ಕ್ರಿಕೆಟಿಗ ಬಿಂದಾಸ್‌ ಧಾಸ್‌ಗೆ ಸಚಿನ್‌ ತೆಂಡುಲ್ಕರ್‌ ಹೆಸರೇ ಸ್ಫೂರ್ತಿ


Team Udayavani, Feb 8, 2024, 5:47 AM IST

1-sadsada

ತಂದೆ ಸಂಜಯ್‌ ಧಾಸ್‌ ಉತ್ತಮ ಕ್ರೀಡಾಪಟು, ತಾಯಿ ಸುರೇಖಾ ಧಾಸ್‌ ಪೊಲೀಸ್‌ ಅಧಿಕಾರಿ. ಮಗ ಈಗಷ್ಟೇ ಭಾರತೀಯ ಕ್ರಿಕೆಟ್‌ನಲ್ಲಿ ಭಾರೀ ಸಂಚಲನ ಮೂಡಿಸಿರುವ ಆಟಗಾರ. ಅಂಡರ್‌-19 ವಿಶ್ವಕಪ್‌ನಲ್ಲಿ ಸುದ್ದಿಯಾಗಿರುವ ಈ ಕ್ರಿಕೆಟಿಗನೇ ಸಚಿನ್‌ ಧಾಸ್‌!

ಮಹಾರಾಷ್ಟ್ರ ಪೊಲೀಸ್‌ ಇಲಾಖೆಯಲ್ಲಿ ಸಹಾಯಕ ಅಧಿಕಾರಿಯಾಗಿರುವ (ಎಪಿಐ) ಸುರೇಖಾ ಅವರಿಗೆ ಮಗ ಕ್ರಿಕೆಟರ್‌ ಆಗುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಆದರೆ ಸ್ವತಃ ಕ್ರೀಡಾಪಟು ವಾಗಿರುವ ತಂದೆಗೆ ಮಗನ ಕ್ರೀಡಾ ಪ್ರತಿಭೆಯ ಮೇಲೆ ಭಾರೀ ಭರವಸೆ. ಈತ 22 ಯಾರ್ಡ್‌ ಅಂಕಣದಲ್ಲಿ ದೊಡ್ಡದೊಂದು ಸಾಧನೆ ಮಾಡಲಿದ್ದಾನೆಂದು ಸ್ಪಷ್ಟವಾಗಿ ಊಹಿಸಿದ್ದರು. ಇದೀಗ ನಿಜವಾಗಿದೆ.

ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ನಲ್ಲಿ ಸೋಲಿನ ದವಡೆಗೆ ಸಿಲುಕಿ ಒದ್ದಾಡುತ್ತಿದ್ದ ಭಾರತ ತಂಡವನ್ನು ಪಾರು ಮಾಡಿದ್ದೇ ಸಚಿನ್‌ ಧಾಸ್‌. ಜತೆಗೆ ನಾಯಕ ಉದಯ್‌ ಸಹಾರಣ್‌ ಅವರ ಕಪ್ತಾನನ ಆಟ.

ತೆಂಡುಲ್ಕರ್‌ ಅಭಿಮಾನಿ
ಮೊದಲು ಸುನೀಲ್‌ ಗಾವಸ್ಕರ್‌, ಬಳಿಕ ಸಚಿನ್‌ ತೆಂಡುಲ್ಕರ್‌ ಅವರ ಕಟ್ಟಾ ಅಭಿಮಾನಿ ಯಾಗಿದ್ದ ಕಾರಣ ಮಗನಿಗೂ ಸಚಿನ್‌ ಹೆಸರನ್ನೇ ಇರಿಸಿದ್ದರು ಸಂಜಯ್‌ ಧಾಸ್‌. ತೆಂಡುಲ್ಕರ್‌ ಅವರಂತೆ 10ನೇ ನಂಬರ್‌ ಜೆರ್ಸಿ ಧರಿಸಿ ಆಡ ಲಿಳಿಯುತ್ತಾರೆ. ಮತ್ತೋರ್ವ ಲೆಜೆಂಡ್ರಿ ಆಟಗಾರ ವಿರಾಟ್‌ ಕೊಹ್ಲಿ ಅವರ ಅಭಿಮಾನಿಯೂ ಹೌದು.
“ಸಚಿನ್‌ಗೆ ಯಾರೂ ದೋಸ್ತಿಗಳಿಲ್ಲ. ನಾನೇ ಅವನ ಗೆಳೆಯ. ಆತ ಯಾವುದೇ ಸಮಾರಂಭ ಗಳಿಗೆ ಹೋದವನಲ್ಲ. ಹೀಗಾಗಿ ಕ್ರಿಕೆಟ್‌ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಲು ಆತನಿಗೆ ಸಾಧ್ಯವಾಯಿತು’ ಎನ್ನುತ್ತಾರೆ ಸಂಜಯ್‌ ಧಾಸ್‌. ಇವರು ಮಹಾರಾಷ್ಟ್ರದ ಹಳ್ಳಿ ಪ್ರದೇಶವಾದ ಬೀಡ್‌ ಮೂಲದವರು. ಸಂಜಯ್‌ ಕಾಲೇಜು ದಿನಗಳಲ್ಲಿ ಕಬಡ್ಡಿ, ವಿವಿ ಮಟ್ಟದಲ್ಲಿ ಕ್ರಿಕೆಟ್‌ ಆಡಿದ್ದಾರೆ. ಸಹೋದರಿ ಪ್ರತೀಕ್ಷಾ ಪುಣೆಯಲ್ಲಿ ಯುಎಸ್‌ಪಿಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.

ಟರ್ಫ್ ವಿಕೆಟ್‌ಗೆ ಸಾಲ
“ಮಗನ ತರಬೇತಿಗಾಗಿ ಸಾಲ ಮಾಡಿ ಟರ್ಫ್ ವಿಕೆಟ್‌ಗಳನ್ನು ಸಿದ್ಧಪಡಿಸಿದ್ದೆ. ಆದರೆ ಬೀಡ್‌ ನಲ್ಲಿ ನೀರಿನ ಸಮಸ್ಯೆ. ಪಿಚ್‌ಗಳನ್ನು ತಾಜಾ ಆಗಿರಿಸಿಕೊಳ್ಳುವುದು ದೊಡ್ಡ ಸವಾಲು. ಹೀಗಾಗಿ 2-3 ದಿನಗಳಿಗೊಮ್ಮೆ ಟ್ಯಾಂಕರ್‌ ನೀರು ತರಿಸಿಕೊಳ್ಳುತ್ತಿದ್ದೆ’ ಎಂದು ಸಂಜಯ್‌ ಧಾಸ್‌ ಆಂದಿನ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಕೋಚ್‌ ಅಜರ್‌ ಅವರ ಮಾರ್ಗದರ್ಶನವನ್ನು ಉಲ್ಲೇಖೀಸಲು ಮರೆಯುವುದಿಲ್ಲ.

ಬಿರುಸಿನ ಬ್ಯಾಟರ್‌
ಸಚಿನ್‌ ಧಾಸ್‌ ಕೆಳ ಕ್ರಮಾಂಕದ ಬಿರುಸಿನ ಆಟಗಾರ. ಇವರು ಸಿಕ್ಸರ್‌ ಬಾರಿಸುವ ರೀತಿಯೇ ವಿಚಿತ್ರ. ಸಂಘಟಕರಿಗೆ ಒಂಥರ ಗೊಂದಲ. ಅವರ ಬ್ಯಾಟ್‌ ಗಾತ್ರವನ್ನು ಪರಿಶೀಲಿಸಿದ ವಿದ್ಯಮಾನವೂ ಸಂಭವಿಸಿದೆ!
ಅಗ್ರ ಕ್ರಮಾಂಕದಲ್ಲಿ ಮುಶೀರ್‌ ಖಾನ್‌, ಉದಯ್‌ ಸಹಾರಣ್‌ ಕ್ರೀಸ್‌ ಆಕ್ರಮಿಸಿ ಕೊಳ್ಳು ವುದರಿಂದ ಧಾಸ್‌ಗೆ ಅವಕಾಶ ಕಡಿಮೆ ಸಿಗುತ್ತಿತ್ತು. ಆದರೆ ಸಿಕ್ಕಿದ ಅವಕಾಶಗಳನ್ನು ವ್ಯರ್ಥ ಗೊಳಿಸುತ್ತಿರಲಿಲ್ಲ.

ನೇಪಾಲ ವಿರುದ್ಧದ ಸೂಪರ್‌ ಸಿಕ್ಸ್‌ ಪಂದ್ಯದಲ್ಲಿ ಧಾಸ್‌ಗೆ ಭಡ್ತಿ ನೀಡಲಾಯಿತು. ಇದು ಭರ್ಜರಿ ಯಶಸ್ಸು ಕಂಡಿತು. ದಾಸ್‌ 116 ರನ್‌ ಸಿಡಿಸಿದರು. ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ತೀವ್ರ ಕುಸಿತದಲ್ಲಿದ್ದುದನ್ನೂ ಲೆಕ್ಕಿಸದೆ ಬಿರುಸಿನ ಬ್ಯಾಟಿಂಗ್‌ ನಡೆಸಿದರು. ಸತತ 2ನೇ ಶತಕಕ್ಕೆ ಅಡ್ಡಿಯಾದದ್ದು ಬರೀ 4 ರನ್‌. ಆದರೆ ತಂಡವನ್ನು ಸೋಲಿನಿಂದ ಬಚಾವ್‌ ಮಾಡಿದ ಸಾಹಸ ಎಲ್ಲಕ್ಕೂ ಮಿಗಿಲು.

ರವಿವಾರದ ಅಕಾಡೆಮಿ ಗ್ರೌಂಡ್‌ನ‌ಲ್ಲಿ ದೈತ್ಯ ಪರದೆ ಅಳವಡಿಸಿ, 200 ಯುವ ಕ್ರಿಕೆಟ್‌ ಪ್ರತಿಭೆ ಗಳೊಂದಿಗೆ ಫೈನಲ್‌ ಪಂದ್ಯ ವೀಕ್ಷಿ ಸುವುದು ಸಂಜಯ್‌ ಧಾಸ್‌ ಅವರ ಯೋಜನೆ.

ಟಾಪ್ ನ್ಯೂಸ್

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.