ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ


Team Udayavani, May 18, 2022, 1:31 PM IST

ನೀರಿನ ಸಮಸ್ಯೆ ಇದ್ದರೂ ಡೆವಲಪರ್‌ಗಾಗಿ ನೀರು ಕಾಯ್ದಿರಿಸಿದ ಸರಕಾರ

ನವಿಮುಂಬಯಿ: ಪನ್ವೇಲ್‌ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ  ನೀರಿನ ಸಮಸ್ಯೆ ತೀವ್ರ ಸ್ವರೂಪ ಪಡೆದು ಕೊಂಡಿರುವಾಗಲೇ ಶಿರವಳ್ಳಿ ಗ್ರಾ.ಪಂ. ವ್ಯಾಪ್ತಿಯ ಮೋರ್ಬೆ ಅಣೆಕಟ್ಟಿನ ನೀರನ್ನು ಓರ್ವ ಡೆವಲಪರ್‌ಗಾಗಿ ಸರಕಾರ ಮೀಸಲಿಟ್ಟಿರುವುದು ಬೆಳಕಿಗೆ ಬಂದಿದೆ.

ಈ ಅಣೆಕಟ್ಟಿನ ಶೇ. 80ರಷ್ಟು ನೀರನ್ನು ಮೂರು ವರ್ಷಗಳ ಹಿಂದೆ ಡೆವಲಪರ್‌ಗಾಗಿ ಕಾಯ್ದಿರಿಸಲಾಗಿದ್ದರೂ ಡೆವಲಪರ್‌ ಮಾತ್ರ ನಿರ್ಮಾಣ ಯೋಜನೆಯ ಒಂದು ಇಟ್ಟಿಗೆಯನ್ನೂ ಹಾಕಿಲ್ಲ. ಆದರೆ ಆತನಿಗಾಗಿ ಸರಕಾರ ನೀರು ಕಾಯ್ದಿರಿಸಿದ್ದರಿಂದ ಈ ಭಾಗದ 30 ಗ್ರಾಮಗಳ ಜನರು ದಾಹದಿಂದ ನರಳುತ್ತಿರುವುದು ಕಂಡುಬಂದಿದೆ.

ಪನ್ವೇಲ್‌ ಪಂ. ಸಮಿತಿಯ ನೀರು ಸರಬರಾಜು ವಿಭಾಗವು ಪನ್ವೇಲ್‌ನಲ್ಲಿ ಜಲಜೀವನ್‌ ಮಿಷನ್‌ ಅಡಿಯಲ್ಲಿ ಎಲ್ಲ  ಮನೆಗಳಿಗೆ ಕೊಳವೆ ನೀರಿನ ಯೋಜನೆ ಒದಗಿಸಲು ಸಮೀಕ್ಷೆ ನಡೆಸುತ್ತಿದೆ. ತಾಲೂಕಿನ 120 ಗ್ರಾಮಗಳ ಪೈಕಿ 90 ಗ್ರಾಮಗಳಲ್ಲಿ ಯಶ್‌ ಕನ್ಸಲ್‌ಟೆನ್ಸಿ ಸಮೀಕ್ಷೆ ನಡೆಸಿದೆ. ಈ ಗ್ರಾಮಗಳಿಗೆ ಸುಮಾರು 40 ಮಿಲಿಯನ್‌ ಲೀ. ನೀರು ಬೇಕಾಗಲಿದ್ದು, ಇದಕ್ಕಾಗಿ 82 ಕೋ. ರೂ. ವೆಚ್ಚವಾಗಲಿದೆ. ಈ 40 ಮಿಲಿಯನ್‌ ಲೀಟರ್‌ ನೀರನ್ನು ಎಲ್ಲಿಂದ ತರುವುದು ಎಂಬುದು ಆಡಳಿತದ ಮುಂದಿರುವ ಪ್ರಶ್ನೆ.

ಸುಮಾರು ಮೂರು ವರ್ಷಗಳ ಹಿಂದೆ ಖಾಸಗಿ ಡೆವಲಪರ್‌ ಅಣೆಕಟ್ಟಿನಲ್ಲಿ  ಶೇ. 80ರಷ್ಟು ನೀರನ್ನು ಕಾಯ್ದಿರಿಸಿದ್ದರು. ಅದರಂತೆ ಈ ಡೆವಲಪರ್‌ನ ಅಭಿವೃದ್ಧಿ ಯೋಜನೆಗೆ ಈ ಅಣೆಕಟ್ಟಿನಿಂದ ಶೇ. 80ರಷ್ಟು ನೀರನ್ನು ಪಡೆಯಲು ಸರಕಾರ ಅನುಮತಿ ನೀಡಿದೆ. ಗಮನಾರ್ಹ ವಿಷ ಯವೆಂದರೆ ನಿರ್ಮಾಣ ಯೋಜನೆಗೆ ಸಿಡ್ಕೊದಿಂದ ಇನ್ನೂ ಅನುಮೋದನೆ ಪಡೆಯದ ಡೆವಲಪರ್‌ಗೆ ಸರಕಾರವು ನೀರು ಮೀಸಲಾತಿಯ ಅನುಮತಿಯನ್ನು 3 ವರ್ಷಗಳ ಹಿಂದೆ ನೀಡಿದೆ.

ಡೆವಲಪರ್ಸ್‌ಗಾಗಿ ನೀರು ಕಾಯ್ದಿರಿಸಲು ಅರ್ಜಿ :

1974ರಲ್ಲಿ ಪನ್ವೇಲ್‌ ತಾಲೂಕಿನ ಶಿರ್ವಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ  ಗರ್ಮಲ್‌ ಮೋರ್ಬೆ ಅಣೆಕಟ್ಟು  ನಿರ್ಮಿಸಲಾಯಿತು. ಈ ಭಾಗದಲ್ಲಿ ರೈತರಿಗೆ ನೀರು ಪೂರೈಸಲು ಅಣೆಕಟ್ಟು ನಿರ್ಮಿಸಲಾಗಿದೆ. ಆದರೆ ಕಾಲಕ್ರಮೇಣ ಕೃಷಿ ಕುಸಿತದಿಂದ ಅಣೆಕಟ್ಟೆಯ ನೀರಿನ ಬಳಕೆಯೂ ಕಡಿಮೆಯಾಗಿದೆ. ಇದರ ಸದುಪಯೋಗ ಪಡೆದುಕೊಂಡು ಅಣೆ ಕಟ್ಟೆಯಿಂದ ನೀರು ಕಾಯ್ದಿರಿಸುವಂತೆ ಗ್ರಾ.ಪಂ.ನಿಂದ ಬೇಡಿಕೆ ಬಂದಿಲ್ಲ ಎಂದು ನೀರಾವರಿ ಇಲಾಖೆಗೆ ತಿಳಿಸಲಾ ಯಿತು. ಡೆವಲಪರ್ಸ್‌ ಪ್ರಾಜೆಕ್ಟ್ನಿಂದ ನೀರು ಕಾಯ್ದಿರಿಸಲು ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದೂ ತೋರಿಸ ಲಾಗಿದೆ ಎಂದು  ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಜಟಿಲವಾದ ಕುಡಿಯುವ ನೀರಿನ ಸಮಸ್ಯೆ :

ಕೃಷಿಗಿಂತ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಈಗ ಜಟಿಲವಾಗುತ್ತಿದೆ. ಈ ಪ್ರದೇಶದಲ್ಲಿ ಅಂತರ್ಜಲ ಕುಸಿದಿದ್ದು, 500 ಅಡಿ ಆಳಕ್ಕೆ ಹೋಗಿ ಕೊಳವೆಬಾವಿಗಳಲ್ಲಿ ನೀರು ಬರುತ್ತಿದೆ. ಅಂತಹ ಸಮಯದಲ್ಲಿ, ಈ ಪ್ರದೇಶದ ಅನೇಕ ಹಳ್ಳಿಗಳು ಅಣೆಕಟ್ಟಿನ ನೀರಿಗಾಗಿ ಮೊರೆ ಹೋಗಿವೆ. ಆದರೆ ಈ ನೀರು ಕಾಯ್ದಿರಿಸಿರುವುದರಿಂದ ಗ್ರಾಮಸ್ಥರಿಗೆ ಅದು ಹೇಗೆ ಸಿಗುತ್ತದೆ ಎಂಬ ಸಂದಿಗ್ಧತೆ ಎದುರಾಗಿದೆ. ಪ್ರಸ್ತುತ ಸೋರಿಕೆ ತಡೆಯಲು ಅಣೆಕಟ್ಟಿನ ದುರಸ್ತಿ ಕಾರ್ಯ ನಡೆಯುತ್ತಿದೆ ಎನ್ನುವುದು ಅಧಿಕಾರಿಗಳ ಹೇಳಿಕೆ.

ಸರಕಾರದಿಂದ ನಿರ್ಲಕ್ಷ್ಯ ಆರೋಪ :

ಶಿರವಳಿ, ಮಾವು, ವಾಳಪ್‌, ಚಿಂದ್ರನ್‌, ಮುಳುಂಗಿ, ಮೋರ್ಬೆ, ಕೊಂಡ್ಲೆ  ಮತ್ತು ಶಿರ್ವಾಳಿ ಸಹಿತ ಪನ್ವೇಲ್‌ನ 12 ವಿವಿಧ ಬುಡಕಟ್ಟು ಗ್ರಾಮಗಳಿಗೆ  ಈ ಅಣೆಕಟ್ಟಿನ ನೀರನ್ನು ಬಳಸಿಕೊಂಡು ಜಿಲ್ಲಾಡಳಿತ ನೇರವಾಗಿ ಗ್ರಾಮಕ್ಕೆ  ನೀರು ಸರಬರಾಜು ಮಾಡಬಹುದು. ಅಣೆಕಟ್ಟಿನ ಈ ನೀರನ್ನು ಓರ್ವ  ಡೆವಲಪರ್‌ಗಾಗಿ ನೀಡುವ ಬದಲು ಸುಮಾರು 30 ಹಳ್ಳಿಗಳ ದಾಹ ನೀಗಿಸಬಹುದು. ಸಂಬಂಧಪಟ್ಟ ಡೆವಲಪರ್‌ಗಳು ಯಾವುದೇ ವಸತಿ ಯೋಜನೆಯನ್ನು ಸ್ಥಾಪಿಸದಿರುವಾಗ ಅವರ ಯೋಜನೆಗಳಿಗೆ ನೀರು ನೀಡಲು ನಿರ್ಧರಿಸುವ ಮೊದಲು ಸ್ಥಳೀಯ ಗ್ರಾಮಸ್ಥರ ನೀರಿನ ಸ್ಥಿತಿಯ ಬಗ್ಗೆ ಸರಕಾರ ಏಕೆ ಕೇಳಲಿಲ್ಲ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಟಾಪ್ ನ್ಯೂಸ್

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

H. D. Deve Gowda: ಕೈ ಗ್ಯಾರಂಟಿ ಕೀಳು ಮಟ್ಟದ ರಾಜಕೀಯ

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು

Madhu Bangarappa; ಸೋಲಿನ ಭೀತಿಯಿಂದ ಪ್ರಧಾನಿ ಮೋದಿ ಕೀಳು ಮಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.