ವಿಶ್ವ ಹಾಕಿ ಲೀಗ್ ಫೈನಲ್: ಭಾರತಕ್ಕೆ ಕಂಚು
Team Udayavani, Dec 11, 2017, 6:00 AM IST
ಭುವನೇಶ್ವರ: ಹಾಕಿ ವಿಶ್ವ ಲೀಗ್ ಫೈನಲ್ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿದೆ. ಕಂಚಿಗಾಗಿ ನಡೆದ ಹೋರಾಟದಲ್ಲಿ ಭಾರತ 2-1 ಗೋಲುಗಳ ಅಂತರದಿಂದ ಬಲಿಷ್ಠ ಜರ್ಮನಿ ತಂಡವನ್ನು ಸೋಲಿಸಿದೆ.
ಕನ್ನಡಿಗ ಸುನೀಲ್ ತಂದುಕೊಟ್ಟ ಮುನ್ನಡೆ: ಭಾರತ ತಂಡಕ್ಕೆ ಕನ್ನಡಿಗ ಎಸ್.ವಿ.ಸುನೀಲ್ 20ನೇ ನಿಮಿಷದಲ್ಲಿ ಮೊದಲ ಗೋಲು ತಂದುಕೊಟ್ಟರು. ಇದರಿಂದ ಭಾರತ 1-0 ಅಂತರದ ಮುನ್ನಡೆ ಪಡೆಯಿತು. ಆದರೆ ಇದಾಗಿ ಒಟ್ಟು 16 ನಿಮಿಷ ಜರ್ಮನಿ ಇನ್ನಿಲ್ಲದ ಹೋರಾಟ ನಡೆಸಿತು. ಪ್ರಯತ್ನಕ್ಕೆ ತಕ್ಕ ಫಲ ಎನ್ನುವಂತೆ 36ನೇ ನಿಮಿಷದಲ್ಲಿ ಮಾರ್ಕ್ ಅಪ್ಪೆಲ್ ಗೋಲು ದಾಖಲಿಸಿಯೇ ಬಿಟ್ಟರು. ಇದರಿಂದಾಗಿ ಜರ್ಮನಿ 1-1 ಗೋಲುಗಳಿಂದ ಸಮಸಾಧಿಸಿಕೊಂಡಿತು. ಪ್ರಬಲ ಹೋರಾಟ ನಡೆಸುವ ಮುನ್ಸೂಚನೆ ನೀಡಿತು. ಇಲ್ಲಿಂದ ನಂತರ ಎರಡೂ ತಂಡಗಳು 50 ನಿಮಿಷಗಳ ತನಕ ಗೋಲಿಗಾಗಿ ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಲಿಲ್ಲ.
ಹರ್ಮನ್ ತಂದ ಜಯ: ಎರಡೂ ತಂಡಗಳ ಪ್ರಯತ್ನ ಮುಂದುವರಿಯುತ್ತಿತ್ತು. ಕೆಲವೊಂದು ಉತ್ತಮ ಅವಕಾಶಗಳನ್ನು ಭಾರತೀಯ ಆಟಗಾರರು ಕೈಚೆಲ್ಲಿದರು. ಆದರೆ ಪಂದ್ಯದ 54ನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಸಿಂಗ್ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ದಾಖಲಿಸಿದರು. ಭಾರತ ತಂಡಕ್ಕೆ 2-1 ಗೋಲುಗಳ ಮುನ್ನಡೆ ಒದಗಿಸಿದರು. ಬಳಿಕ ಗೋಲು ದಾಖಲಿಸಿ ಡ್ರಾ ಸಾಧಿಸಿಕೊಳ್ಳಲು ಜರ್ಮನಿ ನಿರಂತರ ಪ್ರಯತ್ನ ನಡೆಸಿತಾದರೂ ಕೊನೆಯ 6 ನಿಮಿಷದಲ್ಲಿ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಭಾರತ ಗೆಲುವಿನ ನಗು ಬೀರಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
ಅವ್ಯವಸ್ಥೆ… ಕಾಶಿಯಲ್ಲಿ ಕಾಲು ಸಂಕ- ಬಟ್ಟೆ ಒಗೆಯುವ ಕಲ್ಲಾಗಿದೆ ಕೆಳದಿ ಸಾಮ್ರಾಜ್ಯದ ಶಾಸನ
PU ಕಂಪ್ಯೂಟರ್ ಸೈನ್ಸ್, ಸೈಕಾಲಜಿಗೂ ಎನ್ಸಿಇಆರ್ಟಿ ಪಠ್ಯ
ಕೇರಳದಲ್ಲಿ 2 ವಾರದಲ್ಲಿ 2 ಲಕ್ಷ ಮಂದಿಗೆ ಸಾಂಕ್ರಾಮಿಕ ರೋಗ; 10 ಸಾವು
Karkala ಸಾಗರದಾಚೆಯಿಂದ ತವರಿಗೆ ಕರೆ ತಂದ ಕೃಷಿ ಪ್ರೀತಿ
Hyderabad: ನಟಿ ಪವಿತ್ರ ಜಯರಾಂ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ, ಗೆಳೆಯ ಚಂದು ಆತ್ಮಹತ್ಯೆ