ವಸಾಯಿರೋಡ್ ಬಾಲಾಜಿ ಮಂದಿರ: ಸನ್ಯಾಸ ದೀಕ್ಷೆ ಅಮೃತ ಮಹೋತ್ಸವ
Team Udayavani, Jun 12, 2019, 4:16 PM IST
ಮುಂಬಯಿ: ವಸಾಯಿ ರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್ಬಿ ಸಮಾಜದ ಬಾಲಾಜಿ ಸೇವಾ ಸಮಿತಿಯವರ ಬಾಲಾಜಿ ಮಂದಿರದಲ್ಲಿ ಜಿಎಸ್ಬಿ ಸಮಾಜದ ಗುರುವರ್ಯರಾದ ಶ್ರೀ ಕಾಶೀ ಮಠಾಧೀಶ ವೃಂದಾವನಸ್ಥ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಸನ್ಯಾಸ ದೀಕ್ಷೆ ಅಮೃತ ಮಹೋತ್ಸವ ಕಾರ್ಯಕ್ರಮವು ಜೂ. 5ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ವೇದಮೂರ್ತಿ ಗಿರಿಧರ ಭಟ್ ಅವರ ನೇತೃತ್ವದಲ್ಲಿ ವಿವಿಧ ಪೂಜಾ ವಿಧಿ-ವಿಧಾನಗಳು ನೆರವೇರಿತು.
ಈ ಸಂದರ್ಭದಲ್ಲಿ ಸಮಿತಿಯ ವರಿಂದ ಭಜನಾ ಕಾರ್ಯಕ್ರಮ ನೆರವೇರಿದವು.
ಮಂಡಳಿಯವರು ಗುರು ವರ್ಯರ ಭಜನೆಗಳನ್ನು ಹಾಡಿದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ ಪೈ, ನಿಡ್ಡೋಡಿ ಪ್ರಕಾಶ್ ಪ್ರಭು, ತಬಲಾದಲ್ಲಿ ವಿನಾಯಕ ಪೈ, ಅಮೇಯ ಪೈ, ಸತೀಶ್ ಕಾಮತ್, ಅವನಿಕಾಂತ್ ಭೋದೆಕರ್, ಪಖ್ವಾಜ್ನಲ್ಲಿ ಪ್ರಸಾದ್ ಪ್ರಭು, ಶಶಿಕಾಂತ್ ತಾಬ್ಡೆ ಹಾಗೂ ಅಶೋಕ್ ಶಿಂಧೆ ಮೊದಲಾದವರು ಸಹಕರಿಸಿದರು.
ಅಲಂಕೃತ ಗುರುವರ್ಯರ ಭಾವಚಿತ್ರಕ್ಕೆ ಮತ್ತು ಆರಾಧ್ಯ ದೇವರಾದ ವೆಂಕಟರಮಣ, ಇತರ ಪರಿವಾರ ದೇವರಿಗೆ ಮಹಾಆರತಿ ಬೆಳಗಿಸಲಾಯಿತು.
ಪೂಜಾ ಪ್ರಸಾದವನ್ನು ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್ ಮತ್ತು ಇತರ ಪದಾಧಿಕಾರಿಗಳಿಗೆ ನೀಡಲಾಯಿತು. ಲಕ್ಷ್ಮ¾ಣ್ ರಾವ್ ಅವರು ಪಂಚಕಜ್ಜಾಯ, ಪಾನಕ ಸೇವೆಯಲ್ಲಿ ದೇವೇಂದ್ರ ಭಕ್ತ, ಹಣ್ಣು ಹಂಪಲಿನ ಸೇವೆಯಲ್ಲಿ ಪ್ರಶಾಂತ್ ನಾಯಕ್, ಹಾಲಿನ ಸೇವೆಯಲ್ಲಿ ಗಣೇಶ್ ಪೈ ಪರಿವಾದವರು ಸಹಕರಿಸಿದರು.
ಅನ್ನಸಂತರ್ಪಣೆ
ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ಸಮಿತಿಯವರ ವತಿಯಿಂದ ಆಯೋಜಿಸಲಾಗಿತ್ತು.
ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗದ, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರ ಉಸ್ತುವಾರಿಯಲ್ಲಿ ಈ ಧಾರ್ಮಿಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ವಿನಾಯಕ ಎಚ್. ಪೈ ಮತ್ತು ದೇವದಾಸ್ ಭಟ್ ಅವರ ನೇತೃತ್ವದಲ್ಲಿ ಅಲಂಕರಿಸಲ್ಪಟ್ಟ ಗುರುವರ್ಯರ ಭಾವಚಿತ್ರವನ್ನೊಳಗೊಂಡ ಮಂಟಪ ಮತ್ತು ದೇವರ ಮಂಟಪ ನೆರೆದ ಭಕ್ತಾದಿಗಳನ್ನು, ನೂರಾರು ಸಭಿಕರನ್ನು ರಂಜಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ