ನೆರೂಲ್: ಮಾತಾಅಮೃತಾನಂದಮಯಿ ಅವರಿಂದ ಆಶೀರ್ವಚನ
Team Udayavani, Mar 5, 2019, 5:09 PM IST
ನವಿಮುಂಬಯಿ: ಮಾತಾ ಶ್ರೀ ಅಮೃತಾನಂದಮಯಿ ಮಠದ ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರು ಮಾ. 4ರಂದು ನಗರಕ್ಕೆ ಆಗಮಿಸಿದ್ದು, ಅವರನ್ನು ಭವ್ಯವಾಗಿ ಸ್ವಾಗತಿಸಲಾಯಿತು.
ಮಾ. 4ರಂದು ಮುಂಜಾನೆ 6ರಿಂದ ಲಲಿತ ಸಹಸ್ರನಾಮಾರ್ಚನೆ ಕಾರ್ಯಕ್ರಮ ನಡೆಯಿತು. ಅಲ್ಲದೆ ಧ್ಯಾನ, ಪ್ರವಚನ,, ಭಜನೆ ಇನ್ನಿತರ ಕಾರ್ಯಕ್ರಮಗಳು ನೆರವೇರಿದವು. ಮಾ. 5ರಂದು ನೆರೂಲ್ ಪಶ್ಚಿಮದ ಮಾತಾ ಅಮೃತಾನಂದಮಯಿ ಮಠದ 24ನೇ ವಾರ್ಷಿಕ ಬ್ರಹ್ಮಸ್ಥಾನ ಮಹೋತ್ಸವ ಸಂಭ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಲಿದ್ದಾರೆ. ಎರಡು ದಿನಗಳ ಕಾಲ ಬೆಳಗ್ಗೆ 11ರಿಂದ ಮಾತಾ ಅಮೃತಾನಂದಮಯಿ ಇವರಿಂದ ಪ್ರವಚನ, ಭಜನೆ, ಧ್ಯಾನ ಹಾಗೂ ದರ್ಶನ ಇನ್ನಿತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಾನವೀಯ ನೆಲೆಯಲ್ಲಿ ಕಾರ್ಯ
ನಿರ್ವಹಿಸುತ್ತಿರುವ ಮಾತಾ ಅಮೃತಾನಂದಮಯಿ ಮಠವು ದೇಶದಾದ್ಯಂತ ಸಮಾಜಪರ ಕಾರ್ಯಕ್ರಮಗಳಲ್ಲಿ ತೊಡಗಿದ್ದು, ನೆರೂಲ್ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತಿದೆ.
ಬ್ರಹ್ಮಚಾರಿ ಅವ್ಯಮೃತಾ ಚೈತನ್ಯ ಅವರ ನೇತೃತ್ವದಲ್ಲಿ 24ನೇ ವಾರ್ಷಿಕ ಬ್ರಹ್ಮಸ್ಥಾನ ಮಹೋತ್ಸವವು ಜರಗುತ್ತಿದ್ದು, ಸುಮಾರು 50 ಸಾವಿರಕ್ಕೂ ಅಧಿಕ ಭಕ್ತಾದಿಗಳು ಎರಡು ದಿನಗಳ ಕಾಲ ಆಶೀರ್ವಚನ ಪಡೆಯಲಿದ್ದಾರೆ. ಭಕ್ತಾದಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳನ್ನು ಮಾಡಲಾಗಿದ್ದು, ಅಮೃತ ಕಾರ್ಯಕರ್ತರು ಸಹಕರಿಸುತ್ತಿದ್ದಾರೆ. ಆಸ್ಪತ್ರೆ, ಶಾಲೆ ಇನ್ನಿತರ ಸೇವಾ ಸಂಸ್ಥೆಗಳನ್ನು ಸ್ಥಾಪಿಸಿ ಅದರ ಮುಖಾಂತರ ಸಮಾಜ ಸೇವೆಯನ್ನು ಗೈಯು ತ್ತಿರುವ ಈ ಸಂಸ್ಥೆಯು ಸಾವಿರಾರು ನಿರ್ಗತಿಕರಿಗೆ ಮನೆ, ಮಹಿಳಾ ಸಬಲೀಕರಣ, ವೈದ್ಯಕೀಯ ನೆರವು ಇನ್ನಿತರ ನೆಲೆಗಳಲ್ಲಿ ಸಹಕರಿಸುತ್ತಿದೆ.