ಸೌದಿಯಲ್ಲಿ ಜೀತಕ್ಕಿದ್ದ ಮಹಿಳೆ ವಾಪಸ್
Team Udayavani, Apr 11, 2018, 10:05 AM IST
ಹೈದರಾಬಾದ್: ದುಬೈನಲ್ಲಿ ಕೆಲಸ ಸಿಗುತ್ತದೆಂಬ ಭರವಸೆ ನಂಬಿ ಸೌದಿ ಅರೇಬಿಯಾದ ಅಭಾಕ್ಕೆ ತೆರಳಿ ಮೋಸ ಹೋಗಿದ್ದ ಹೈದರಾಬಾದ್ ಮೂಲದ ಮಹಿಳೆ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ನೆರವಿನಿಂದ ಸ್ವದೇಶಕ್ಕೆ ಹಿಂದಿರುಗಿದ್ದಾರೆ. ಏ. 9ರಂದು ಹೈದರಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮಹಿಳೆ, ತಮ್ಮನ್ನು ಜೀತದ ಸಂಕಷ್ಟದಿಂದ ಪಾರು ಮಾಡಿದ ಸುಷ್ಮಾಗೆ ಧನ್ಯವಾದ ಅರ್ಪಿಸಿದ್ದಾರೆ.
47 ವರ್ಷದ ಈ ಮಹಿಳೆಗೆ ಸೌದಿಯಲ್ಲಿ ಉತ್ತಮ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ ಏಜೆಂಟ್ ಒಬ್ಟಾತ, ಆಕೆಯನ್ನು ಹಾಗೂ ಆಕೆಯ ಪತಿಯನ್ನು ನಂಬಿಸಿ ಅಭಾ ನಗರಕ್ಕೆ ಕರೆದೊಯ್ದಿದ್ದ. ಅದರೆ, ಅಲ್ಲಿ ಹೋದ ಮೇಲೆ ತಾನು ಮಾನವ ಕಳ್ಳಸಾಗಣೆಗೆ ಜಾಲಕ್ಕೆ ಸಿಲುಕಿರುವುದು ಆಕೆಯ ಗಮನಕ್ಕೆ ಬಂತು. ಆಕೆಯನ್ನು ಶ್ರೀಮಂತರೊಬ್ಬರ ಮನೆಗೆಲಸಕ್ಕೆ ತಳ್ಳಿದ್ದ ಆ ಏಜೆಂಟ್ ಅಲ್ಲಿಂದ ಹೊರಟು ಹೋಗಿದ್ದ. ಆ ಶ್ರೀಮಂತನ ಮನೆಯಲ್ಲಿ ಜೀತದಾಳಾಗಿ ದುಡಿಯಬೇಕಿದ್ದ ಆಕೆ ಶ್ರೀಮಂತನಿಂದ ದೌರ್ಜನ್ಯಕ್ಕೂ ಒಳಗಾಗಿದ್ದಳು. ಅದೊಂದು ದಿನ ಫೋನಿನಲ್ಲಿ ತಮ್ಮ ಪತಿಯನ್ನು ಸಂಪರ್ಕಿಸಿದ ಆಕೆ ತನ್ನ ಪರಿಸ್ಥಿತಿಯನ್ನು ವಿವರಿಸಿದ್ದಳು. ನಂತರ ಆಕೆಯ ಪತಿ ವಿದೇಶಾಂಗ ಇಲಾಖೆಯ ಮೊರೆ ಹೋಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್ ಮೈಂಡ್; ಗೋಲ್ಡಿ ಬ್ರಾರ್ ಶೂಟೌಟ್ – ವರದಿ
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
MUST WATCH
ಹೊಸ ಸೇರ್ಪಡೆ
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…