ದ್ರಾವಿಡ್ಗೆ ಹೆಗಲಿಗೆ ಎನ್ಸಿಎ ಹೊಣೆ
Team Udayavani, Jun 10, 2019, 6:00 AM IST
ಮುಂಬಯಿ: ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಉಸ್ತುವಾರಿಯನ್ನು ನೀಡಲಾಗಿದೆ. ಬಹುಶಃ ದ್ರಾವಿಡ್ ಮುಂದೆ ‘ಹೆಡ್ ಆಫ್ ಕ್ರಿಕೆಟ್’ ಎಂದು ಕರೆಸಿಕೊ ಳ್ಳಲಿದ್ದಾರೆ. ಆಡಳಿತಾಧಿ ಕಾರಿಗಳ ಮುಂದಿನ ಸಭೆಯಲ್ಲಿ ದ್ರಾವಿಡ್ ನೇಮಕಾತಿಯನ್ನು ನಿರೀಕ್ಷಿಸಲಾಗಿದೆ.
ವಿಶ್ವ ಕ್ರಿಕೆಟಿನ ಗೋಡೆ ಎಂದೇ ಖ್ಯಾತಿ ಗಳಿಸಿದ್ದ ದ್ರಾವಿಡ್, ಭಾರತದ ಭವಿಷ್ಯದ ಕ್ರಿಕೆಟ್ ಪೀಳಿಗೆಯನ್ನು ರೂಪಿಸುವ, ಅವರಿಗೆ ಅಗತ್ಯ ನೆರವು ನೀಡುವ ಹೊಣೆಗಾರಿಕೆ ವಹಿಸಲಿದ್ದಾರೆ. ಹೀಗಾಗಿ ಅವರ ಮೇಲಿದ್ದ ಭಾರತ ಎ ಹಾಗೂ ಅಂಡರ್-19 ತಂಡಗಳ ಕೋಚಿಂಗ್ ಜವಾಬ್ದಾರಿ ಇನ್ನು ಇರುವುದಿಲ್ಲ. ಆದರೆ ಈ ಎರಡೂ ತಂಡಗಳ ಮೇಲೆ ನಿಗಾ ಇಡಬೇಕಿದೆ. ಈ ತಂಡಗಳ ತರಬೇತುದಾರರು ನೇರವಾಗಿ ದ್ರಾವಿಡ್ಗೆ ವರದಿ ಮಾಡಿಕೊಳ್ಳಬೇಕು. ದ್ರಾವಿಡ್ ಮಾರ್ಗದರ್ಶನದಲ್ಲೇ ಎಲ್ಲ ಕಾರ್ಯತಂತ್ರಗಳನ್ನು ರೂಪಿ ಸಬೇಕು.
ಹೊಸ ತರಬೇತುದಾರರು
ದ್ರಾವಿಡ್ ಹೊಸ ಜವಾಬ್ದಾರಿ ಹೊತ್ತುಕೊಂಡಿರುವುದರಿಂದ, ಭಾ ರತ ‘ಎ’ ತಂಡಕ್ಕೆ ಅಭಯ್ ಶರ್ಮ, ಅಂಡರ್-19 ತಂಡಕ್ಕೆ ಪರಸ್ ಮ್ಹಾಂಬ್ರೆ ತರಬೇತುದಾರರಾಗಿ ಆಯ್ಕೆಯಾಗಿದ್ದಾರೆ.