ವಸಾಯಿ ರೋಡ್ ಜಿಎಸ್ಬಿ ಬಾಲಾಜಿ ಸೇವಾ ಸಮಿತಿ: ಕಿಟ್ ವಿತರಣೆ
Team Udayavani, Sep 1, 2021, 1:53 PM IST
ಮುಂಬಯಿ: ವಸಾಯಿ ರೋಡ್ ಜಿಎಸ್ಬಿ ಬಾಲಾಜಿ ಸೇವಾ ಸಮಿತಿ ವತಿಯಿಂದ ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ಆರ್ಥಿಕವಾಗಿ ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿ ಸಹಕರಿಸಲಾಯಿತು.
ವಸಾಯಿ ರೋಡ್, ವಸಾಯಿ ಗಾಂವ್, ನಲಸೋಪರ, ವಿರಾರ್ ಪರಿಸರದ ಜಿಎಸ್ಬಿ ಸಮಾಜದ ಹಾಗೂ ವಸಾಯಿಯಲ್ಲಿ ಇತರ ಸಮಾಜದ ಒಟ್ಟು 39 ಕುಟುಂಬಗಳಿಗೆ ತಲಾ 1,500 ರೂ. ಗಳ ದಿನಸಿ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಸಮಿತಿಯ ವತಿಯಿಂದ ಕಳೆದ 2 ತಿಂಗಳುಗಳಿಂದ ಆಹಾರದ ಕಿಟ್ಗಳನ್ನು ಸಮಿತಿಯ ಸದಸ್ಯರು ಹಾಗೂ ಹಿತೈಷಿಗಳ ಸಹಕಾರದಿಂದ ವಿತರಿಸಲಾಗುತ್ತಿದೆ. ಸಮಿತಿಯ ಆಡಳಿತ ಮಂಡಳಿಯ ಸದಸ್ಯರು, ಇತರ ಸದಸ್ಯರು ಹಾಗೂ ಜಿಎಸ್ಬಿಎಸ್ಬಿ ಪ್ರತಿಷ್ಠಾನ ನಲ ಸೊಪರ ಹಾಗೂ ಜಿಎಸ್ಬಿ ಸೇವಾ ಮಂಡಲ ವಿರಾರ್ ಇದರ ಆಡಳಿತ ಮಂಡಳಿಯ ಸದಸ್ಯರು ಕಿಟ್ಗಳನ್ನು ವಿತರಿಸಿ ಶುಭ ಹಾರೈಸಿದರು.
ಇದನ್ನೂ ಓದಿ:ಹೃದಯಾಘಾತದಿಂದ ನ್ಯಾಯಾಲಯದ ಆವರಣದಲ್ಲೇ ನಗರಸಭಾ ಸದಸ್ಯ ಸಾವು
ಬಾಲಾಜಿ ಸೇವಾ ಸಮಿತಿಯ ಆಡಳಿತ ಮಂಡಳಿಯ ಸದಸ್ಯರಾದ ದೇವೇಂದ್ರ ಭಕ್ತ, ಪುರುಷೋತ್ತಮ ಶೆಣೈ, ಲಕ್ಷ್ಮಣ್ ರಾವ್, ವಿನಾಯಕ ಪೈ, ಅರವಿಂದ ಹೊನ್ನವರ, ಮನೋಹರ್ ಶೆಣೈ, ಶ್ರೀನಿವಾಸ ಪಡಿಯಾರ್, ಶ್ರೀಧರ ಪ್ರಭು, ದೇವದಾಸ್ ಭಟ್, ಸದಾಶಿವ ನಾಯಕ್, ರಾಮಚಂದ್ರ ಹೆಗ್ಡೆ, ಜಗದೀಶ್ ಕಾಮತ್, ವಿ. ಕೆ. ಕಾಮತ್, ಅವನಿಕಾಂತ್ ಬೋರ್ಕರ್, ಮಂಜುನಾಥ ಎಸ್. ಪೈ, ಜಿಎಸ್ಬಿ ಪ್ರತಿಷ್ಠಾನ ನಲಸೋಪರ ಇದರ ಪದಾಧಿಕಾರಿ ವಿ. ಡಿ. ಕುಡ್ವ ಹಾಗೂ ಜಿಎಸ್ಬಿ ಸೇವಾ ಮಂಡಲ ವಿರಾರ್ ಇದರ ಪದಾಧಿಕಾರಿಗಳಾದ ಆಶಾ ಪ್ರಭು, ಶಾಲಿನಿ ಪೈ, ಕಸ್ತೂರಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ