Kerala; ಉಳಿಕ್ಕಲ್ ಪಟ್ಟಣಕ್ಕೆ ನುಗ್ಗಿ ಕಾಡಾನೆ ದಾಂಧಲೆ: ಮೂವರಿಗೆ ಗಾಯ
ದಿಕ್ಕಾಪಾಲಾಗಿ ಓಡಿದ ಜನರು...
Team Udayavani, Oct 11, 2023, 3:42 PM IST
ಕಣ್ಣೂರು (ಕೇರಳ): ಜಿಲ್ಲೆಯ ಉಳಿಕ್ಕಲ್ ಪಟ್ಟಣದಲ್ಲಿ ದಾರಿ ತಪ್ಪಿ ಬಂದ ಕಾಡಾನೆಯೊಂದು ಬುಧವಾರ ನಿವಾಸಿಗಳಲ್ಲಿ ಭೀತಿಯನ್ನು ಉಂಟುಮಾಡಿದ ಘಟನೆ ನಡೆದಿದೆ. ಜನರು ಬೆದರಿ ದಿಕ್ಕಾಪಾಲಾಗಿ ಓದುವ ವೇಳೆ ಮೂವರು ಗಾಯಗೊಂಡಿದ್ದಾರೆ.
ಆನೆಯನ್ನು ಕಂಡು ಗಾಬರಿಗೊಂಡ ಜನರು ಬಚಾವ್ ಆಗಲು ಹರಸಾಹಸ ಪಟ್ಟರು. ಪಟ್ಟಣದಿಂದ 6 ಕಿಲೋಮೀಟರ್ ದೂರದಲ್ಲಿರುವ ಅರಣ್ಯಕ್ಕೆ ಆನೆಯನ್ನು ಓಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆನೆಯಿಂದ ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳಲು ಈ ಪ್ರದೇಶದಲ್ಲಿ ಶಾಲೆಗಳು, ಅಂಗಡಿಗಳು ಮತ್ತು ಇತರ ಸಂಸ್ಥೆಗಳನ್ನು ಸದ್ಯಕ್ಕೆ ಮುಚ್ಚಲಾಗಿದೆ.
ಆನೆಯಿಂದ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯಾಗದಿದ್ದರೂ, ಬೆಳೆಗಳಿಗೆ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.