ಆಧಾರಿಕಾ ಸಮಾಜ ವಿಕಾಸ್ ಸಂಸ್ಥೆಗೆ ರಾಜ್ಯಪಾಲರ ಭೇಟಿ: ಸಂವಹನ
Team Udayavani, Feb 21, 2021, 12:38 PM IST
ಮುಂಬಯಿ, ಫೆ. 20: ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಫೆ. 19ರಂದು ಕಾಂದಿವಲಿಯ ಮಹಾವೀರ ನಗರದ ಆಧಾರಿಕಾ ಸಮಾಜ ವಿಕಾಸ್ ಸಂಸ್ಥೆಗೆ ಭೇಟಿ ನೀಡಿ ಮಹಿಳಾ ಕೌಶಲ ತರಬೇತಿ ಮತ್ತು ಉದ್ಯಮಶೀಲತಾ ಕೇಂದ್ರವನ್ನು ಪರಿಶೀಲಿಸಿ ಹಾಜರಿದ್ದ ಮಹಿಳೆಯರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭ ಮಾತನಾಡಿದ ರಾಜ್ಯಪಾಲರು, ತಾಯಿಯ ಶಕ್ತಿಯೇ ದೊಡ್ಡ ಶಕ್ತಿ. ಅಪಾರ ಕಷ್ಟಗಳನ್ನು ಸಹಿಸಿಕೊಳ್ಳುವ ಮೂಲಕ, ತಾಯಿಯ ಶಕ್ತಿಯು ಪ್ರಪಂಚವನ್ನು ಮುನ್ನಡೆಸುತ್ತದೆ. ಇಂದು ಮಹಿಳಾ ಅಭಿವೃದ್ಧಿಗೆ ಮುದ್ರಾ, ಸ್ಟಾರ್ಟ್ಅಪ್, ಪ್ರೈಮ್ ಸ್ಕಿಲ್ ಡೆವಲಪೆ¾ಂಟ್ ಮುಂತಾದ ವಿವಿಧ ಯೋಜನೆಗಳು ಲಭ್ಯವಿದೆ. ಮಹಿಳೆಯರು ಈ ಯೋಜನೆಗಳ ಲಾಭವನ್ನು ಪಡೆದುಕೊಂಡು ತಮ್ಮನ್ನು ತಾವು ಉನ್ನತೀಕರಿಸಬೇಕು. ತಮ್ಮ ಜೀವನೋಪಾಯಕ್ಕಾಗಿ ಮಾತ್ರವಲ್ಲ ಇತರ ಮಹಿಳೆಯರನ್ನು ಮುಂದೆ ತರಬೇಕೆಂದು ರಾಜ್ಯಪಾಲರು ಮನವಿ ಮಾಡಿದರು.
ಚಾಲಕ ತರಬೇತಿ, ಬ್ಯೂಟಿ ಪಾರ್ಲರ್ ಕೋರ್ಸ್, ಹೊಲಿಗೆ ಕೆಲಸ ಇತ್ಯಾದಿಗಳನ್ನು ಪೂರೈಸುವ ಮೂಲಕ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಪಡೆದ ಮಹಿಳೆಯರನ್ನು ರಾಜ್ಯಪಾಲರು ಸಮ್ಮಾನಿಸಿದರು. ಸಂಸದ ಗೋಪಾಲ್ ಶೆಟ್ಟಿ, ಶಾಸಕ ಮನೀಷಾ ಚೌಧರಿ, ಆಧರಿಕ ಸಮಾಜದ ನಿರ್ದೇಶಕ ವಿಕಾಸ್ ಸಂಸ್ಥಾ, ರುಚಿ ಮಾನೆ, ನಗರ ಸೇವಕಿ ಬಿನಾ ದೋಶಿ, ಸ್ತ್ರೀರೋಗತಜ್ಞ ಡಾ| ರನ್ನಾ ದೋಶಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Raichur; ಮತದಾನ ಕೇಂದ್ರದಲ್ಲಿ ಕೇಸರಿ ಶಾಲು- ಹಿಜಾಬ್ ಗಲಾಟೆ; ಪೊಲೀಸರೊಂದಿಗೆ ಮಾತಿನ ಚಕಮಕಿ
Met Gala 2024: ಇವೆಂಟ್ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್ ಫೇಕ್ ಫೋಟೋ ವೈರಲ್
BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ
Encounter: ಜಮ್ಮು – ಕಾಶ್ಮೀರದಲ್ಲಿ ಎನ್ಕೌಂಟರ್… ಮೂವರು ಭಯೋತ್ಪಾದಕರು ಹತ
Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ