All India ಅಂತರ್ ವಿ.ವಿ.ಕಬಡ್ಡಿ ಪಂದ್ಯಾವಳಿ: ಮಂಗಳೂರು ವಿವಿ ಕ್ವಾರ್ಟರ್ ಫೈನಲಿಗೆ
Team Udayavani, Nov 24, 2023, 11:20 PM IST
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ, ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವತಿಯಿಂದ ಕಾಲೇಜಿನಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ವಿ.ವಿ. ಪುರುಷರ ಕಬಡ್ಡಿ ಪಂದ್ಯಾವಳಿಯಲ್ಲಿ ಸತತ ಎರಡನೇ ಗೆಲುವು ಸಾಧಿಸಿದ ಆತಿಥೇಯ ಮಂಗಳೂರು ವಿ.ವಿ. ಮೊದಲ ತಂಡವಾಗಿ ಕ್ವಾರ್ಟರ್ಫೈನಲಿಗೇರಿದೆ.
ಆತಿಥೇಯ ಮಂಗಳೂರು ವಿ.ವಿ. ತಂಡವು ಪುರಿ ಶ್ರೀ ಜಗನ್ನಾಥ ಸಂಸ್ಕೃತ ವಿ.ವಿ.ಯನ್ನು 54-24 ಅಂಕಗಳಿಂದ ಮಣಿಸಿದೆ. ಇನ್ನುಳಿದ ಪಂದ್ಯಗಳಲ್ಲಿ ಪಂಜಾಬ್ನ ಗುರು ಕಾಶಿ ವಿವಿ ತಂಡವು ಆಂಧ್ರಪ್ರದೇಶದ ಕಡಪದ ಯೋಗಿ ವೇಮನ ವಿ.ವಿ ತಂಡವನ್ನು 53-26 ಅಂಕಗಳಿಂದ ಸೋಲಿಸಿದೆ. ಔರಂಗಬಾದ್ನ ಡಾ| ಬಿಎಎಂ ವಿ.ವಿ. ತಂಡವು ಉತ್ತರ ಪ್ರದೇಶದ ಜೆಎನ್ಸಿ ವಿ.ವಿ ತಂಡವನ್ನು 70-40 ಅಂಕಗಳಿಂದ ಮಣಿಸಿದೆ. ಚೆನ್ನೈನ ವೇಲ್ಸ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ ತಂಡವು ಹರಿಯಾಣದ ಚೌಧರಿ ಬನ್ಸಿ ಲಾಲ್ ವಿ.ವಿ ತಂಡವನ್ನು 39-32 ಅಂಕಗಳಿಂದ ಸೋಲಿಸಿದೆ.
ಇಂದೋರ್ನ ದೇವಿ ಅಹಲ್ಯ ವಿ.ವಿ. ಮತ್ತು ಆ್ಯಡಮ್ಸ್ ವಿ.ವಿ. ಗೈರು ಹಾಜರಾದ್ದರಿಂದ ವಿಬಿಎಸ್ ಪೂರ್ವಾಂಚಲ ವಿ.ವಿ., ಹರಿಯಾಣದ ಮಹರ್ಷಿ ದಯಾನಂದ ವಿ. ವಿ. ತಂಡವು ಮುಂದಿನ ಹಂತಕ್ಕೆ ನೇರ ಪ್ರವೇಶ ಪಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Virat Kohli; ನಿವೃತ್ತಿಯ ಬಗ್ಗೆ ಮಾತನಾಡಿದ ವಿರಾಟ್..; ಫ್ಯಾನ್ಸ್ ಗೆ ಆತಂಕತಂದ ಕೊಹ್ಲಿ ಮಾತು
Head Coach; ರಾಹುಲ್ ದ್ರಾವಿಡ್ ಬಳಿಕ ಕೋಚ್ ಹುದ್ದೆ ನಿರಾಕರಿಸಿದ ಟೀಂ ಇಂಡಿಯಾ ದಿಗ್ಗಜ
Sunil Chhetri: ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ವಿದಾಯ ಹೇಳಿದ ಸುನಿಲ್ ಚೇತ್ರಿ
Haji Karam Din: 102ನೇ ವಯಸ್ಸಿನಲ್ಲೂ ಕ್ರಿಕೆಟ್ ಆಟ!
Ipl 2024: ಹೈದರಾಬಾದ್ಗೆ ಗೆಲುವು ಅನಿವಾರ್ಯ, ವಿದಾಯ ಪಂದ್ಯ ಆಡಲಿರುವ ಗುಜರಾತ್ ಟೈಟಾನ್ಸ್
MUST WATCH
ಹೊಸ ಸೇರ್ಪಡೆ
India alliance: ದಕ್ಷಿಣ ಭಾರತದಲ್ಲಿ ಇಂಡಿಯಾ ಮೈತ್ರಿಕೂಟ ಕ್ಲೀನ್ ಸ್ವೀಪ್; ಡಿಕೆಶಿ
Supreme Court: ಕೇಜ್ರಿ ಜಾಮೀನು ರದ್ದು ಕೋರಿದ್ದ ಇ.ಡಿ. ಅರ್ಜಿ ವಜಾ
Chikkaballapur: ಕೃಷಿ ಹೊಂಡದಲ್ಲಿ ಮುಳುಗಿ ಬಾಲಕ, ರಕ್ಷಣೆಗೆ ಹೋದವ ಸಾವು
Politics: ರಘುಪತಿ ಭಟ್ಟರ ಜತೆ ಮುಖಂಡರು ಮಾತನಾಡುತ್ತಾರೆ; ಬಿ. ವೈ. ರಾಘವೇಂದ್ರ
Priyanka Kharge: ಬಿಜೆಪಿ ನಾಯಕರು ಹಾಸನಕ್ಕೆ ಏಕೆ ಕಾಲಿಡುತ್ತಿಲ್ಲ; ಪ್ರಿಯಾಂಕ್ ಪ್ರಶ್ನೆ