ಶಾಲಾ ಪಠ್ಯಕ್ಕೆ ಯೋಗ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ
Team Udayavani, Jun 21, 2018, 11:25 AM IST
ಮುಂಬಯಿ : ಆರೋಗ್ಯವಂತ ದೇಶವನ್ನು ರೂಪಿಸಲು ಯೋಗವನ್ನು ಶಾಲಾ ಪಠ್ಯಕ್ಕೆ ಸೇರಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ದು ಇಂದಿಲ್ಲಿ ಹೇಳಿದರು.
ಇಲ್ಲಿನ ಬಾಂದ್ರಾ ರಿಕ್ಲಮೇಶನ್ ಸೀಲಿಂಗ್ ಪ್ರೊಮೆನೇಡ್ನಲ್ಲಿ ಏರ್ಪಟ್ಟ ಅಂತಾರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಭಾರತದ ಪ್ರಾಚೀನ ಆಯುರಾರೋಗ್ಯದ ಯೋಗವು ವಿಶ್ವಕ್ಕೆ ಭಾರತದಿಂದ ಸಂದಿರುವ ಅತ್ಯಮೂಲ್ಯ ಕೊಡುಗೆಯಾಗಿದೆ ಎಂದು ಹೇಳಿದರು.
ಈ ಸಮಾರಂಭದಲ್ಲಿ ಉಪಸ್ಥಿತರಿದ್ದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಕೂಡ ಕೆಲವೊಂದು ಯೋಗಾಸನಗಳನ್ನು ಕೈಗೊಂಡು ಆ ಬಳಿಕ ಮಾತನಾಡಿ, ಭಾರತದ ಪ್ರಾಚೀನ ಯೋಗ ವಿಜ್ಞಾನವು ಇಂದಿನ ಆಧುನಿಕ ಜಗತ್ತಿಗೆ ಬಹಳ ಮುಖ್ಯವಾಗಿದೆ ಎಂದುಹೇಳಿದರು.
ಬಿಜೆಪಿ ಸಂಸದೆಯಾಗಿರುವ (ಉತ್ತರ ಮಧ್ಯ ಮುಂಬಯಿ) ಪೂನಂ ಮಹಾಜನ್, ಸ್ಥಳೀಯ ಶಾಸಕ ಮತ್ತು ಮುಂಬಯಿ ಬಿಜೆಪಿ ಮುಖ್ಯಸ್ಥ ಆಶಿಶ್ ಶೇಲಾರ್, ಕೇಂದ್ರ ಸಚಿವ ಬಾಬುಲ್ ಸುಪ್ರಿಯೋ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ
Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ
Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್ ಪೋಸ್ಟ್ ವರದಿ
Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ
ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್ ಹೊಂದಿರುವ ಕ್ಯಾನ್ಸರ್ ಚಿಕಿತ್ಸೆ ಕ್ರಮ