Hubli; ವಿದ್ಯಾರ್ಥಿನಿಗೆ ನೆರವು ನೀಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್
Team Udayavani, Oct 8, 2023, 3:39 PM IST
ಹುಬ್ಬಳ್ಳಿ: ಸುಡುಗಾಡು ಸಿದ್ದರ ಕುಟುಂಬದ ಬಾಲೆಯ ವಿದ್ಯಾಭ್ಯಾಸಕ್ಕೆ ಕ್ರಿಕೆಟಿಗ ಕೆ. ಎಲ್.ರಾಹುಲ್ ನೆರವಿನ ಹಸ್ತ ಚಾಚಿದ್ದಾರೆ. ಅಲೆಮಾರಿ ಜೀವನ ನಡೆಸಿಕೊಂಡು ಬದುಕು ನಡೆಸುವ ಬಡ ಕುಟುಂಬದ ಸೃಷ್ಟಿ ಕುಲಾವಿ ಎಂಬ ವಿದ್ಯಾರ್ಥಿನಿ ಭವಿಷ್ಯದಲ್ಲಿ ವೈದ್ಯೆ ಆಗಬೇಕೆಂಬ ಆಸೆ ಹೊಂದಿದ್ದು, ಆಕೆಯ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ದೊರೆತಿದೆ.
ಧಾರವಾಡ ಸಿದ್ದೇಶ್ವರ ಕಾಲೋನಿ ವಾಸಿಯಾಗಿ ರುವ ಹನುಮಂತಪ್ಪ -ಸುಮಿತ್ರಾ ದಂಪತಿಯ ಮಗಳು ಸೃಷ್ಟಿ ಕುಲಾವಿ ಬಡತನ ಕಾರಣ ಶಿಕ್ಷಣದಿಂದ ವಂಚಿತವಾ ಗುವ ಹಾಗೆ ಆಗಿತ್ತು. ಮಾಹಿತಿ ತಿಳಿದ ಬಿಜೆಪಿ ಮುಖಂಡ ಮಂಜುನಾಥ ಹೆಬಸೂರು ಅವರು, ನೆರವಿಗಾಗಿ ಕ್ರಿಕೆಟಿಗ ರಾಹುಲ್ ಅವರನ್ನು ಸಂಪರ್ಕಿಸಿದ್ದರು.
ಇದನ್ನೂ ಓದಿ:Karnataka Politics; ಸೋಮಶೇಖರ್ ಪಕ್ಷ ಬಿಡುವುದಾದರೆ ವಿರೋಧವಿಲ್ಲ: ಸಿಪಿ ಯೋಗೇಶ್ವರ್
1996ರಲ್ಲಿ ದೀಪಕ ಗಾಂವ್ಕರ್ ಹಾಗೂ ಅನಿತಾ ಗಾಂವ್ಕರ್ ನೇತೃತ್ವದಲ್ಲಿ ಪ್ರಾರಂಭವಾದ ದಿ ಗ್ಲೋಬಲ್ ಎಕ್ಸಲೆಂಟ್ ಶಾಲೆಯಲ್ಲಿ ಸೃಷ್ಟಿ ವ್ಯಾಸಂಗ ಮಾಡಲಿದ್ದಾರೆ. ರಾಹುಲ್ ನೆರವು ನೀಡಿರುವುದು ನಮ್ಮ ಶಾಲೆ ಹಾಗೂ ನಮಗೂ ಹೆಮ್ಮೆ ಎಂದು ಶಾಲೆಯ ಪ್ರಾಂಶುಪಾಲ ಮಾಲಾಶ್ರೀ ನಯ್ಯರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್