ಗೆಳೆಯರು ಹಳೆ ವಿದ್ಯಾರ್ಥಿ ಬಳಗ ಮುಂಬಯಿ ವತಿಯಿಂದ ವಿಹಾರಕೂಟ
Team Udayavani, Jul 8, 2018, 4:45 PM IST
ಮುಂಬಯಿ: ನಗರದಲ್ಲಿ ಕನ್ನಡ ಮಾದ್ಯಮದ್ಲಲ್ಲಿ ಒಟ್ಟಿಗೆ ಕಲಿತು ಅನಂತರ ಇತರ ಕಾಲೇಜುಗಳಿಗೆ ಹೋಗಿರುವ ಮಿತ್ರರೆಲ್ಲ ಒಂದಾಗಿ ಜು. 1 ರಂದು ಗೆಳೆಯರು ಹಳೆ ವಿದ್ಯಾರ್ಥಿ ಬಳಗ ಮುಂಬಯಿ ವತಿಯಿಂದ ವಿಹಾರಕೂಟವನ್ನು ವಿರಾರ್ ಕಲ್ಯಾಣಿ ರೆಸಾರ್ಟ್ನಲ್ಲಿ ಆಯೋಜಿಸಲಾಗಿತ್ತು.
ವಿಹಾರ ಕೂಟದ ಕಾರ್ಯಕ್ರಮದಲ್ಲಿ ಮುಂಬಯಿಯ ಕನ್ನಡ ಭವನ ಜೂನಿಯರ್ ಕಾಲೇಜು, ಸಿದ್ಧಾರ್ಥ್ ಕಾಲೇಜು, ಸೋಮಯ್ನಾ ಕಾಲೇಜು, ಬಿಎಸ್ ಕಾಲೇಜು, ಅಂಜುಮನ್ ಇಸ್ಲಾಂ ಕಾಲೇಜು, ಕಾಲ್ಸಾ ಕಾಲೇಜು ಇನ್ನಿತರ ಕಾಲೇಜುಗಳ ಹಳೆ ವಿದ್ಯಾರ್ಥಿಗಳೆಲ್ಲ ವಿಹಾರಕೂಟದಲ್ಲಿ ಪಾಲ್ಗೊಂಡಿದ್ದರು.
ಸುಮಾರು 80 ಮಂದಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಆಟೋಟ ಸ್ಪರ್ಧೆ ಹಾಗು ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಯಶಸ್ಸಿಗೆ ಪದ್ಮನಾಭ ಸಸಿಹಿತ್ಲು, ಮೋಹನ್ ಮಾರ್ನಾಡ್, ಶಿವಾನಂದ್ ಹರೀಶ್ ಪೂಜಾರಿ, ಅರ್. ಕೆ. ಶೆಟ್ಟಿ, ಚಂದ್ರಶೇಖರ್, ಮುರಳಿ, ಸರೋಜಿನಿ, ವಸಂತಿ, ರಘು ಮೊಲಿ ಸಹಕರಿಸಿದರು. ಪದ್ಮನಾಭ ಸಸಿಹಿತ್ಲು ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ