ಅಜೇಯ ದಾಖಲೆಯ ನಿರೀಕ್ಷೆಯಲ್ಲಿ ಅಜರ್‌ ಬಳಗ

ಇಂದಿನಿಂದ ಇಂಗ್ಲೆಂಡ್‌-ಪಾಕಿಸ್ಥಾನ ಟೆಸ್ಟ್‌ ; ಕೌತುಕ ದಶಕದಿಂದ ಇಂಗ್ಲೆಂಡ್‌ ವಿರುದ್ಧ ಸರಣಿ ಸೋಲದ ಪಾಕ್‌

Team Udayavani, Aug 5, 2020, 6:43 AM IST

ಅಜೇಯ ದಾಖಲೆಯ ನಿರೀಕ್ಷೆಯಲ್ಲಿ ಅಜರ್‌ ಬಳಗ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮ್ಯಾಂಚೆಸ್ಟರ್: ಒಂದೆಡೆ ಮಂಗಳವಾರವಷ್ಟೇ ಐರ್ಲೆಂಡ್‌ ಎದುರು ಅಂತಿಮ ಏಕದಿನ ಪಂದ್ಯವಾಡಿರುವ ಇಂಗ್ಲೆಂಡ್‌, ಮರುದಿನವೇ ಪ್ರವಾಸಿ ಪಾಕಿಸ್ಥಾನ ವಿರುದ್ಧ ಬಹು ನಿರೀಕ್ಷೆಯ ಟೆಸ್ಟ್‌ ಸರಣಿ ಆರಂಭಿಸುತ್ತಿರುವುದೊಂದು ಕೌತುಕವೇ ಸರಿ.

ಪ್ರತಿಯೊಂದು ಮಾದರಿಗೂ ವಿಭಿನ್ನ ತಂಡವಿರುವಾಗ ಇಂಥದ್ದೆಲ್ಲ ವಿಶೇಷ ಕ್ರಿಕೆಟ್‌ನಲ್ಲಿ ನಡೆಯುತ್ತದೆ ಎಂಬುದನ್ನು ಕ್ರಿಕೆಟ್‌ ಜನಕರೇ ತೋರಿಸಿ ಕೊಡುತ್ತಿರುವುದು ಉತ್ತಮ ಬೆಳವಣಿಗೆ.

ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯವನ್ನು ಕಳೆದುಕೊಂಡ ಬಳಿಕ ಸತತ ಎರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡದ್ದು ಇಂಗ್ಲೆಂಡಿನ ತವರಿನ ಪರಾಕ್ರಮಕ್ಕೆ ಸಾಕ್ಷಿ. ಆದರೆ ಕೆರಿಬಿಯನ್ನರಿಗಿಂತ ಪಾಕ್‌ ಸವಾಲು ಹೆಚ್ಚು ಕಠಿನ ಎಂಬುದನ್ನು ಮರೆಯುವಂತಿಲ್ಲ. 2010ರ ಬಳಿಕ ಪಾಕ್‌ ತಂಡ ಇಂಗ್ಲೆಂಡ್‌ ವಿರುದ್ಧ ಸರಣಿಯನ್ನೇ ಸೋತಿಲ್ಲ ಎಂಬುದು ಇದಕ್ಕೊಂದು ಉತ್ತಮ ನಿದರ್ಶನ.

ಹತ್ತರಲ್ಲಿ ನಾಲ್ಕು ಗೆಲುವು
2010ರ ಸರಣಿ ಸೋಲಿನ ಬಳಿಕ ಯುಎಇಯಲ್ಲಿ ಎರಡು ಸಲ ಪಾಕ್‌ ಪಡೆ ಆಂಗ್ಲರ ಮೇಲೆ ಸವಾರಿ ಮಾಡಿತು (2011-12 ಮತ್ತು 2015-16). ಬಳಿಕ 2016 ಮತ್ತು 2018ರ ಇಂಗ್ಲೆಂಡ್‌ ಪ್ರವಾಸದ ಎರಡೂ ಸರಣಿಗಳನ್ನು ಡ್ರಾ ಮಾಡಿಕೊಂಡಿತು.

2010ರ ಬಳಿಕ ಇಂಗ್ಲೆಂಡ್‌ ವಿರುದ್ಧ ಆಡಿದ 10 ಟೆಸ್ಟ್‌ಗಳಲ್ಲಿ ನಾಲ್ಕನ್ನು ಜಯಿಸಿದ್ದು ಪಾಕಿಸ್ಥಾನದ ಅಮೋಘ ಸಾಧನೆಯೇ ಸರಿ. ಈ ಅವಧಿಯಲ್ಲಿ ಏಶ್ಯದ ಬೇರೆ ಯಾವುದೇ ತಂಡ ಇಂಗ್ಲೆಂಡ್‌ ಎದುರು ಇಂಥದ್ದೊಂದು ಗೆಲುವಿನ ದಾಖಲೆ ಹೊಂದಿಲ್ಲ. ಇದನ್ನು ಮುಂದುವರಿಸಿಕೊಂಡು ಹೋಗುವುದು ಅಥವಾ ಸರಣಿ ಗೆಲ್ಲುವು ಅಜರ್‌ ಅಲಿ ಬಳಗದ ಗುರಿ ಆಗಿದ್ದರೆ ಅಚ್ಚರಿಯೇನಿಲ್ಲ.

2016ರ ಇಂಗ್ಲೆಂಡ್‌ ಪ್ರವಾಸದ ವೇಳೆ ನಾಯಕನಾಗಿದ್ದ ಮಿಸ್ಬಾ ಉಲ್‌ ಹಕ್‌ ಈ ಬಾರಿ ಕೋಚ್‌ ಆಗಿದ್ದಾರೆ. ಅಂದಿನ ಸರಣಿ 2-2ರಿಂದ ಸಮನಾದುದೊಂದು ರೋಚಕ ಕಹಾನಿ! ಆದರೆ ಕೇವಲ ಅಂಕಿಅಂಶಗಳನ್ನು ನಂಬಿ ಹೋರಾಟವನ್ನು ಸಂಘಟಿಸುವ ಸಮಯ ಇದಲ್ಲ ಎಂದು ಮಿಸ್ಬಾ ಈಗಾಗಲೇ ತನ್ನ ತಂಡವನ್ನು ಎಚ್ಚರಿಸಿದ್ದಾರೆ.

ಇಂಗ್ಲೆಂಡ್‌ನ‌ಲ್ಲಿ ಮೇಲುಗೈ ಸಾಧಿಸಬೇಕಾದರೆ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡೂ ಕ್ಲಿಕ್‌ ಆಗುವುದು ಅಗತ್ಯ. ಅದರಲ್ಲೂ ವೇಗಿಗಳು ಮೆರೆದಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಈ ನಿಟ್ಟಿನಲ್ಲಿ ನೋಡುವುದಾದರೆ ಪಾಕಿಸ್ಥಾನದ ಪೇಸ್‌ ವಿಭಾಗ ಬಲಿಷ್ಠವಾಗಿಯೇ ಇದೆ. ಇವರಿಗೆ ಆರಂಭಿಕರಾದ ಸಿಬ್ಲಿ-ಬರ್ನ್ಸ್ ದಿಟ್ಟ ಉತ್ತರ ನೀಡುವ ಅಗತ್ಯವಿದೆ. ಉಳಿದಂತೆ ಅನುಭವಿಗಳ ಬ್ಯಾಟಿಂಗ್‌ ಪಡೆ ಆತಿಥೇಯರ ಬಳಿ ಇದೆ.

600ರ ಗಡಿಯತ್ತ ಆ್ಯಂಡರ್ಸನ್‌
ಇಂಗ್ಲೆಂಡಿನ ವೇಗಿಗಳೂ ಅಮೋಘ ಫಾರ್ಮ್ನಲ್ಲಿದ್ದಾರೆ. 500 ವಿಕೆಟ್‌ಗಳ ಸಾಧಕ ಬ್ರಾಡ್‌ ಎಷ್ಟು ಅಪಾಯಕಾರಿ ಎಂಬುದನ್ನು ಕಳೆದೆರಡು ಟೆಸ್ಟ್‌ಗಳಲ್ಲಿ ತೋರಿಸಿ ಕೊಟ್ಟಿದ್ದಾರೆ. ಹಾಗೆಯೇ 600 ವಿಕೆಟ್‌ಗಳ ಅಂಚಿನಲ್ಲಿರುವ ಆ್ಯಂಡರ್ಸನ್‌ ಹೆಚ್ಚು ಶಕ್ತಿಶಾಲಿಯಾಗಿ ಎರಗುವ ಯೋಜನೆಯಲ್ಲಿದ್ದಾರೆ. ಇನ್ನು 11 ವಿಕೆಟ್‌ ಉರುಳಿಸಿದರೆ ಅವರು ಮುರಳೀಧರನ್‌, ಶೇನ್‌ ವಾರ್ನ್, ಅನಿಲ್‌ ಕುಂಬ್ಳೆ ಸಾಲಿನಲ್ಲಿ ವಿರಾಜಮಾನರಾಗಲಿದ್ದಾರೆ. 600 ವಿಕೆಟ್‌ ಉಡಾಯಿಸಿದ ಟೆಸ್ಟ್‌ ಇತಿಹಾಸದ ಮೊದಲ ವೇಗಿ ಎಂಬ ಹಿರಿಮೆ ;ಆ್ಯಂಡಿ’ಯದ್ದಾಗಲಿದೆ.

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.