ವಿಶ್ವಕಪ್ ಕ್ರಿಕೆಟ್: ಸರಕಾರದ ನಿರ್ಧಾರದಂತೆ ಭಾರತದ ಆಟ: ಶಾಸ್ತ್ರೀ
Team Udayavani, Mar 20, 2019, 12:22 PM IST
ಹೊಸದಿಲ್ಲಿ : ಪುಲ್ವಾಮಾ ಉಗ್ರ ದಾಳಿ ಮತ್ತು ಬಾಲಾಕೋಟ್ ಮೇಲಿನ ಐಎಎಫ್ ವಾಯು ದಾಳಿಯಿಂದ ತೀವ್ರಗೊಂಡಿರುವ ಭಾರತ – ಪಾಕ್ ಉದ್ವಿಗ್ನತೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಒಂದೊಮ್ಮೆ ಭಾರತ ಸರಕಾರ, 2019ರ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಭಾರತವನ್ನು ಆಡಿಸದಿರಲು ನಿರ್ಧರಿಸಿದಲ್ಲಿ ಅ ಪ್ರಕಾರ ಭಾರತ ವಿಶ್ವಕಪ್ ಕ್ರಿಕೆಟ್ ಆಡದು ಎಂದು ಭಾರತೀಯ ಕ್ರಿಕೆಟ್ ಹೆಡ್ ಕೋಚ್ ರವಿ ಶಾಸ್ತ್ರೀ ಹೇಳಿದ್ದಾರೆ.
“ಅದೇನಿದ್ದರೂ ಭಾರತ ಸರಕಾರ ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ. ಅದೊಂದು ಸೂಕ್ಷ್ಮ ವಿಷಯ; ಒಂದು ವೇಳೆ ಭಾರತ ಸರಕಾರ 2019ರ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾರತ ತಂಡವನ್ನು ಆಡಿಸದಿರಲು ನಿರ್ಧರಿಸಿದರೆ ನಾವು ಆ ನಿರ್ಧಾರದ ಪ್ರಕಾರ ನಡೆಯುತ್ತೇವೆ’ ಎಂದು ರವಿ ಶಾಸ್ತ್ರೀ ಅರು ಮಿರರ್ ನೌ ಗೆ ನೀಡಿದ ಸಂದರ್ಶನದಲ್ಲಿ ಹೇಳಿರುವುದಾಗಿ ವರದಿಯಾಗಿದೆ.