ಅಧ್ಯಕ್ಷರಾಗಿ ಗುರುರಾಜ ಎಸ್. ನಾಯಕ್ ಪುನರಾಯ್ಕೆ
Team Udayavani, Mar 28, 2021, 11:43 AM IST
ಮುಂಬಯಿ: ಮಾಟುಂಗ ಪೂರ್ವದ ಮುಂಬಯಿ ಕನ್ನಡ ಸಂಘದ ವಾರ್ಷಿಕ ಮಹಾಸಭೆಯು ಮಾ. 20ರಂದು ಸಂಘದ ವಾಚನಾಲಯದಲ್ಲಿ ಸಂಘದ ಅಧ್ಯಕ್ಷ ಗುರುರಾಜ ಎಸ್. ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಗೌರವ ಕಾರ್ಯದರ್ಶಿ ಸೋಮನಾಥ ಎಸ್. ಕರ್ಕೇರ ಕಳೆದ ವಾರ್ಷಿಕ ಮಹಾಸಭೆಯ ವರದಿ ವಾಚಿಸಿದರು. ಸಭೆಯಲ್ಲಿ 2019-2020ನೇ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಸರ್ವಾನುಮತದಿಂದ ಮಂಜೂರು ಮಾಡಲಾಯಿತು. 2020-2021ನೇ ಸಾಲಿಗೆ ಎಂ. ಎಂ ಕಿಸ್ತಿ ಆ್ಯಂಡ್ ಕಂಪೆನಿ ಸಿಎ ಇವರನ್ನು ಲೆಕ್ಕಪರಿಶೋಧಕರನ್ನಾಗಿ ನೇಮಿಸಲಾಯಿತು.
ಸಂಘವು ಈಗಿರುವ ಕಟ್ಟಡ ಜೂನ್ನಿಂದ ನವೀಕರಣವಾಗುತ್ತಿರುವುದರಿಂದ ಕಿರು ಸಭಾಗೃಹದ ಸಮಿತಿಯನ್ನು ರಚಿಸಬೇಕು ಎಂದು ಕಮಲಾಕ್ಷ ಸರಾಫ್ ಆಗ್ರಹಿಸಿದರು. ಇದಕ್ಕೆ ಸಭೆಯು ಅನುಮತಿ ನೀಡಿತು. ಸಭೆಯಲ್ಲಿ ಹಾಜರಿದ್ದ ನಾಗೇಶ್ ಕೆ. ಕುಂದರ್ ಅವರು ಉಪಯುಕ್ತ ಸಲಹೆ-ಸೂಚನೆ ನೀಡಿದರು. ಬಳಿಕ ಎರಡು ವರ್ಷಗಳ ಕಾಲಾವಧಿಗೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.
ಸಂಘದ ಅಧ್ಯಕ್ಷರಾಗಿ ಗುರುರಾಜ ಎಸ್. ನಾಯಕ್ ಅವರನ್ನು ಪುನರಾಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ| ಎಸ್. ಕೆ. ಭವಾನಿ, ಸೋಮನಾಥ ಎಸ್. ಕರ್ಕೇರ, ಕಮಲಾಕ್ಷ ಸರಾಫ್, ಸುಧಾಕರ ಸಿ. ಪೂಜಾರಿ, ನಾರಾಯಣ ರಾವ್, ಮಲ್ಲಿಕಾರ್ಜುನ ಬಡಿಗೇರ, ಎಸ್. ಕೆ. ಪದ್ಮನಾಭ, ಪ್ರಫುಲ್ಲಾ ರಾವ್, ಡಾ| ರಜನಿ ವಿ. ಪೈ, ನರ್ಮದಾ ಕಿಣಿ, ಶಾರದಾ ಅಂಬೆಸಂಗೆ, ಜಯಂತಿ ಸಿ. ರಾವ್, ಸುಗುಣಾ ಶೆಟ್ಟಿ, ಕವಿತಾ ಶ್ರದ್ಧಾ, ಸಂಧ್ಯಾ ಪ್ರಭು, ಪ್ರಭಾ ಸುವರ್ಣ ಅವರು ಆಯ್ಕೆಯಾದರು.
ವರದಿ ವರ್ಷದಲ್ಲಿ ಅಗಲಿದ ಸದಸ್ಯರಿಗೆ, ಹಿತೈಷಿಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್. ಕೆ. ಪದ್ಮನಾಭ ಪ್ರಾರ್ಥನೆಗೈದರು. ಕೋಶಾಧಿಕಾರಿ ಸುಧಾಕರ ಸಿ. ಪೂಜಾರಿ ವಂದಿಸಿದರು. ಸದಸ್ಯರು ಪಾಲ್ಗೊಂಡಿದ್ದರು. ಕೊನೆಯಲ್ಲಿ ಉಪಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ