“ಸೊಸೈಟಿಯ ಅಭಿವೃದ್ಧಿಗೆ ಎಲ್ಲರ ಸಹಕಾರ ಸದಾ ಇರಲಿ”
Team Udayavani, Feb 2, 2021, 8:03 PM IST
ಮುಂಬಯಿ : ರಾಮರಾಜ ಕ್ಷತ್ರಿಯ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿಯ 41ನೇ ವಾರ್ಷಿಕ ಮಹಾಸಭೆಯು ಜ. 30ರಂದು ಸಾಕಿನಾಕಾದ ಸಾಗರ್ ಪ್ಲಾಜಾ ಸಭಾಗೃಹದಲ್ಲಿ ರಾಮರಾಜ ಕ್ಷತ್ರಿಯ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ ಕೆ. ಶ್ರೀಧರ್ ಶೇರೆಗಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಸಂಸ್ಥೆಯ ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ವನ್ನು ಸೊಸೈಟಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುಧಾಕರ್ ಕೆ. ಹಾಗೂ ಸೊಸೈಟಿಯ ಪ್ರಬಂಧಕರಾದ ಜಯಂತ್ ಗಂಗೂಲಿ, ಸದಾಶಿವ ಜಿ. ಬಂಗೇರ ಅವರು ಸಭೆಯಲ್ಲಿ ಮಂಡಿಸಿದರು. ಮಹಾಸಭೆಯಲ್ಲಿ ಗ್ರಾಹಕರಿಗೆ ಶೇ. 10ರಷ್ಟು ಡಿವಿಡೆಂಟ್ ಘೋಷಿಸಲಾಯಿತು. ಲೆಕ್ಕ ಪರಿಶೋಧಕರಾಗಿ ಸಿಎ ರಮೇಶ್ ಶೆಟ್ಟಿ ಅವರನ್ನು ಹಾಗೂ ಆಂತರಿಕ ಲೆಕ್ಕಪರಿಶೋಧಕರನ್ನಾಗಿ ಕೆ. ವಿಶ್ವನಾಥ್ ಹೆಗ್ಗಡೆ, ಪ್ರಭಾಕರ್ ವಿ. ನಾಯಕ್, ಪೂರ್ಣಾನಂದ ಶೇರೆಗಾರ್ ಅವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ. ಶ್ರೀಧರ ಶೇರೆಗಾರ್ ಅವರು, ರಾಮರಾಜ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿ ಸದಸ್ಯ ಬಾಂಧವರ ಸಹಕಾರದೊಂದಿಗೆ ಉತ್ತಮ ರೀತಿಯಲ್ಲಿ ನಡೆ ಯುತ್ತಿದ್ದು, ಇನ್ನು ಮುಂದೆಯೂ ಎಲ್ಲರ ಸಹಕಾರ ಪ್ರೋತ್ಸಾಹ ಬೇಕಾಗಿದೆ ಎಂದು ತಿಳಿಸಿ, ಸಂಸ್ಥೆಯ ಪ್ರಗತಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ
ಸಲ್ಲಿಸಿ ಶುಭ ಹಾರೈಸಿದರು.
ಇದನ್ನೂ ಓದಿ:ದಾನ-ಧರ್ಮಕ್ಕೆ ಕುಕ್ಯಾನರು ಸದಾ ಸ್ಮರಣೀಯರು: ಗೋಪಾಲ್ ವೈ. ಶೆಟ್ಟಿ
ಉಪ ಕಾರ್ಯಾಧ್ಯಕ್ಷರಾದ ಬಿ. ಗಣಪತಿ, ಸದಸ್ಯರಾದ ಎನ್. ಎಸ್. ಶೇರೆಗಾರ್, ದೇವರಾಯ ಎಂ. ಶೇರೆಗಾರ್, ಆಶಾ ಶೇರೆಗಾರ್, ವೆಂಕಟೇಶ್ ಬಿಜೂರು, ಸಲಹಾ ಸಮಿತಿಯ ಜೆ. ಸುಬ್ರಾಯ ಶೇರೆಗಾರ್, ವೆಂಕಟೇಶ ಆರ್. ನಾಯಕ್, ಕೆ. ನಾರಾಯಣ್ ಶೇರೆಗಾರ್ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯ ಬಾಂಧವರು ಉಪಸ್ಥಿತರಿದ್ದರು.
ಚಿತ್ರ-ವರದಿ: ಸುಭಾಷ್ ಶಿರಿಯಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಂಟರ ಸಂಘ ಪೊವಾಯಿ ಎಸ್.ಎಂ. ಶೆಟ್ಟಿ ಶಿಕ್ಷಣ ಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ
ಸಾಧಿಸುವ ಛಲ ಬಂಟರಲ್ಲಿ ರಕ್ತಗತ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಕಲೆ, ಸಾಹಿತ್ಯ, ಸಂಸ್ಕೃತಿ ಆರಾಧಕರಾಗೋಣ: ಜ್ಯೋತಿ ಪ್ರಕಾಶ್ ಕುಂಠಿನಿ
ಮುಂಬಯಿ ಕನ್ನಡ ಪತ್ರಿಕಾರಂಗದಲ್ಲಿ ಅಪೂರ್ವ ಕಾರ್ಯಕ್ರಮ: ಜ್ಯೋತಿ ಪ್ರಕಾಶ್ ಕುಂಠಿನಿ
ದೇಶವನ್ನು ಕೃಷಿ ಪ್ರಧಾನ ರಾಷ್ಟ್ರವಾಗಿಸಿ ವಿಶ್ವಕ್ಕೆ ಮಾದರಿಯಾಗಿಸಬೇಕು: ಗೋಪಾಲ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
ವನಿತಾ ಕ್ರಿಕೆಟ್ ವಾರ್ಷಿಕ ವೇಳಾಪಟ್ಟಿ: ಭಾರತ ಆಯೋಜಿಸಲಿದೆ 4 ಸರಣಿ
ಮತ್ತಷ್ಟು ವಸ್ತುಗಳ ಜಿಎಸ್ಟಿ ಹೆಚ್ಚಳ? ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿಯ ಪರಾಮರ್ಶೆ
ಸಾಧನೆ ಆಧರಿಸಿ ಅನುದಾನ; ಕಾರ್ಯಕ್ಷಮತೆ ಆಧಾರದಲ್ಲಿ ರಾಜ್ಯಗಳಿಗೆ “ಆಯುಷ್ಮಾನ್’ ಹಣ ಬಿಡುಗಡೆ
ಮಾಪನ ಇಲಾಖೆಗೆ ಇಲ್ಲ ಕಾನೂನು ಬಲ: ತೂಕ, ಅಳತೆ ವಂಚನೆ; ಕ್ರಮ ದಂಡಕ್ಕಷ್ಟೇ ಸೀಮಿತ
ಬುಧವಾರದ ರಾಶಿ ಫಲ… : ಇಲ್ಲಿದೆ ನಿಮ್ಮ ರಾಶಿಯ ಗ್ರಹ ಗತಿ