ರಜನಿ ರಾಜಕೀಯ ಸೇರಿದ್ರೆ ಕೈ ಜೋಡಿಸಲು ಸಿದ್ಧ:ಕಮಲ್
Team Udayavani, Sep 16, 2017, 10:30 AM IST
ಚೆನ್ನೈ: ದಿಗ್ಗಜ ನಟರಾದ ರಜನಿಕಾಂತ್ ಮತ್ತು ಕಮಲಹಾಸನ್ ಅವರ ರಾಜಕೀಯ ಪ್ರವೇಶದ ಕುರಿತು ತಮಿಳುನಾಡಿನ ಜನರಲ್ಲಿ ತೀವ್ರ ಕುತೂಹಲ ಕೆರಳಿದ್ದು ಇಬ್ಬರೂ ಒಂದಾಗಿ ಹೋರಾಟ ಮಾಡುತ್ತಾರಾ ಎನ್ನುವ ಪ್ರಶ್ನೆ ಇದೀಗ ಮೂಡಿದೆ.
ಮಾಧ್ಯಮಗಳಲ್ಲಿ ವರದಿಯಾದಂತೆ ಕಮಲ ಹಾಸನ್ ಅವರು ಸಂದರ್ಶನವೊಂದರಲ್ಲಿ ರಜನಿ ಕಾಂತ್ ಅವರೊಂದಿಗೆ ಕೈ ಜೋಡಿಸುತ್ತೀರಾ ಎಂದು ಪ್ರಶ್ನಿದಾಗ ರಜನಿ ರಾಜಕೀಯ ಸೇರಿದರೆ ಕೈ ಜೋಡಿಸಲು ಸಿದ್ದ ಎಂದಿದ್ದಾರೆ.
ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ನಾನು ಮುಂದಾಗಿದ್ದು, ಹೊಸ ಪಕ್ಷ ಸ್ಥಾಪಿಸುವುದಾಗಿ ಕಮಲ ಹಾಸನ್ ಹೇಳಿದ್ದರು.
ವರದಿಯಾದಂತೆ ಕಮಲ ಹಾಸನ್ ಅವರು ತಳ ಮಟ್ಟದಿಂದ ರಾಜಕೀಯ ಮಾಡಲು ಉದ್ದೇಶಿಸಿದ್ದು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಯೋಜನೆ ಹಾಕಿಕೊಂಡಿದ್ದಾರೆ ಎಂದು ವರದಿಯಾಗಿದೆ.
ರಜನಿ ಕಾಂತ್ ಅವರೂ ಕೆಲ ತಿಂಗಳ ಹಿಂದೆ ಅಭಿಮಾನಿಗಳ ಭೇಟಿ ಮಾಡಿ ರಾಜಕೀಯ ಪ್ರವೇಶಿಸುವ ಕುರಿತು ಚಿಂತನೆ ನಡೆಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
W.Bengal; ಮುಸ್ಲಿಂ ಮುನಿಸಿಗೆ ಮಂದಿರಕ್ಕೆ ಬಾರದ ಮಮತಾ: ಅಮಿತ್ ಶಾ
1500 for women: ಆಂಧ್ರದಲ್ಲಿ ಕರ್ನಾಟಕ ಮಾದರಿ ಎನ್ಡಿಎ ಗ್ಯಾರಂಟಿ
Election; ಮೊಹಬ್ಬತ್ ಕೀ ದುಕಾನ್ನಲ್ಲಿ ಫೇಕ್ ವೀಡಿಯೋಗಳು ಮಾರಾಟ: ಮೋದಿ
Supreme Court; ಪತಂಜಲಿ ಆಯ್ತು, ಈಗ ಐಎಂಎ ವಿರುದ್ಧ ಸುಪ್ರೀಂ ಕೋರ್ಟ್ ಗರಂ
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ