ಮನೋಜ್ಗೆ ಡಿಎಸ್ಪಿ ಹುದ್ದೆ ನೀಡದ ಹರ್ಯಾಣ: ಹೈ ನೋಟಿಸ್
Team Udayavani, Jul 30, 2017, 7:30 AM IST
ಮೊಹಾಲಿ: ಡಿಎಸ್ಪಿ (ಉಪ ಪೊಲೀಸ್ಅಧೀಕ್ಷಕ) ಹುದ್ದೆ ನೀಡಲು ಹರ್ಯಾಣ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ, ಬಾಕ್ಸರ್ ಮನೋಜ್ ಕುಮಾರ್, ಇಲ್ಲಿನ ಪಂಜಾಬ್-ಹರ್ಯಾಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಹರ್ಯಾಣ ಸರ್ಕಾರದ ಗೃಹ ಮತ್ತು ಹಣಕಾಸು ಇಲಾಖೆ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಹಾಗೂ ಪೊಲೀಸ್ ಮಹಾ ನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ. ಆಗಸ್ಟ್ 29ರೊಳಗೆ ನ್ಯಾಯಾಲಯಕ್ಕೆ ಉತ್ತರಿಸುವಂತೆ ಸೂಚಿಸಿದೆ.
ಮನೋಜ್ ಕುಮಾರ್ 2012ರ ಲಂಡನ್ ಒಲಿಂಪಿಕ್ಸ್ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ್ದರು. ಇದಕ್ಕೂ ಮೊದಲು 2010ರಲ್ಲಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಂದಿನ ಸರ್ಕಾರ ಇವರಿಗೆ ಡಿಎಸ್ಪಿ ಹುದ್ದೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಆ ನಂತರ ಕೊಟ್ಟ ಭರವಸೆಯನ್ನು ಮರೆತಿತ್ತು. ಆದಾದ ಬಳಿಕ ಹಲವರಿಗೆ ಹುದ್ದೆ ನೀಡಿದ್ದರೂ 7 ವರ್ಷದಿಂದ ತನ್ನನ್ನು ಕಡೆಗಣಿಸಲಾಗಿದೆ ಎಂದು ಮನೋಜ್ ಕುಮಾರ್ ಈಗ ಆರೋಪಿಸಿದ್ದಾರೆ.
2007ರಲ್ಲಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಆಡಿದ್ದ ಹರ್ಯಾಣದ ಜೋಗಿಂದರ್ ಶರ್ಮಗೆ ಡಿಎಸ್ಪಿ ಹುದ್ದೆ ನೀಡಲಾಗಿತ್ತು. ಒಂದೇ ಒಂದು ಟಿ20 ಆಡಿದ್ದಕ್ಕೆ ಅವರಿಗೆ ಡಿಎಸ್ಪಿ ಹುದ್ದೆ ನೀಡಲಾಗಿದೆ. ಆದರೆ ದೊಡ್ಡ ಕೂಟದಲ್ಲಿ ಭಾರತ ಪ್ರತಿನಿಧಿಸಿರುವ ನನ್ನನ್ನು ಸರ್ಕಾರ ನಿರ್ಲಕ್ಷಿéಸಿದೆ ಎಂದು ಅವರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ