ವೈವಿಧ್ಯಕ್ಕೆ  ಸಾಕ್ಷಿಯಾದ ತುಳು ಪರ್ಬ-2018


Team Udayavani, Apr 3, 2018, 12:31 PM IST

0204mum04.jpg

ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ನೇತೃತ್ವದ ಕಲಾಜಗತ್ತು ಮುಂಬಯಿ ವತಿಯಿಂದ ಬೊಂಬಾಯಿಡ್‌ ತುಳು ಪರ್ಬ ಸಂಭ್ರಮವು ಮಾ. 29 ಮತ್ತು ಮಾ. 30 ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಎರಡು ದಿನಗಳ ಕಾಲ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದು ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

ಲಿಮ್ಕಾ ಬುಕ್‌ ಆಪ್‌ ರೆಕಾರ್ಡ್‌ ನಲ್ಲಿ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿರುವ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಇವರು ಕಲಾಜಗತ್ತು ಕಲಾ ಸಂಸ್ಥೆಯ ಮುಖೇನ ಕಳೆದ ಹಲವಾರು ವರ್ಷಗಳಿಂದ ಮುಂಬಯಿಯಲ್ಲಿ ನಾಟಕೋತ್ಸವ, ತುಳುನಾಡ ಉತ್ಸವಗಳನ್ನು ಆಯೋಜಿಸುತ್ತಾ ಬಂದವರು. ತನ್ನದೇ ಆದ ವಿಶಿಷ್ಟ ರೀತಿಯ  ಕಲಾ ಶ್ರೀಮಂತಿಕೆಯೊಂದಿಗೆ ತುಳುನಾಡ ಸಂಸ್ಕಾರ ಸಂಸ್ಕೃತಿಯ ಚಿತ್ರಣವನ್ನು ತನ್ನ ಅಮೋಘ ಪ್ರತಿಭೆಯ ಮುಖೇನ ಭಿತ್ತರಿಸಿದ ಶ್ರೇಯಸ್ಸು ವಿಜಯ ಕುಮಾರ್‌ ಶೆಟ್ಟಿ ಅವರಿಗೆ ಲಭಿಸುತ್ತದೆ.

ಪ್ರಸ್ತುತ ಡಾ| ವಿಜಯಕುಮಾರ್‌ ಶೆಟ್ಟಿ ಇವರು ನೂತನ ಪರಿಕಲ್ಪನೆ ಯೊಂದಿಗೆ ಬೊಂಬಾಯಿಡ್‌ ತುಳುಪರ್ಬ-2018 ಎಂಬ ವಿಭಿನ್ನ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮವನ್ನು ಆಯೋಜಿಸಿ ಕಲಾ ರಸಿಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ದಿನಗಳ ಸಂಭ್ರಮದಲ್ಲಿ ಮುಂಬಯಿಯ ಸುಮಾರು 500 ಕ್ಕೂ ಹೆಚ್ಚಿನ ಕಲಾವಿದರು ಒಂದೇ ವೇದಿಕೆಯಡಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿರುವುದು ಮತ್ತು  ಮಹಾನಗರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ, ಕಲಾಪೋಷಕರಿಗೆ, ಸಮಾಜಮುಖೀ ಚಿಂತಕರಿಗೆ, ಕಲಾ ಸಂಘಟರಿಗೆ ಸಮ್ಮಾನ, ಪುರಸ್ಕಾರಗಳನ್ನಿತ್ತು ಗೌರವಿಸಿರುವುದು ದಾಖಲಾರ್ಹವಾಗಿದೆ.

ಎರಡು ದಿನಗಳ ಸಂಭ್ರಮದಲ್ಲಿ ನಾಲ್ಕು ನಾಟಕ ತಂಡಗಳಿಂದ ವೈವಿಧ್ಯಮಯ ನಾಲ್ಕು ನಾಟಕಗಳು ಪ್ರದರ್ಶನಗೊಂಡು ಕಲಾಭಿಮಾನಿಗಳಿಗೆ ರಸದೌತಣವನ್ನು ನೀಡಿದಂತಾಗಿದೆ.  ವಿಜಯ ಕುಮಾರ್‌ ಶೆಟ್ಟಿ ನಿರ್ದೇಶನದಲ್ಲಿ ಕಲಾಜಗತ್ತು ಮುಂಬಯಿ ಕಲಾವಿದರಿಂದ ಪಗರಿದ ಮಂಚವು, ಮಾತ್ರವಲ್ಲದೆ 1983 ರಲ್ಲಿ ಬಂಟರ ಭವನದಲ್ಲಿ ಸುಮಾರು 10 ಪ್ರದರ್ಶನಗಳನ್ನು ಕಂಡ ವಿಜಯಕುಮಾರ್‌ ಶೆಟ್ಟಿ ಇವರು ರಚಿಸಿ, ನಿರ್ದೇಶಿಸಿರುವ ಈ ನಲ್ಕೆ ದಾಯೆ ನಾಟಕವು ಹರೀಶ್‌ ಶೆಟ್ಟಿ ಇವರ ನಿರ್ದೇಶನದಲ್ಲಿ ತುಳುಕೂಟ ಡೊಂಬಿವಲಿ ಇದರ ಕಲಾವಿದರಿಂದ ಪ್ರದರ್ಶನಗೊಂಡು ಗತ ಕಾಲದ ನೆನಪುಗಳನ್ನು ಮತ್ತೆ ಮೆಲುಕುಹಾಕಿತು.

ಅಭಿನಯ ಮಂಟಪ ಮುಂಬಯಿ ಕಲಾವಿದರಿಂದ ರವಿ ಕುಮಾರ್‌ ಕಡೆಕಾರು ರಚಿಸಿ, ಕರುಣಾಕರ ಕೆ. ಕಾಪು ಇವರ ನಿರ್ದೇಶನದಲ್ಲಿ ಪುಸೋìತ್ತಿಜ್ಜಿ ಅಲ್ಲದೆ ವಿರಾಜ್‌ ನಂದಿಕೂರು ರಚಿಸಿ, ಮನೋಹರ್‌ ಶೆಟ್ಟಿ ನಂದಳಿಕೆ ನಿರ್ದೇಶನದ ಆಯಿನ ಆಂಡ್‌ ಬುಡ್‌ª ಬುಡ್ಲೆ ನಾಟಕವು ರಂಗಮಿಲನ ನಿರೆಕರೆ ಕಲಾವಿದರಿಂದ ಪ್ರದರ್ಶನಗೊಂಡು ಪ್ರಶಂಸೆಗೆ ಪಾತ್ರವಾಯಿತು. ಅಲ್ಲದೆ ನಗರದ ವಿವಿಧ ಭಜನ ಮಂಡಳಿಗೆ ಭಜನಾ ಸ್ಪರ್ಧೆ, ಸಮೂಹ ನೃತ್ಯ ಸ್ಪರ್ಧೆಯು ನಡೆಯಿತು. ಸಮಾರಂಭದಲ್ಲಿ 2018 ನೇ ಸಾಲಿನ ತುಳುವ ಸಿರಿ ಪ್ರಶಸ್ತಿ ಪ್ರದಾನ ನಡೆಯಿತು. ಒಟ್ಟಿನಲ್ಲಿ ತುಳು ನಾಟಕ, ತೆಲಿಕೆ-ನಲಿಕೆ, ಆಟ-ಕೂಟ,  ನೃತ್ಯ-ವೈಭವ, ತುಳುವರ ಸಾಂಸ್ಕೃತಿಕ ಉತ್ಸವವನ್ನು ಸಾರಿದ ಈ ಎರಡು ದಿನಗಳ ಅಭೂತಪೂರ್ವ ಸಂಭ್ರಮಕ್ಕೆ ಸಾವಿರಾರು ಮಂದಿ ಕಲಾವಿದರು, ಕಲಾಭಿಮಾನಿಗಳು, ವಿವಿಧ ಕ್ಷೇತ್ರಗಳ ಗಣ್ಯರು ಸಾಕ್ಷಿಯಾದರು. 

ಇಂತಹ ಒಂದು ಅದ್ಭುತ ಪರಿಕಲ್ಪನೆಯ ಉತ್ಸವವನ್ನು ಆಯೋಜಿಸಿದ ಕಲಾಜಗತ್ತು ಸಂಸ್ಥೆಯ ಸರ್ವ ಸದಸ್ಯರು ಅಭಿನಂದನಾರ್ಹರು.

 ಸುಭಾಷ್‌ ಶಿರಿಯಾ

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.