Karnataka Election ನಾಲ್ಕು ದಿನ ಬಾಕಿ : ರೋಡ್ ಶೋ ಮೂಲಕ ಮೋದಿ, ಯೋಗಿ ಭರ್ಜರಿ ಮೋಡಿ
Team Udayavani, May 6, 2023, 8:57 PM IST
ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ ನಾಲ್ಕು ದಿನಗಳು ಬಾಕಿ ಉಳಿದಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾಜ್ಯ ರಾಜಧಾನಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು, ಮಾರ್ಗದ ಎರಡೂ ಬದಿಗಳಲ್ಲಿ ಸಾಲುಗಟ್ಟಿ ನಿಂತಿದ್ದ ಅಪಾರ ಸಂಖ್ಯೆಯ ಉತ್ಸಾಹಿ ಜನರತ್ತ ಕೈ ಬೀಸಿದರು.ಬೆಂಗಳೂರು ದಕ್ಷಿಣದ ಸೋಮೇಶ್ವರ ಭವನ ಆರ್ಬಿಐ ಮೈದಾನದಿಂದ ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್ವರೆಗೆ 26 ಕಿ.ಮೀ ರೋಡ್ಶೋ ಸುಮಾರು ಮೂರು ಗಂಟೆಗಳಲ್ಲಿ ಮುಕ್ತಾಯವಾಯಿತು.
ರೋಡ್ಶೋ ದಕ್ಷಿಣ ಮತ್ತು ಮಧ್ಯ ಬೆಂಗಳೂರಿನ ಭಾಗಗಳಲ್ಲಿ ಸಂಚರಿಸಿ ಸುಮಾರು ಹನ್ನೆರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಚರಿಸಿತು. ಪ್ರಧಾನಮಂತ್ರಿಯವರೊಂದಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮತ್ತು ಬೆಂಗಳೂರು ಸೆಂಟ್ರಲ್ ಸಂಸದ ಪಿ ಸಿ ಮೋಹನ್ ಇದ್ದರು.
Here is why today was so special in Bengaluru… pic.twitter.com/PMb5LPBOJl
— Narendra Modi (@narendramodi) May 6, 2023
ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದ ಮೇಲೆ ನಿಂತು, ರಸ್ತೆಗಳ ಬದಿಗಳಲ್ಲಿ ಮತ್ತು ಹತ್ತಿರದ ಕಟ್ಟಡಗಳಲ್ಲಿ ನೆರೆದಿದ್ದ ಜನರು ಮೋದಿ ಸ್ವಾಗತಿಸಿದರು, ಅವರಲ್ಲಿ ಹಲವರು ‘ಮೋದಿ, ಮೋದಿ’, ‘ಜೈ ಬಜರಂಗಬಲಿ’, ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಜೋರಾಗಿ ಕೂಗುತ್ತಿದ್ದರು. ಹಲವಾರು ಸ್ಥಳಗಳಲ್ಲಿ “ಹಬ್ಬದ ವಾತಾವರಣ” ಕಾಣಿಸಿಕೊಂಡಿತ್ತು.
ಬಾದಾಮಿ, ಹಾವೇರಿಯಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಪ್ರಧಾನಿ ಮಾತನಾಡಿದರು. ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಯೋಗಿ ಭರ್ಜರಿ ಪ್ರಚಾರ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೋಡ್ ಶೋಗಳನ್ನು ಸಹಸ್ರಾರು ಮಂದಿ ಕಣ್ತುಂಬಿಕೊಂಡರು. ಕೊಪ್ಪದಲ್ಲಿ ನಡೆದ ಬಹಿರಂಗ ಸಭೆಯ ಬಳಿಕ ಯೋಗಿ ಅವರು ಬಂಟ್ವಾಳ, ಪುತ್ತೂರು, ಕಾರ್ಕಳ ಮತ್ತು ಹೊನ್ನಾವರದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.
ಪುಷ್ಪವೃಷ್ಟಿ
ರಸ್ತೆಯ ಇಕ್ಕೆಲ, ಓಣಿಗಳಲ್ಲಿ, ಕಟ್ಟದ ಮೇಲೆ ನಿಂತು ಸಹಸ್ರಾರು ಮಂದಿ ರೋಡ್ ಶೋ ವೀಕ್ಷಣೆ ನಡೆಸಿದರು. ರಸ್ತೆಯ ಬದಿ ನಿಂತವರೆಲ್ಲ ಪುಷ್ಪ ವೃಷ್ಟಿಯನ್ನು ಯೋಗಿ ಅವರ ಮೇಲೆ ಸುರಿಸಿದರು. ಎನ್ಎಸ್ಜಿ ಪಡೆಗಳು ಸೇರಿ ವ್ಯಾಪಕ ಪೋಲಿಸ್ ಸಿಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.