ವಿರಾರ್‌-ನಲಸೋಪರ ಕರ್ನಾಟಕ ಸಂಸ್ಥೆಯ 13ನೇ ವಾರ್ಷಿಕೋತ್ಸವ ಸಂಭ್ರಮ


Team Udayavani, Feb 9, 2018, 3:49 PM IST

0702mum02.jpg

ವಿರಾರ್‌: ನಮ್ಮಲ್ಲಿ ಪ್ರತಿಭೆಗಳಿದ್ದರೂ ಅದನ್ನು ಪ್ರದರ್ಶಿಸುವ ಅವಕಾಶ ವಿರಳವಾಗಿತ್ತು. ಅಂದಿನವರ ನೋವಿನ ಧ್ವನಿ ಸಂಘಟನಾತ್ಮಕ ರೂಪ ತಳೆದು ಕಲಾ ವಿಕಾಸನಕ್ಕೆ ನಾಂದಿಯಾಯಿತು. ತಾಯಂದಿರ ನಟನೆಯನ್ನು ಮಕ್ಕಳೂ, ಮಕ್ಕಳ ನೃತ್ಯಗಳನ್ನು ತಾಯಂದಿರು ಮೊಬೈಲ್‌ನಲ್ಲಿ ಸೆರೆ ಹಿಡಿಯುವ ದೃಶ್ಯ ಆನಂದಮಯವಾಗಿತ್ತು. ಕರ್ನಾಟಕದ ಬಹು ಸಂಸ್ಕೃತಿಯ ಕಲೆಯನ್ನು ಇಚ್ಛಾಶಕ್ತಿಯೊಂದಿಗೆ ಭದ್ರಪಡಿಸೋಣ ಎಂದು ವಿರಾರ್‌-ನಲಸೋಪರ ಕರ್ನಾಟಕ ಸಂಸ್ಥೆಯ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಅವರು ನುಡಿದರು.

ಫೆ. 4 ರಂದು ವಿರಾರ್‌ ಪಶ್ಚಿಮದ ಹಳೆ ವಿವಾ ಕಾಲೇಜು ಸಭಾಗೃಹದಲ್ಲಿ ವಿರಾರ್‌ ನಲಸೋಪರ ಕರ್ನಾಟಕ ಸಂಸ್ಥೆಯ 13ನೇ ವಾರ್ಷಿಕೋತ್ಸವ, ಸಮ್ಮಾನ, ಸಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಇವರು, ವೈಯಕ್ತಿಕವಾಗಿ ಸಾಧ್ಯವಾಗದ ಕಾರ್ಯ ಸಂಘಟನೆಯಿಂದ ಪೂರ್ಣಗೊಳಿಸಬಹುದು ಎಂಬುವುದಕ್ಕೆ ಇಂದಿನ ದಟ್ಟ ಜನ ಸಂದಣಿಯ ತುಳು-ಕನ್ನಡಿಗರು ಸಾಭೀತುಪಡಿಸಿದ್ದಾರೆ. ನಿಮ್ಮ ಯಾವುದೇ ಕಷ್ಟ ಕಾರ್ಪಣ್ಯಗಳಿಗೆ ಜತೆ ನಿಂತು ಸಹಕರಿಸುತ್ತೇನೆ ಎಂದರು.

ವಸಾಯಿ ತಾಲೂಕು ಹೊಟೇಲ್‌ ಅಸೋಸಿಯೇಶನ್‌ ಕಾರ್ಯದರ್ಶಿ ನಾಗರಾಜ ಶೆಟ್ಟಿ ಅವರು ಮಾತನಾಡಿ, ಸದಸ್ಯ ಸಂಪತ್ತು ಸಂಘಟನೆಯ ಅಭಿವೃದ್ಧಿಯ ದ್ಯೋತಕವಾಗಿದೆ. ಅರ್ಹರನ್ನು ಸಮ್ಮಾನಿಸಿ ಸಾಮಾಜಿಕ ಸೇವಾಕರ್ತರಿಗೆ ಸ್ಫೂರ್ತಿಯನ್ನು ಕಲ್ಪಿಸಬೇಕು ಎಂದು ನುಡಿದರು.

ಕಲಾಪೋಷಕಿ, ಉದ್ಯಮಿ ಶಾರದಾ ಸೂರು ಕರ್ಕೇರ ಅವರು ಮಾತನಾಡಿ, ಕರ್ನಾಟಕ ಸಂಸ್ಥೆಯಲ್ಲಿ ಜಾತಿಗಳ ಅಡ್ಡಗೋಡೆಗಳನ್ನು ತೊರೆದು ಸಮಾನ ಮನಸ್ಕರಾಗಿ ದುಡಿಯಬೇಕು. ತವರೂರ ಸಂಸ್ಕೃತಿಯನ್ನು ಪ್ರದರ್ಶಿಸಿದ ಕರ್ನಾಟಕ ಸಂಸ್ಥೆಯ ಚಟುವಟಿಕೆಗಳು ನಿರಂತರವಾಗಿ ಸಾಗಲಿ ಎಂದರು.
ಇದೇ ಸಂದರ್ಭದಲ್ಲಿ ವಸಾಯಿ-ವಿರಾರ್‌ ನಗರ ಪಾಲಿಕೆಯ ಮೇಯರ್‌ ರೂಪೇಶ್‌ ಜಾಧವ್‌, ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷೆಯರಾದ ಶುಭಾ ಸತೀಶ್‌ ಶೆಟ್ಟಿ, ಸಹನಿ ವಾಮನ್‌ ಶೆಟ್ಟಿ ಅವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿದರು.
ಸಮಾಜ ಸೇವಕ ರಾಜೀವಿ ನಾನಾ ಪಾಟೀಲ್‌ ಮಾತನಾಡಿ, ಸಾಂಸ್ಕೃತಿಕ ಚಟುವಟಿಕೆಯೊಂದಿಗೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸಬೇಕು. ಮನೆ, ಕಚೇರಿ ಹಾಗೂ ಹೊಟೇಲ್‌ಗ‌ಳನ್ನು ಶುಚಿಗೊಳಿಸುವಂತೆ ಹಾಗೂ  ಪರಿಸರದ ನೈರ್ಮಲ್ಯದ ಬಗ್ಗೆ ಗಮನ ನೀಡುವಂತೆ ವಿನಂತಿಸಿದರು.

ವೇದಿಕೆಯಲ್ಲಿ ಮಾಜಿ ಅಧ್ಯಕ್ಷ ಲಯನ್‌ ಶಂಕರ್‌ ಕೆ. ಟಿ., ಉಪಾಧ್ಯಕ್ಷ ರವಿ ಶೆಟ್ಟಿ ಕಿಲ್ಪಾಡಿ, ಗೌರವ ಕೋಶಾಧಿಕಾರಿ ವಾಮನ್‌ ಎನ್‌. ಸುವರ್ಣ, ಜತೆ ಕೋಶಾಧಿಕಾರಿ ಬಾಲಕೃಷ್ಣ ಎ. ಕೋಟ್ಯಾನ್‌, ವಿಶ್ವಸ್ಥ ಮಂಡಳಿಯ ಕಾರ್ಯಾಧ್ಯಕ್ಷ ಜಗನ್ನಾಥ ರೈ, ಪದಾಧಿಕಾರಿಗಳಾದ ಮೋಹನ್‌ದಾಸ್‌ ಬಿ. ಹೆಗ್ಡೆ ಕುಂಠಿನಿ, ಯಶವಂತ್‌ ಸಾಲ್ಯಾನ್‌, ಸರೋಜಾ ಮೂಲಿಮನಿ, ಶಶಿಕಾಂತ್‌ ಸುವರ್ಣ, ಪ್ರವೀಣ್‌ ಶೆಟ್ಟಿ ಕಣಂಜಾರು, ಶುಭಾ ಎಸ್‌. ಶೆಟ್ಟಿ, ಯಶೋದಾ ಕೋಟ್ಯಾನ್‌, ದೇವಕಿ ಎಸ್‌. ಕರ್ಕೇರ, ಶಕುಂತಳಾ ಮೆಂಡನ್‌, ಶೋಭಾ ಸುವರ್ಣ, ಮಲ್ಲಿಕಾ ಪೂಜಾರಿ, ಅರುಣ ಕೆ. ಹೆಗ್ಡೆ, ಚಂದ್ರಕಲಾ ಶೆಟ್ಟಿ, ನಿತೇಶ್‌ ಮೆಂಡನ್‌, ಪ್ರತೀಕ್‌ ಎಸ್‌. ಕರ್ಕೇರ, ಗಣೇಶ್‌ ಸುವರ್ಣ, ಅರುಣ ಕೆ. ಶೆಟ್ಟಿ ಕೊಡ್ಲಾಡಿ, ದಯಾನಂದ ಶೆಟ್ಟಿ, ಉಮೇಶ್‌ ಕೋಟ್ಯಾನ್‌, ದಯಾನಂದ ಶೆಟ್ಟಿ ಶಿರಿಯಾ ಮೊದಲಾದವರು  ಸಹಕರಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮವಾಗಿ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ, ಮಹಿಳಾ ಸದಸ್ಯೆಯರಿಂದ ಕಿರು ನಾಟಕ, ನಾದ ಲಹರಿ ಹೇಮಚಂದ್ರ ಎರ್ಮಾಳ್‌ ತಂಡದವರಿಂದ ಭಕ್ತಿ ರಸಮಂಜರಿ, ಸದಸ್ಯರುಗಳಿಂದ ಲೇಖಕ ನಾಗರಾಜ ಗುರುಪುರ ರಚಿಸಿರುವ ಎಂಕ್‌ ಪುರ್ಸೊತ್ತಿಜ್ಜಿ ತುಳು ನಾಟಕವು ರಹೀಂ ಸಚ್ಚರೀಪೇಟೆ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 

ಸಾಂಪ್ರದಾಯಿಕ ಮೌಲ್ಯಗಳಿಂದ ಕೂಡಿದ, ಸಂಘಟನಾತ್ಮಕ ವಾತಾವರಣದಲ್ಲಿ ನಮ್ಮ ಸಂಸ್ಥೆಯ 13 ವರ್ಷ ಯಶಸ್ವಿಯಾಗಿ ಪೂರೈಸಿದೆ. ಶೈಕ್ಷಣಿಕ, ವೈದ್ಯಕೀಯ, ಆರ್ಥಿಕ, ಸಾಂಸ್ಕೃತಿಕವಾಗಿ ಸಹಾಯ ಯಾಚಿಸಿದವರಿಗೆ ನೆರವು ನೀಡಿ ಸಹಕರಿಸಿದೆ. ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಜಗನ್ನಾಥ ರೈ, ಲಯನ್‌ ಶಂಕರ್‌ ಕೆ. ಟಿ. ಅವರ ಸಲಹೆ-ಸೂಚನೆಯೊಂದಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಶಿಕ್ಷಣ ಸಮಿತಿ, ಯುವ ವಿಭಾಗ, ಪೂಜಾ ಸಮಿತಿ, ನಿಧಿ ಸಂಗ್ರಹ ಸಮಿತಿಯವರ ಅವಿಶ್ರಾಂತ ಶ್ರಮ ಹಾಗೂ ತುಳು-ಕನ್ನಡಿಗರ ಸಹಕಾರಕ್ಕೆ ಮನದಾಳದ ಕೃತಜ್ಞತೆಗಳು 
– ಸದಾಶಿವ ಎ. ಕರ್ಕೇರ (ಅಧ್ಯಕ್ಷರು : ವಿರಾರ್‌-ನಲಸೋಪರ ಕರ್ನಾಟಕ ಸಂಸ್ಥೆ).

ಸಂಸ್ಥೆಯ ಗೌರವಾಧ್ಯಕ್ಷ ವಿರಾರ್‌ ಶಂಕರ್‌ ಶೆಟ್ಟಿ ಅವರ ಮಾರ್ಗದರ್ಶನ ಹಾಗೂ ಸಲಹೆಯಿಂದ ನಗರ ಸೇವಕನಾಗಿ ಚುನಾಯಿತನಾದೆ. ಅವರು ಸಂಘ-ಸಂಸ್ಥೆಗಳಿಗೆ ನೀಡಿದ ಕೊಡುಗೆ ಅಪಾರವಾಗಿದ್ದು, ಅನುಭವ,  ಪ್ರೇರಣೆ, ಸಂಸ್ಕಾರಗಳಿಂದ ನಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಜಾಗೃತಗೊಳ್ಳುತ್ತದೆ. ಬಿಡುವಿನ ಸಮಯವನ್ನು ಸಾಮಾಜಿಕ ಚಟುವಟಿಕೆಗಳಿಗೆ ಮೀಸಲಿಟ್ಟು ಸಂಘಟನೆಯನ್ನು ಬಲಪಡಿಸಬೇಕು 
– ಅರವಿಂದ ಶೆಟ್ಟಿ (ನಗರ ಸೇವಕರು:  ಮೀರಾ-ಭಾಯಂದರ್‌ 
ಮಹಾನಗರ ಪಾಲಿಕೆ).

ಚಿತ್ರ-ವರದಿ : ರಮೇಶ್‌ ಅಮೀನ್‌

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.