ಬರಲಿದೆ… ಬಾಸ್ಕೆಟ್‌ಬಾಲ್‌ ತಾರೆಯ ಜೀವನ ಚರಿತ್ರೆ


Team Udayavani, Aug 3, 2020, 6:31 AM IST

ಬರಲಿದೆ… ಬಾಸ್ಕೆಟ್‌ಬಾಲ್‌ ತಾರೆಯ ಜೀವನ ಚರಿತ್ರೆ

ಭಾರತದ ಬಾಸ್ಕೆಟ್‌ಬಾಲ್‌ ತಂಡದ ಅತೀ ಕಿರಿಯ ನಾಯಕ ವಿಶೇಷ್‌ ಭೃಗುವಂಶಿ ಅವರ ಸ್ಫೂರ್ತಿದಾಯಕ ಕಥನ

ಹೊಸದಿಲ್ಲಿ: ವಿಶೇಷ್‌ ಭೃಗುವಂಶಿ… ಭಾರತದ ಬಾಸ್ಕೆಟ್‌ಬಾಲ್‌ ಇತಿಹಾಸದಲ್ಲಿ ಈ ಹೆಸರಿಗೆ ವಿಶೇಷ ಮಹತ್ವವಿದೆ.

ಅವರು ಭಾರತೀಯ ಬಾಸ್ಕೆಟ್‌ಬಾಲ್‌ ತಂಡದ ಅತೀ ಕಿರಿಯ ನಾಯಕನೆಂಬ ದಾಖಲೆ ಹೊಂದಿದ್ದಾರೆ.

ಇವರ ಸ್ಫೂರ್ತಿದಾಯಕ ಜೀವನ ಕಥನವೀಗ ಪುಸ್ತಕ ರೂಪದಲ್ಲಿ ಹೊರ ಬರಲಿದೆ.

ವಿಶೇಷ್‌ ಭೃಗುವಂಶಿ ಅವರ ಈ ಜೀವನ ಚರಿತ್ರೆಯ ಹೆಸರು ‘ವಿಶೇಷ್‌: ಕೋಡ್‌ ಟು ವಿನ್‌’. 130 ಪುಟಗಳ ಈ ಪುಸ್ತಕ ರಾಷ್ಟ್ರೀಯ ಕ್ರೀಡಾ ದಿನವಾದ ಆ. 29ರಂದು ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

ವಾರಾಣಸಿಯವರಾದ 29 ವರ್ಷದ ವಿಶೇಷ್‌ ಭೃಗುವಂಶಿ 2007ರಿಂದ ಭಾರತೀಯ ಬಾಸ್ಕೆಟ್‌ಬಾಲ್‌ ತಂಡವನ್ನು ಪ್ರತಿನಿಧಿಸುತ್ತ ಬಂದಿದ್ದಾರೆ.

2010ರಲ್ಲಿ ಇವರಿಗೆ ತಂಡದ ನಾಯಕತ್ವ ಒಲಿದು ಬಂದಿತ್ತು. ಭಾರತೀಯ ಬಾಸ್ಕೆಟ್‌ಬಾಲ್‌ ತಂಡದ ಅತೀ ಕಿರಿಯ ಕಪ್ತಾನನೆಂಬ ಹಿರಿಮೆ ಇವರದಾಗಿತ್ತು. ಆಸ್ಟ್ರೇಲಿ ಯದ ನ್ಯಾಶನಲ್‌ ಬಾಸ್ಕೆಟ್‌ಬಾಲ್‌ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಆಟಗಾರನೆಂಬ ಹೆಗ್ಗಳಿಕೆಯೂ ಭೃಗುವಂಶಿ ಅವರದಾಗಿದೆ.

‘ಕ್ರಿಕೆಟ್‌ ಹುಚ್ಚಿನ ಭಾರತದ ಯುವ ಜನತೆಗೆ ಬಾಸ್ಕೆಟ್‌ಬಾಲ್‌ ಪ್ರೀತಿ ಮೂಡಿಸಬೇಕೆಂಬುದು ನನ್ನ ಉದ್ದೇಶ. ಇವರಿಗೆಲ್ಲ ವಿಶೇಷ್‌ ಭೃಗುವಂಶಿ ಅವರ ಯಶೋಗಾಥೆ ಸ್ಫೂರ್ತಿಯಾಗಲಿದೆ ಎಂಬ ವಿಶ್ವಾಸ ನನ್ನದು’ ಎಂಬುದಾಗಿ ಲೇಖಕಿ ನಿರುಪಮಾ ಯಾದವ್‌ ಹೇಳಿದ್ದಾರೆ.

13 ವರ್ಷಗಳ ಪಯಣ
13 ವರ್ಷಗಳ ಈ ಕ್ರೀಡಾ ಜೀವನದಲ್ಲಿ ವಿಶೇಷ್‌ ಭೃಗುವಂಶಿ ಅನೇಕ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಏಶ್ಯಾಡ್‌ (2), ಏಶ್ಯನ್‌ ಚಾಂಪಿಯನ್‌ಶಿಪ್‌ (5), ಬೀಚ್‌ ಏಶ್ಯಾಡ್‌ (3), ಇಂಡೋರ್‌ ಏಶ್ಯಾಡ್‌ (2), ಸೌತ್‌ ಏಶ್ಯನ್‌ ಗೇಮ್ಸ್‌ (2) ಮತ್ತು ಸೌತ್‌ ಏಶ್ಯನ್‌ ಚಾಂಪಿಯನ್‌ಶಿಪ್‌ (7 ಸಲ) ಇದರಲ್ಲಿ ಪ್ರಮುಖವಾದುದು.

ಟಾಪ್ ನ್ಯೂಸ್

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?

Lok Sabha Election 2024; ಬಿಜೆಪಿ 2ನೇ ಪಟ್ಟಿ ಇನ್ನೆರಡು ದಿನ ವಿಳಂಬ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asaas

Mumbai Indians; ಹಾರ್ದಿಕ್‌ ಪಾಂಡ್ಯ, ಬೌಷರ್‌ ಮೌನ!

1-wewewqe

‘Bangaluru’: ಅನ್‌ಬಾಕ್ಸ್‌  ಸಮಾರಂಭದಲ್ಲಿ ಆರ್‌ಸಿಬಿ ವನಿತೆಯರು

1-saddas-aa-4

IPL:ರಾಹುಲ್‌ ಫಿಟ್‌; ಕೀಪಿಂಗ್‌ ಡೌಟ್‌

1-saddas-aa-3

IPL; ಬೆಂಗಳೂರಿನಲ್ಲಿ ಅಭ್ಯಾಸ ಆರಂಭಿಸಿದ ಕೊಹ್ಲಿ

1-saddas

Badminton; ಇಂದಿನಿಂದ ಸ್ವಿಸ್‌ ಓಪನ್‌ ಬ್ಯಾಡ್ಮಿಂಟನ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.