Ashes Test ಮಳೆ ತೊಂದರೆ; ಇಂಗ್ಲೆಂಡಿಗೆ 7 ರನ್‌ ಮೊದಲ ಇನ್ನಿಂಗ್ಸ್‌  ಮುನ್ನಡೆ


Team Udayavani, Jun 19, 2023, 5:45 AM IST

Ashes Test ಮಳೆ ತೊಂದರೆ; ಇಂಗ್ಲೆಂಡಿಗೆ 7 ರನ್‌ ಮೊದಲ ಇನ್ನಿಂಗ್ಸ್‌  ಮುನ್ನಡೆ

ಬರ್ಮಿಂಗಂ: ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯ ನಡುವೆ ಇಲ್ಲಿ ನಡೆಯುತ್ತಿರುವ ಆ್ಯಶಸ್‌ ಸರಣಿಯ ಮೊದಲ ಟೆಸ್ಟ್‌ ಪಂದ್ಯಕ್ಕೆ ಮಳೆ ತೊಂದರೆ ನೀಡಿದೆ. ಮೂರನೇ ದಿನದಾಟ ಸಾಗುತ್ತಿದ್ದು ಮಳೆಯಿಂದ ಆಟ ನಿಂತಾಗ ಇಂಗ್ಲೆಂಡ್‌ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡು ವಿಕೆಟ್‌ ಕಳೆದುಕೊಂಡಿದ್ದು 28 ರನ್‌ ಗಳಿಸಿದೆ.

ಇಂಗ್ಲೆಂಡ್‌ ಈಗಾಗಲೇ 19 ರನ್‌ ಗಳಿಸಿದ ಬೆನ್‌ ಡಕೆಟ್‌ ಮತ್ತು 7 ರನ್‌ ಗಳಿಸಿದ ಜಾಕ್‌ ಕ್ರಾಲಿ ಅವರ ವಿಕೆಟನ್ನು ಕಳೆದುಕೊಂಡಿದೆ. ಓಲೀ ಪೋಪ್‌ ಮತ್ತು ಜೋ ರೂಟ್‌ ಯಾವುದೇ ರನ್‌ ಗಳಿಸದೇ ಆಡುತ್ತಿದ್ದಾರೆ. ಇಂಗ್ಲೆಂಡ್‌ ಒಟ್ಟಾರೆ 35 ರನ್‌ ಮುನ್ನಡೆಯಲ್ಲಿದೆ.

ಆಸ್ಟ್ರೇಲಿಯ ಆಲೌಟ್‌
ಈ ಮೊದಲು 5 ವಿಕೆಟಿಗೆ 311 ರನ್ನುಗಳಿಂದ ದಿನದಾಟ ಆರಂಭಿಸಿದ ಆಸ್ಟ್ರೇಲಿಯ ತಂಡವು ಸ್ಟುವರ್ಟ್‌ ಬ್ರಾಡ್‌ ಮತ್ತು ಓಲೀ ರಾಬಿನ್ಸನ್‌ ಅವರ ದಾಳಿಗೆ ಕುಸಿದು 386 ರನ್ನಿಗೆ ಆಲೌಟಾಯಿತು. ಇದರಿಂದಾಗಿ ಇಂಗ್ಲೆಂಡ್‌ ತಂಡ 7 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆಯಿತು.

ದ್ವಿತೀಯ ದಿನ ಅಜೇಯರಾಗಿ ಉಳಿದಿದ್ದ ಉಸ್ಮಾನ್‌ ಖ್ವಾಜಾ ಮತ್ತು ಅಲೆಕ್ಸ್‌ ಕ್ಯಾರಿ ಮೂರನೇ ದಿನ ಆಟ ಮುಂದುವರಿಸಿ ಉತ್ತಮ ಆಟದ ಪ್ರದರ್ಶನ ನೀಡಿದರು. ಅವರಿಬ್ಬರ ಆಟವನ್ನು ಗಮನಿಸಿದಾಗ ಆಸ್ಟ್ರೇಲಿಯ ತಂಡ ಇನ್ನಿಂಗ್ಸ್‌ ಮುನ್ನಡೆ ಗಳಿಸಬಹುದೆಂದು ಭಾವಿಸಲಾಗಿತ್ತು.

ಉತ್ತಮವಾಗಿ ಆಡುತ್ತಿದ್ದ ಕ್ಯಾರಿ ವೇಗಿ ಆ್ಯಂಡರ್ಸನ್‌ ದಾಳಿಗೆ ಕ್ಲೀನ್‌ಬೌಲ್ಡ್‌ ಆದ ಬಳಿಕ ಆಸ್ಟ್ರೇಲಿಯ ಕುಸಿಯಿತು. ಕ್ಯಾರಿ ಅವರ ವಿಕೆಟನ್ನು ಪಡೆಯುವ ಮೂಲಕ ಆ್ಯಂಡರ್ಸನ್‌ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1100 ವಿಕೆಟ್‌ ಪೂರ್ತಿಗೊಳಿಸಿದ ಸಾಧನೆ ಮಾಡಿದರು. ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ 685ನೇ ವಿಕೆಟ್‌ ಆಗಿದೆ. 700 ವಿಕೆಟ್‌ ಸಾಧಕರಾಗಲು ಅವರಿಗೆ ಇನ್ನು 15 ವಿಕೆಟ್‌ ಬೇಕಾಗಿದೆ.

ಕ್ಯಾರಿ ಮತ್ತು ಖ್ವಾಜಾ ಆರನೇ ವಿಕೆಟಿಗೆ 118 ರನ್ನುಗಳ ಜತೆಯಾಟ ನಡೆಸಿದರು. ಕ್ಯಾರಿ 66 ರನ್ನಿಗೆ ಔಟಾದರೆ ಖ್ವಾಜಾ 141 ರನ್‌ ಗಳಿಸಿ ರಾಬಿನ್ಸನ್‌ಗೆ ವಿಕೆಟ್‌ ಒಪ್ಪಿಸಿದರು. ಆಸ್ಟ್ರೇಲಿಯದ ಕೊನೆಯ ಐದು ವಿಕೆಟ್‌ಗಳು 48 ರನ್‌ ಅಂತರದಲ್ಲಿ ಉರುಳಿದವು.

ಸ್ಕೋರ್‌ ಪಟ್ಟಿ
ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್‌
8 ವಿಕೆಟಿಗೆ 393 ಡಿಕ್ಲೇರ್‌x
ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌
ಡೇವಿಡ್‌ ವಾರ್ನರ್‌ ಬಿ ಬ್ರಾಡ್‌ 9
ಉಸ್ಮಾನ್‌ ಖ್ವಾಜಾ ಬಿ ರಾಬಿನ್ಸನ್‌ 141
ಮಾರ್ನಸ್‌ ಲಬುಶೇನ್‌ ಸಿ ಬೇರ್‌ಸ್ಟೋ ಬಿ ಬ್ರಾಡ್‌ 0
ಸ್ಟೀವನ್‌ ಸ್ಮಿತ್‌ ಎಲ್‌ಬಿಡಬ್ಲ್ಯು ಬಿ ಸ್ಟೋಕ್ಸ್‌ 16
ಟ್ರ್ಯಾವಿಸ್‌ ಹೆಡ್‌ ಸಿ ಕ್ರಾಲಿ ಬಿ ಅಲಿ 50
ಕ್ಯಾಮರಾನ್‌ ಗ್ರೀನ್‌ ಬಿ ಅಲಿ 38
ಅಲೆಕ್ಸ್‌ ಕ್ಯಾರಿ ಬಿ ಆ್ಯಂಡರ್ಸನ್‌ 66
ಪ್ಯಾಟ್‌ ಕಮಿನ್ಸ್‌ ಸಿ ಸ್ಟೋಕ್ಸ್‌ ಬಿ ರಾಬಿನ್ಸನ್‌ 38
ನಥನ್‌ ಲಿಯಾನ್‌ ಸಿ ಡಕಟ್‌ ಬಿ ರಾಬಿನ್ಸನ್‌ 1
ಸ್ಕಾಟ್‌ ಬೋಲ್ಯಾಂಡ್‌ ಸಿ ಪೋಪ್‌ ಬಿ ಬ್ರಾಡ್‌ 0
ಜೋಶ್‌ ಹೇಝಲ್‌ವುಡ್‌ ಔಟಾಗದೆ 1
ಇತರ: 26
ಒಟ್ಟು (ಆಲೌಟ್‌)386
ವಿಕೆಟ್‌ ಪತನ: 1-29, 2-29, 3-67, 4-148, 5-220, 6-338, 7-372, 8-377, 9-378
ಬೌಲಿಂಗ್‌: ಸ್ಟುವರ್ಟ್‌ ಬ್ರಾಡ್‌ 23-4-68-3
ಓಲೀ ರಾಬಿನ್ಸನ್‌ 22.1-5-55-3
ಜೇಮ್ಸ್‌ ಆ್ಯಂಡರ್ಸನ್‌ 21-5-53-1
ಹ್ಯಾರಿ ಬ್ರೂಕ್‌ 3-1-5-0
ಮೊಯಿನ್‌ ಅಲಿ 33-4-147-2
ಬೆನ್‌ ಸ್ಟೋಕ್ಸ್‌ 7-0-33-0
ಜೋ ರೂಟ್‌ 7-3-15-0

ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌
ಜಾಕ್‌ ಕ್ರಾಲಿ ಸಿ ಕ್ಯಾರಿ ಬಿ ಬೋಲ್ಯಾಂಡ್‌ 7
ಬೆನ್‌ ಡಕೆಟ್‌ ಸಿ ಗ್ರೀನ್‌ ಬಿ ಕಮಿನ್ಸ್‌ 19
ಓಲೀ ಪೋಪ್‌ ಬ್ಯಾಟಿಂಗ್‌ 0
ಜೋ ರೂಟ್‌ ಬ್ಯಾಟಿಂಗ್‌ 0
ಇತರ: 2
ಒಟ್ಟು (ಎರಡು ವಿಕೆಟಿಗೆ) 28
ವಿಕೆಟ್‌ ಪತನ: 1-27, 2-27
ಬೌಲಿಂಗ್‌: ಪ್ಯಾಟ್‌ ಕಮಿನ್ಸ್‌ 5.3-1-9-1
ಜೋಶ್‌ ಹೇಝಲ್‌ವುಡ್‌ 2-0-10-0
ನಥನ್‌ ಲಿಯಾನ್‌ 1-0-6-0
ಸ್ಕಾಟ್‌ ಬೋಲ್ಯಾಂಡ್‌ 2-1-1-1

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.