ತಿಮ್ಮಪ್ಪನ ದರ್ಶನ ಪಡೆದ ಸೂರ್ಯಕುಮಾರ್ ದಂಪತಿ
Team Udayavani, Feb 22, 2023, 5:10 AM IST
ತಿರುಪತಿ: ಟೀಮ್ ಇಂಡಿಯಾದ “360 ಡಿಗ್ರಿ ಬ್ಯಾಟರ್’ ಸೂರ್ಯಕುಮಾರ್ ಯಾದವ್ ಮಂಗಳವಾರ ಪತ್ನಿ ದೇವಿಶಾ ಶೆಟ್ಟಿ ಅವರೊಂದಿಗೆ ತಿರುಪತಿಗೆ ತೆರಳಿ ಶ್ರೀ ವೆಂಕಟೇಶ್ವರನ ದರ್ಶನ ಪಡೆದರು.
ಬಾಲಾಜಿ ದರ್ಶನದ ಬಳಿಕ ತಿರುಮಲದ ರಂಗನಾಯಕ ಮಂಟಪದಲ್ಲಿ ಸೂರ್ಯಕುಮಾರ್ ದಂಪತಿ ವೈದಿಕರಿಂದ ಆಶೀರ್ವಾದ ಪಡೆದರು. ದೇಗುಲದ ಅಧಿಕಾರಿಗಳು ತೀರ್ಥ ಪ್ರಸಾದ, ಕೆಂಪು ರೇಷ್ಮೆ ವಸ್ತ್ರವನ್ನು ನೀಡಿ ಗೌರವಿಸಿದರು. ಬಳಿಕ ಅಭಿಮಾನಿಗಳು ಹಾಗೂ ಅಲ್ಲಿಗೆ ಆಗಮಿಸಿದ ಭಕ್ತರೊಂದಿಗೆ ಬೆರೆತು ಫೂಟೊ ತೆಗೆಸಿಕೊಂಡರು.
ಸಮಯ ಸಿಕ್ಕಾಗಲೆಲ್ಲ ದೇವಸ್ಥಾನಕ್ಕೆ ತೆರಳುವ ಸೂರ್ಯಕುಮಾರ್ ಯಾದವ್, ಇತ್ತೀಚೆಗಷ್ಟೇ ಕ್ರಿಕೆಟ್ ಪಂದ್ಯಕ್ಕಾಗಿ ತಿರುವನಂತಪುರಕ್ಕೆ ಹೋದಾಗ ಅನಂತಪದ್ಮನಾಭಸ್ವಾಮಿ ಸನ್ನಿಧಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು.