ಮೊದಲ ಏಕದಿನ: ಲಂಕಾ ವಿರುದ್ಧ ಭಾರತಕ್ಕೆ ಸೋಲು
Team Udayavani, Dec 10, 2017, 7:32 PM IST
ಧರ್ಮಶಾಲಾ: ಕಲ್ಪಿಸಲೂ ಆಗದ ಬ್ಯಾಟಿಂಗ್ ಕುಸಿತವೊಂದಕ್ಕೆ ಸಾಕ್ಷಿಯಾದ ಭಾರತ, ಧರ್ಮಶಾಲಾದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾಕ್ಕೆ 7 ವಿಕೆಟ್ಗಳಿಂದ ಶರಣಾಗಿದೆ. ಇದರಿಂದ ಲಂಕೆಯ ಸತತ ಸೋಲಿನ ದೊಡ್ಡ ಸರಪಳಿಯೊಂದು 12 ಪಂದ್ಯಗಳ ಬಳಿಕ ಮುರಿಯಲ್ಪಟ್ಟಿತು. ಜತೆಗೆ ಭಾರತದೆದುರು ಈ ವರ್ಷ ಮೊದಲ ಜಯ ಸಾಧಿಸಿದ ಹಿರಿಮೆಗೂ ಪಾತ್ರವಾಯಿತು.
“ಸೀಮರ್ ಫ್ರೆಂಡ್ಲಿ’ ಟ್ರ್ಯಾಕ್ ಮೇಲೆ ಟಾಸ್ ಗೆದ್ದದ್ದು ಶ್ರೀಲಂಕಾಗೆ ಬಂಪರ್ ಲಾಭ ತಂದಿತ್ತಿತು. ನಾಯಕ ತಿಸರ ಪೆರೆರ ಸ್ವಲ್ಪವೂ ವಿಳಂಬಿಸದೆ ಬೌಲಿಂಗ್ ಆರಿಸಿಕೊಂಡರು. ಸುರಂಗ ಲಕ್ಮಲ್ ಆ್ಯಂಡ್ ಕಂಪೆನಿ ಟೀಮ್ ಇಂಡಿಯಾದ ಮೇಲೆ ಮುಗಿಬಿತ್ತು. ಪಟಪಟನೆ ವಿಕೆಟ್ ಉರುಳಿಸಿಕೊಳ್ಳುತ್ತಲೇ ಹೋದ ಭಾರತ 38.2 ಓವರ್ಗಳಲ್ಲಿ 112 ರನ್ನಿಗೆ ತನ್ನ ಇನ್ನಿಂಗ್ಸ್ ಮುಗಿಸಿತು. ಲಂಕೆಯ 2 ವಿಕೆಟ್ ಬೇಗನೇ ಬಿತ್ತಾದರೂ ಈ ಸಣ್ಣ ಮೊತ್ತವನ್ನು ಯಾವುದೇ ಆತಂಕವಿಲ್ಲದೆ ಹಿಂದಿಕ್ಕಿತು. 20.4 ಓವರ್ಗಳಲ್ಲಿ 3 ವಿಕೆಟಿಗೆ 114 ರನ್ ಮಾಡಿ ಗೆಲುವಿನ ಸಂಭ್ರಮ ಆಚರಿಸಿತು.
ಸ್ಕೋರ್ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ಡಿಕ್ವೆಲ್ಲ ಬಿ ಲಕ್ಮಲ್ 2
ಶಿಖರ್ ಧವನ್ ಎಲ್ಬಿಡಬ್ಲ್ಯು ಮ್ಯಾಥ್ಯೂಸ್ 0
ಶ್ರೇಯಸ್ ಅಯ್ಯರ್ ಬಿ ಪ್ರದೀಪ್ 9
ದಿನೇಶ್ ಕಾರ್ತಿಕ್ ಎಲ್ಬಿಡಬ್ಲ್ಯು ಲಕ್ಮಲ್ 0
ಮನೀಷ್ ಪಾಂಡೆ ಸಿ ಮ್ಯಾಥ್ಯೂಸ್ ಬಿ ಲಕ್ಮಲ್ 2
ಎಂ.ಎಸ್. ಧೋನಿ ಸಿ ಗುಣತಿಲಕ ಬಿ ಪೆರೆರ 65
ಹಾರ್ದಿಕ್ ಪಾಂಡ್ಯ ಸಿ ಮ್ಯಾಥ್ಯೂಸ್ ಬಿ ಪ್ರದೀಪ್ 10
ಭುವನೇಶ್ವರ್ ಕುಮಾರ್ ಸಿ ಡಿಕ್ವೆಲ್ಲ ಬಿ ಲಕ್ಮಲ್ 0
ಕುಲದೀಪ್ ಯಾದವ್ ಸ್ಟಂಪ್ಡ್ ಡಿಕ್ವೆಲ್ಲ ಬಿ ಧನಂಜಯ 19
ಜಸ್ಪ್ರೀತ್ ಬುಮ್ರಾ ಬಿ ಪತಿರಣ 0
ಯಜುವೇಂದ್ರ ಚಾಹಲ್ ಔಟಾಗದೆ 0
ಇತರ 5
ಒಟ್ಟು (38.2 ಓವರ್ಗಳಲ್ಲಿ ಆಲೌಟ್) 112
ವಿಕೆಟ್ ಪತನ: 1-0, 2-2, 3-8, 4-16, 5-16, 6-28, 7-29, 8-70, 9-87.
ಬೌಲಿಂಗ್:
ಸುರಂಗ ಲಕ್ಮಲ್ 10-4-13-4
ಏಂಜೆಲೊ ಮ್ಯಾಥ್ಯೂಸ್ 5-2-8-1
ನುವಾನ್ ಪ್ರದೀಪ್ 10-4-37-2
ತಿಸರ ಪೆರೆರ 4.2-0-29-1
ಅಖೀಲ ಧನಂಜಯ 5-2-7-1
ಸಚಿತ ಪತಿರಣ 4-1-16-1
* ಶ್ರೀಲಂಕಾ
ದನುಷ್ಕ ಗುಣತಿಲಕ ಸಿ ಧೋನಿ ಬಿ ಬುಮ್ರಾ 1
ಉಪುಲ್ ತರಂಗ ಸಿ ಧವನ್ ಬಿ ಪಾಂಡ್ಯ 49
ಲಹಿರು ತಿರಿಮನ್ನೆ ಬಿ ಭುವನೇಶ್ವರ್ 0
ಏಂಜೆಲೊ ಮ್ಯಾಥ್ಯೂಸ್ ಔಟಾಗದೆ 25
ನಿರೋಷನ್ ಡಿಕ್ವೆಲ್ಲ ಔಟಾಗದೆ 26
ಇತರ 13
ಒಟ್ಟು (20.4 ಓವರ್ಗಳಲ್ಲಿ 3 ವಿಕೆಟಿಗೆ) 114
ವಿಕೆಟ್ ಪತನ: 1-7, 2-19, 3-65.
ಬೌಲಿಂಗ್:
ಭುವನೇಶ್ವರ್ ಕುಮಾರ್ 8.4-1-42-1
ಜಸ್ಪ್ರೀತ್ ಬುಮ್ರಾ 7-1-32-1
ಹಾರ್ದಿಕ್ ಪಾಂಡ್ಯ 5-0-39-1
ಪಂದ್ಯಶ್ರೇಷ್ಠ: ಸುರಂಗ ಲಕ್ಮಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್