ಡಿ’ವಿಲಿಯರ್ ಆಟಕ್ಕೆ ಸ್ಟೋಕ್ಸ್‌ ಟ್ವೀಟ್‌


Team Udayavani, Apr 23, 2018, 6:20 AM IST

AB-de-Villier,-Ben-Stokes.jpg

ಬೆಂಗಳೂರು: ಎಬಿ ಡಿ’ವಿಲಿಯರ್ ಸಿಡಿಸುತ್ತಿರುವ ವೇಳೆ ಯಾವುದೇ ಬೌಲಿಂಗ್‌ ದಾಳಿ ಅವರನ್ನು ತಡೆಯುವ ಸಾಧ್ಯತೆಯಿಲ್ಲ. ಶನಿವಾರದ ಪಂದ್ಯದಲ್ಲಿ ಡಿ’ವಿಲಿಯರ್ ಅವರ ಪ್ರಚಂಡ ಆಟದಿಂದಾಗಿ ಬೆಂಗಳೂರು ತಂಡವು ಡೆಲ್ಲಿ ತಂಡವನ್ನು ಆರು ವಿಕೆಟ್‌ಗಳಿಂದ ಸೋಲಿಸಲು ಯಶಸ್ವಿಯಾಗಿತ್ತು. ಸುಂಟರಗಾಳಿಯಂತೆ ಬ್ಯಾಟ್‌ ಬೀಸಿದ ಡಿ’ವಿಲಿಯರ್ ಏಕಾಂಗಿಯಾಗಿ ಹೋರಾಡಿ ಬೆಂಗಳೂರಿಗೆ ಗೆಲುವು ತಂದುಕೊಟ್ಟಿದ್ದರು.

ಕೇವಲ 39 ಎಸೆತಗಳಿಂದ 90 ರನ್‌ ಸಿಡಿಸುವ ಮೂಲಕ ಡಿ’ವಿಲಿಯರ್  ಇನ್ನೂ ಎರಡು ಓವರ್‌ ಬಾಕಿ ಇರುತ್ತಲೇ ಆರ್‌ಸಿಬಿ ಗೆಲುವಿನ ಗುರಿ ತಲುಪಿತ್ತು. ತನ್ನ ಅಜೇಯ ಇನ್ನಿಂಗ್ಸ್‌ ವೇಳೆ ಡಿ’ವಿಲಿಯರ್ 10 ಬೌಂಡರಿ ಮತ್ತು 5 ಸಿಕ್ಸರ್‌ ಬಾರಿಸಿದ್ದರು. ಡಿ’ವಿಲಿಯರ್ ಅವರ ಆಟಕ್ಕೆ ಸಾಮಾಜಿಕ ಜಾಲತಾಣದಲಿ ಮೆಚ್ಚುಗೆ ವ್ಯಕ್ತವಾಗಿದ್ದರೆ ಬೆನ್‌ ಸ್ಟೋಕ್ಸ್‌ ಅವರ ಟ್ವೀಟ್‌ ಗಮನ ಸೆಳೆಯಿತು.

ಹೌ ಟು ಸ್ಟಾಪ್‌ ಎಬಿ ಡಿ’ವಿಲಿಯರ್ 17 ಎಂದು ಸ್ಟೋಕ್ಸ್‌ ಟ್ವೀಟ್‌ ಮಾಡಿದ್ದರು.ಇದೇ ವೇಳೆ ಸ್ಟೋಕ್ಸ್‌ ಕ್ರಿಕೆಟ್‌ ಇತಿಹಾಸದ ಒಂದು ಅಪರೂಪದ ಕ್ಷಣವನ್ನು ಸ್ಮರಸಿಕೊಂಡರು. ಅದೇನೆಂದರೆ ಆಸ್ಟ್ರೇಲಿಯದ ಟ್ರೆವರ್‌ ಚಾಪೆಲ್‌ ಅವರು ನ್ಯೂಜಿಲ್ಯಾಂಡಿನ ಬ್ರಿಯಾನ್‌ ಮೆಕೆಂಝಿಗೆ ಅಂಡರ್‌ ಆರ್ಮ್ ಬೌಲಿಂಗ್‌ ಮಾಡಿರುವುದು ಆಗಿದೆ. ನ್ಯೂಜಿಲ್ಯಾಂಡ್‌ ತಂಡ ಪಂದ್ಯವೊಂದನ್ನು ಗೆಲ್ಲಲು ಅಂತಿಮ ಎಸೆತದಲ್ಲಿ ಆರು ರನ್‌ ಗಳಿಸಬೇಕಾಗಿತ್ತು. ಆಗ ಬ್ಯಾಟ್ಸ್‌ಮನ್‌ ಸಿಕ್ಸರ್‌ ಬಾರಿಸುವುದನ್ನು ತಪ್ಪಿಸಲು ಚಾಪೆಲ್‌ ಅಂಡರ್‌ ಆರ್ಮ್ ಬೌಲಿಂಗ್‌ ಮಾಡಿದ್ದರು.

ಉತ್ತಮವಾಗಿ ಆಡುತ್ತಿರುವ ಡಿ’ವಿಲಿಯರ್ ನಾಯಕ ವಿರಾಟ್‌ ಕೊಹ್ಲಿ ಜತೆ 63 ಮತ್ತು ಕೋರಿ ಆ್ಯಂಡರ್ಸನ್‌ ಜತೆ 56 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡು ಆರ್‌ಸಿಬಿಗೆ ಸ್ಮರಣೀಯ ಜಯ ತಂದುಕೊಟ್ಟರು. ಒಟ್ಟಾರೆ ಈ ಕೂಟದಲ್ಲಿ 212 ರನ್‌ ಪೇರಿಸಿರುವ ಅವರು ಗರಿಷ್ಠ ರನ್‌ ಗಳಿಸದವರಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.