ವಡಾಲ: ಶ್ರೀ ರಾಮಮಂದಿರದಲ್ಲಿ ಆಷಾಢ ಏಕಾದಶಿ ಆಚರಣೆ
Team Udayavani, Jul 6, 2017, 3:39 PM IST
ಮುಂಬಯಿ: ವಡಾಲದ ಶ್ರೀ ರಾಮಮಂದಿರದಲ್ಲಿ ಆಷಾಢ ಏಕಾದಶಿ ಆಚರಣೆಯು ಜು 4ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಮುಂಜಾನೆಯಿಂದ ಶ್ರೀ ರಾಮದೇವರು, ವಿಠಲ ರುಖುಮಾಯಿ ದೇವರಿಗೆ ವಿಶೇಷ ಪೂಜೆ, ಆರತಿ ನಡೆಯಿತು.
ಆನಂತರ ಏಕಾಹ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಗರದ ವಿರಾರ್, ವಾಶಿ, ಬದ್ಲಾಪುರ ಹಾಗೂ ಇನ್ನಿತರೆಡೆಗಳಿಂದ ಆಗಮಿಸಿದ ಭಜನ ಮಂಡಳಿಗಳು, ಸಮಾಜದ ಸಂಘ-ಸಂಸ್ಥೆಗಳ ಭಜನ ಮಂಡಳಿಗಳು ಏಕಾಹ ಭಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವು. ಶ್ರೀ ಬಾಲಾಜಿ ಭಜನ ಮಂಡಳಿ ವಸಾಯಿ ಅವರಿಂದ ರಾತ್ರಿ 8ರಿಂದ 10ರವರೆಗೆ ಭಜನ ಕಾರ್ಯಕ್ರಮ ನಡೆಯಿತು.
ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಜಿಎಸ್ಬಿ ಸಮಾಜ ಬಾಂಧವರು, ಭಕ್ತಾಭಿಮಾನಿಗಳು, ಸ್ಥಳೀಯ ಉದ್ಯಮಿಗಳು, ಸಮಾಜ ಸೇವಕರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ರಾಮಮಂದಿರದ ಆಡಳಿತ ಮಂಡಳಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?