕಾರಿ ಹಾಗೂ ಹಣ್ಣಿನ ಅಂಗಡಿಗಳನ್ನು ಮುಚ್ಚಬೇಕು ಎಂದು ಸೂಚಿಸಲಾಗಿದ್ದು, ಅಹಮದಾಬಾದ್‌ ಮಾದರಿಯಲ್ಲೇ ಈ ನಗರವೂ ಸಂಪೂರ್ಣ ಶಟ್‌ ಡೌನ್‌ ಆಗಲಿದೆ. ಗುರುವಾರ ಅಧಿಕಾರಿಗಳ ಹೊಸ ತಂಡ ರಚಿಸಿ, ಅಹಮದಾಬಾದ್‌ನ ಉಸ್ತುವಾರಿಯನ್ನು ಆ ತಂಡಕ್ಕೆ ವಹಿಸಲಾಗಿದೆ. ಅರೆಸೇನಾ ಪಡೆಯ 5 ಹೆಚ್ಚುವರಿ ತಂಡವು ನಗರಕ್ಕೆ ಆಗಮಿಸಿದೆ.

ತರಕಾರಿ, ದಿನಸಿಯೂ ಇಲ್ಲ: ಅಹ್ಮದಾಬಾದ್‌ನಲ್ಲಿ ಕೇವಲ ಹಾಲು, ಔಷಧ ಮಾರಾಟ ಮಾಡುವ ಅಂಗಡಿಗಳು, ಆಸ್ಪತ್ರೆಗಳು ಹಾಗೂ ಎಟಿಎಂ ಸೇವೆ ಮಾತ್ರವೇ ಲಭ್ಯವಿರಲಿದ್ದು, ತರಕಾರಿ, ದಿನಸಿ ವಸ್ತುಗಳು ಕೂಡ ಒಂದು ವಾರ ಕಾಲ ಸಿಗುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಣ್ಣು, ಬೇಕರಿ, ಸೂಪರ್‌ ಮಾರ್ಕೆಟ್‌, ಐಸ್‌ಕ್ರೀಂ ಪಾರ್ಲರ್‌ಗಳನ್ನು ಮುಚ್ಚಲಾಗಿದೆ. ಆಹಾರ ವಸ್ತುಗಳು ಸೇರಿದಂತೆ ಯಾವುದೇ ವಸ್ತುಗಳ ಆನ್‌ಲೈನ್‌ ಡೆಲಿವರಿ ಕೂಡ ನಿಷೇಧಿಸಲಾಗಿದೆ.

ಗುಜರಾತ್‌ನಲ್ಲಿ ಪತ್ತೆಯಾಗಿರುವ ಒಟ್ಟಾರೆ 6,625 ಪ್ರಕರಣಗಳ ಪೈಕಿ ಅಹ್ಮದಾಬಾದ್‌ವೊಂದರಲ್ಲೇ 4,716 ಸೋಂಕಿತರಿದ್ದಾರೆ. ಇಲ್ಲಿನ ಮರಣ ಪ್ರಮಾಣವು ಶೇ.6.1 ಆಗಿದ್ದು, ರಾಷ್ಟ್ರೀಯ ಸರಾಸರಿ(ಶೇ.3.3)ಗೆ ಹೋಲಿಸಿದರೆ ಇದು ದುಪ್ಪಟ್ಟು. ಇನ್ನು, ಸೂರತ್‌ನಲ್ಲಿ ಒಟ್ಟು 750 ಪ್ರಕರಣಗಳು ಪತ್ತೆಯಾಗಿವೆ

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.