ತಾಯಿಯ ಮೇಲಿನ ದ್ವೇಷಕ್ಕೆ ಹಸುಗೂಸು ಬಲಿ: ಮೂರು ತಿಂಗಳ ಕಂದನಿಗೆ ಬೆಂಕಿ ಇಟ್ಟ ಚಿಕ್ಕಮ್ಮ
Team Udayavani, Apr 18, 2021, 4:33 PM IST
ಪಂಜಾಬ್ : ಪಾಪಿ ಚಿಕ್ಕಮ್ಮಳೋರ್ವಳು ಮೂರು ತಿಂಗಳ ಹೆಣ್ಣು ಮಗುವನ್ನು ಜೀವಂತವಾಗಿ ಸುಟ್ಟು ಕೊಲೆ ಮಾಡಿರುವ ಘಟನೆ ಪಂಜಾಬ್ ನ ಫಝಿಲ್ಕಾ ಜಿಲ್ಲೆಯಲ್ಲಿ ನಡೆದಿದೆ. ಸುಖ್ಪ್ರೀತ್ ಕೌರ್ ಎಂಬಾಕೆಯೇ ಕೊಲೆ ಮಾಡಿದ ಕಿರಾತಕಿ.
ಮಗುವಿನ ತಾಯಿಯ ಮೇಲೆ ರಿವೇಂಜ್ ತಿರಿಸಿಕೊಳ್ಳಲು ಈ ಕೃತ್ಯ ಎಸಗಿರುವುದಾಗಿ ಕೊಲೆಗಾತಿ ಸುಖ್ಪ್ರೀತ್ ಪೊಲೀಸ್ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.
ಘಟನೆ ಹಿನ್ನೆಲೆ : ಮೂರು ತಿಂಗಳ ಹೆಣ್ಣು ಮಗವನ್ನು ಮನೆಯಲ್ಲಿ ಬಿಟ್ಟು ಆಕೆಯ ತಾಯಿ ಬ್ಯಾಂಕ್ಗೆ ತೆರಳಿದ್ದಳು. ವಾಪಸ್ ಮನೆಗೆ ಬಂದಾಗ ಮಗು ನಾಪತ್ತೆಯಾಗಿತ್ತು. ಮನೆಯ ಸದಸದ್ಯರೆಲ್ಲ ಹುಡುಕಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಮರು ದಿನ ಮಗುವಿನ ಕಾಲುಗಳನ್ನು ಸೆಪ್ಟಿಕ್ ಟ್ಯಾಂಕ್ ನಲ್ಲಿ ನೋಡಿರುವುದಾಗಿ ಸುಖ್ಪ್ರೀತ್ ಹೇಳಿದ್ದಳು. ಅದರಂತೆ ಸ್ಥಳಕ್ಕೇ ಹೋಗಿ ನೋಡಿದಾಗ ಅರೆಬೆಂದ ಶಿಶುವಿನ ದೇಹ ಪತ್ತೆಯಾಗಿತ್ತು.
ಚಿಕ್ಕಮ್ಮನೆ ಕೊಲೆಗಾತಿ :
ಮಗು ದೇಹ ನೋಡಿರುವುದಾಗಿ ಹೇಳಿದ್ದ ಸುಖ್ಪ್ರೀತ್ ಕೌರ್, ಆ ಸ್ಥಳಕ್ಕೆ ಬಂದಿರಲಿಲ್ಲ. ಹಾಗೂ ಆಕೆಯ ಹಾವ-ಭಾವದ ಮೇಲೆ ಸ್ವಲ್ಪ ಬದಲಾವಣೆ ಕೂಡ ಆಗಿತ್ತು. ಇದನ್ನು ಗಮನಿಸಿದ ಮೃತ ಮಗುವಿನ ಪೋಷಕರು ಸುಖ್ಪ್ರೀತ್ ಕೌರ್ ಮೇಲೆ ಅನುಮಾನಗೊಂಡು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಮೇರೆಗೆ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ನಿಜಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಯಿ ಮೇಲಿನ ದ್ವೇಷಕ್ಕೆ ಮಗು ಬಲಿ :
ಸುಖ್ಪ್ರೀತ್ ಕೌರ್ ಹಾಗೂ ಮೃತ ಮಗುವಿನ ತಾಯಿ ಒಂದೇ ಮನೆಯ ಸೊಸೆಯಂದಿರು. ಇವರ ನಡುವೆ ಸಣ್ಣ-ಪುಟ್ಟ ಮನಸ್ತಾಪಗಳಿದ್ದವು. ಇದನ್ನೇ ಗಂಭೀರವಾಗಿ ತೆಗೆದುಕೊಂಡಿದ್ದ ಸುಖ್ಪ್ರೀತ್, ಮಗುವನ್ನು ಕೊಂದು ಅದರ ತಾಯಿಯ ಮೇಲೆ ಸೇಡು ತಿರಿಸಿಕೊಳ್ಳಲು ನಿಶ್ಚಯಿಸಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?
Vijay Mallya ಹಸ್ತಾಂತರಕ್ಕೆ ಫ್ರಾನ್ಸ್ನೊಂದಿಗೆ ಭಾರತ ಮಾತುಕತೆ
VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್
Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ