ನೋಯ್ಡಾ ಫೋಬಿಯಾಗೆ ಯೋಗಿ ಆದಿತ್ಯನಾಥ ಸಡ್ಡು
Team Udayavani, Dec 22, 2017, 8:25 AM IST
ಲಕ್ನೋ: ನೋಯ್ಡಾಕ್ಕೆ ಭೇಟಿ ನೀಡುವ ಉತ್ತರ ಪ್ರದೇಶದ ಯಾವುದೇ ಮುಖ್ಯಮಂತ್ರಿ ಬಹು ಬೇಗನೇ ಅಧಿಕಾರ ಕಳೆದುಕೊಳ್ಳುತ್ತಾರೆ ಹಾಗೂ ಪುನಃ ಆ ಸ್ಥಾನಕ್ಕೆ ಬರಲು ಅಸಾಧ್ಯವಾಗುತ್ತದೆ ಎಂಬ ಭೀತಿಯೊಂದು ಉತ್ತರ ಪ್ರದೇಶ ರಾಜಕೀಯ ವಲಯದಲ್ಲಿದೆ. ಇದೀಗ, ಈ ಭೀತಿಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸುಳ್ಳು ಮಾಡಲು ಹೊರಟಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಡಿ. 25ರಂದು ನೋಯ್ಡಾದಲ್ಲಿ ದಿಲ್ಲಿ ಮೆಟ್ರೋ ರೈಲು ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಈ ಸಮಾರಂಭದಲ್ಲಿ ಭಾಗಿಯಾಗುವುದಾಗಿ ಘೋಷಿಸಿರುವ ಯೋಗಿ, ಸಮಾರಂಭದ ಅನಂತರ ನೋಯ್ಡಾದಲ್ಲಿ ಕೆಲವು ಕಾರ್ಯಕ್ರಮಗಳಲ್ಲೂ ಭಾಗಿಯಾಗುವುದಾಗಿ ತಿಳಿಸಿದ್ದಾರೆ. ಇದು, ಅಲ್ಲಿನ ಸಂಪ್ರದಾಯಸ್ಥರಲ್ಲಿ ಚರ್ಚೆಗೆ ಗ್ರಾಸವಾಗಿದ್ದರೆ, ಬಿಜೆಪಿ ಮಾತ್ರ ಮೂಢನಂಬಿಕೆಗಳನ್ನು ಸುಳ್ಳೆಂಬುದನ್ನು ಸಾರಲು ಯೋಗಿ ಈ ಪ್ರಯತ್ನ ಮಾಡುತ್ತಿದ್ದಾರೆಂದು ಸಮರ್ಥನೆ ನೀಡಿದೆ. ಯೋಗಿ ಅವರ ಈ ಹೆಜ್ಜೆ ಕುತೂಹಲ ಹುಟ್ಟಿಸಿರುವುದಂತೂ ನಿಜ.