CSK ನಾಯಕತ್ವದ ಬಗ್ಗೆ ಧೋನಿ ಕಳೆದ ವರ್ಷವೇ ಸೂಚನೆ ನೀಡಿದ್ದರು..: ರುತುರಾಜ್ ಗಾಯಕ್ವಾಡ್
Team Udayavani, Mar 22, 2024, 2:47 PM IST
ಚೆನ್ನೈ: ಐಪಿಎಲ್ 17ನೇ ಸೀಸನ್ ಆರಂಭಕ್ಕೆ ಒಂದೇ ದಿನ ಇರುವಂತೆ ತನ್ನ ನಾಯಕತ್ವ ಬದಲಾವಣೆ ಬಗ್ಗೆ ಪ್ರಕಟಿಸಿದ ಚೆನ್ನೈ ಸೂಪರ್ ಕಿಂಗ್ಸ್ ಶಾಕ್ ನೀಡಿತ್ತು. ಅನುಭವಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಜವಾಬ್ದಾರಿಯಿಂದ ಕೆಳಗಿಳಿದ ಕಾರಣದಿಂದ ಯುವ ಆಟಗಾರ ರುತುರಾಜ್ ಗಾಯಕ್ವಾಡ್ ಅವರಿಗೆ ನಾಯಕತ್ವದ ಹೊಣೆ ನೀಡಲಾಗಿದೆ.
ನಾಯಕತ್ವ ಬದಲಾವಣೆಗೆ ಸಿದ್ಧರಾಗಿರಲು ಎಂಎಸ್ ಧೋನಿ ಕಳೆದ ವರ್ಷ ಹೇಳಿದ್ದರು ಎಂದು ಚೆನ್ನೈ ಸೂಪರ್ ಕಿಂಗ್ಸ್ನ ಹೊಸ ನಾಯಕ ರುತುರಾಜ್ ಗಾಯಕ್ವಾಡ್ ಬಹಿರಂಗಪಡಿಸಿದ್ದಾರೆ.
ಐಪಿಎಲ್ ಬಿಡುಗಡೆ ಮಾಡಿದ ಇತ್ತೀಚಿನ ವೀಡಿಯೊದಲ್ಲಿ ಮಾತನಾಡುತ್ತಾ, ಹೊಸ ಸಿಎಸ್ಕೆ ನಾಯಕ, ನಾಯಕತ್ವವು ನನಗೆ ಸಿಕ್ಕರೆ ಆಶ್ಚರ್ಯವಿಲ್ಲ ಎಂದು ಧೋನಿ ಹೇಳಿದ್ದರು ಎಂದು ಬಹಿರಂಗಪಡಿಸಿದರು. ಧೋನಿ ಅವರನ್ನು ಕೆಲವು ಅಭ್ಯಾಸ ಪಂದ್ಯಗಳಲ್ಲಿ ತೊಡಗಿಸಿಕೊಳ್ಳಲು ಪ್ರಾರಂಭಿಸಿದ್ದಾರೆ ಎಂದು ರುತುರಾಜ್ ಹೇಳಿದರು.
“ನಾನು ಏನನ್ನೂ ಬದಲಾಯಿಸುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ಕಳೆದ ವರ್ಷವೇ, ಮಾಹಿ ಭಾಯ್ ಕೆಲವು ಸಮಯದಲ್ಲಿ ನಾಯಕತ್ವದ ಬಗ್ಗೆ ಸುಳಿವು ನೀಡಿದ್ದರು. ‘ಸಿದ್ಧರಾಗಿರಿ, ಹಾಗಾಗಿ ಕ್ಯಾಂಪ್ ಗೆ ಬಂದ ಬಳಿಕ ಅವರು ಕೆಲವು ಅಭ್ಯಾಸ ಪಂದ್ಯದ ಸಿಮ್ಯುಲೇಶನ್ನಲ್ಲಿ ತೊಡಗಿಸಿಕೊಳ್ಳುವಂತೆ ಮಾಡಿದರು” ಎಂದು ರುತುರಾಜ್ ಹೇಳಿದರು.
What it means! 🗣️💛#WhistlePodu #Yellove 🦁💛
— Chennai Super Kings (@ChennaiIPL) March 22, 2024
17ನೇ ಸೀಸನ್ ನ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಆಡಲಿದೆ. ಶುಕ್ರವಾರ (ಮಾರ್ಚ್ 22) ಚೆನ್ನೈನಲ್ಲಿ ಈ ಪಂದ್ಯ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?