01.01.2023: ಇಂದಿನಿಂದ ಏನೇನು ಬದಲಾವಣೆ? ಇಲ್ಲಿದೆ ಮಾಹಿತಿ
Team Udayavani, Jan 1, 2023, 9:17 AM IST
ಕ್ರೆಡಿಟ್ ಕಾರ್ಡ್ ನಿಯಮ
ಎಚ್ಡಿಎಫ್ಸಿ ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರ ರಿವಾರ್ಡ್ ಪಾಯಿಂಟ್ ಗಳಿಗೆ ಸಂಬಂಧಿಸಿ ಕೆಲವು ನಿಯಮಗಳಲ್ಲಿ ಬದಲಾವಣೆ ತಂದಿದೆ. ಹಲವಾರು ಕಾರ್ಡ್ಗಳಿಗೆ ನೀಡಲಾಗುವ ರಿವಾರ್ಡ್ ಪಾಯಿಂಟ್ಗಳನ್ನು ನಿಗದಿತ ಮೊತ್ತಕ್ಕೆ ಸೀಮಿತಗೊಳಿಸಲಾಗಿದೆ. ಥರ್ಡ್ಪಾರ್ಟಿ ಮರ್ಚೆಂಟ್ಗಳ ಮೂಲಕ ಪಾವತಿಸುವ ಬಾಡಿಗೆಗೆ ಒಟ್ಟು ವಹಿವಾಟು ಮೊತ್ತಕ್ಕೆ ಶೇ.1ರಷ್ಟು ಶುಲ್ಕ ನೀಡಬೇಕಾಗುತ್ತದೆ. ಅಂತಾರಾಷ್ಟ್ರೀಯ ವಹಿವಾಟಿಗೂ ಶುಲ್ಕ ತೆರಬೇಕಾಗುತ್ತದೆ.
ಕಾರು ದುಬಾರಿ
ಈ ವರ್ಷ ಕಾರು ಖರೀದಿಸಲು ನೀವು ಬಯಸಿದ್ದೀರಾ? ಹಾಗಿದ್ದರೆ ಕಾರುಗಳಿಗೆ ನೀವು ಹೆಚ್ಚಿನ ದರ ತೆರಬೇಕಾಗುತ್ತದೆ. ಹೋಂಡಾ, ಹ್ಯುಂಡೈ, ಜೀಪ್, ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಕಿಯಾ, ಮರ್ಸಿಡಿಸ್-ಬೆಂಜ್, ಎಂಜಿ ಮೋಟರ್, ರಿನೋ, ಆಡಿ ಸೇರಿದಂತೆ ಪ್ರಮುಖ ಕಂಪನಿಗಳು ಈಗಾಗಲೇ ದರ ಏರಿಕೆಯ ಘೋಷಣೆ ಮಾಡಿವೆ.
ಹೈಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್
ಇಂದಿನಿಂದ ಎಲ್ಲ ವಾಹನಗಳೂ ಕಡ್ಡಾಯವಾಗಿ ಅಧಿಕ ಭದ್ರತೆಯ ರಿಜಿಸ್ಟ್ರೇಷನ್ ಪ್ಲೇಟ್ (ಎಚ್ಎಸ್ಪಿಆರ್) ಮತ್ತು ಕಲರ್-ಕೋಡೆಡ್ ಸ್ಟಿಕರ್ಗಳನ್ನು ಹೊಂದಬೇಕಾದ್ದು ಕಡ್ಡಾಯ. ದ್ವಿಚಕ್ರ ವಾಹನಗಳಿಗೆ ಎಚ್ಎಸ್ಪಿಆರ್ ಹಾಕಲು 356 ರೂ., ಮತ್ತು ನಾಲ್ಕು ಚಕ್ರದ ವಾಹನಗಳಿಗೆ 600ರೂ.ನಿಂದ 1,100 ರೂ.ವರೆಗೆ ಖರ್ಚಾಗುತ್ತದೆ. ಹೊಸ ಮೋಟಾರು ವಾಹನ ಕಾಯ್ದೆ ಪ್ರಕಾರ, ಎಚ್ಎಸ್ಆರ್ಪಿ ಇಲ್ಲದೇ ಇದ್ದರೆ ನಿಮಗೆ 5 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೆ ದಂಡ ಹಾಕಲಾಗುತ್ತದೆ.
ಎನ್ಪಿಎಸ್ ವಿತ್ಡ್ರಾವಲ್
ಕೊರೊನಾ ಹಿನ್ನೆಲೆಯಲ್ಲಿ 2021ರಿಂದ ರಾಷ್ಟ್ರೀಯ ಪಿಂಚಣಿ ಯೋಜನೆಯ ಚಂದಾದಾರರಿಗೆ ಆನ್ ಲೈನ್ ಮೂಲಕ ತಮ್ಮ ಪಿಂಚಣಿಯನ್ನು ಭಾಗಶಃ ಪಡೆಯಲು ಅವಕಾಶ ನೀಡಲಾಗಿತ್ತು. ಇನ್ನು ಮುಂದೆ ಈ ಅವಕಾಶ ಇರುವುದಿಲ್ಲ. ಕೇಂದ್ರ, ರಾಜ್ಯ ಸರ್ಕಾರಿ ಉದ್ಯೋಗಿಗಳು ಮತ್ತು ಕೇಂದ್ರ ಸ್ವಾಯತ್ತ ಸಂಸ್ಥೆಗಳ ನೌಕರರು ಜ.1ರಿಂದ ಪಿಂಚಣಿಯನ್ನು ಭಾಗಶಃ ವಿತ್ಡ್ರಾ ಮಾಡಲು ಆಗುವುದಿಲ್ಲ.
ಜಿಎಸ್ಟಿ ಇನ್ವಾಯ್ಸ್
ಜಿಎಸ್ಟಿ ಇ-ಇನ್ವಾಯ್ಸಿಂಗ್ (ಎಲೆಕ್ಟ್ರಾನಿಕ್ ಬಿಲ್)ಗೆ ಇದ್ದ 20 ಕೋಟಿ ರೂ.ಗಳ ಮಿತಿಯನ್ನು ಸರ್ಕಾರ ಈಗ 5 ಕೋಟಿ ರೂ.ಗೆ ಇಳಿಕೆ ಮಾಡಿದೆ. ಭಾನುವಾರದಿಂದಲೇ ಇದು ಜಾರಿಯಾಗಲಿದೆ. ಅದರಂತೆ, ನಿಮ್ಮ ವಾರ್ಷಿಕ ವಹಿವಾಟು 5 ಕೋಟಿ ರೂ.ಗಿಂತ ಹೆಚ್ಚಿದ್ದರೆ, ನೀವು ಕಡ್ಡಾಯವಾಗಿ ಎಲೆಕ್ಟ್ರಾನಿಕ್ ಬಿಲ್ ಹೊಂದಿರಬೇಕು.
ಎಲ್ಪಿಜಿ-ಸಿಎನ್ಜಿ-ಪಿಎನ್ಜಿ ದರ
ತೈಲ ಮತ್ತು ಅನಿಲ ಕಂಪನಿಗಳು ಪ್ರತಿ ತಿಂಗಳ ಮೊದಲ ದಿನ ದರ ಪರಿಷ್ಕರಣೆ ಘೋಷಿಸುತ್ತವೆ. ಅದರಂತೆ, ಇಂದು ಎಲ್ಪಿಜಿ ಸಿಲಿಂಡರ್, ಸಿಎನ್ಜಿ ಮತ್ತು ಪಿಎನ್ಜಿ ದರದಲ್ಲಿ ಏರಿಕೆ ಆಗಲೂಬಹುದು ಅಥವಾ ಇಳಿಕೆ ಆಗಲೂಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ
Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
MUST WATCH
ಹೊಸ ಸೇರ್ಪಡೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ