ಒದ್ದೆ ಮೈದಾನ: ಟಿ20 ಪಂದ್ಯ ರದ್ದು
Team Udayavani, Dec 29, 2022, 11:12 PM IST
ಪ್ರಿಟೋರಿಯ: ಮಳೆ ಮತ್ತು ಮೈದಾನ ಒದ್ದೆಯಾಗಿದ್ದರಿಂದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಎರಡನೇ ವನಿತಾ ಅಂಡರ್-19 ಟಿ20 ಪಂದ್ಯವು ರದ್ದುಗೊಂಡಿದೆ.
ಆರಂಭದಲ್ಲಿ ಮಳೆಯಿಂದಾಗಿ ಟಾಸ್ ಮತ್ತು ಆಟದ ಆರಂಭವನ್ನು ವಿಳಂಬ ಮಾಡಲಾಗಿತ್ತು. ಆದರೆ ಪಿಚ್ ಮತ್ತು ಮೈದಾನ ಪರಿಶೀಲಿಸಿದ ಬಳಿಕ ಮೈದಾನ ಒದ್ದೆಯಾಗಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲು ಅಂಪಾಯರ್ಗಳು ತೀರ್ಮಾನಿಸಿದರು.
ಭಾರತ ಅಂಡರ್-19 ತಂಡವು ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಸರಣಿಯ ಮೂರನೇ ಪಂದ್ಯ ಡಿ. 31ರಂದು ನಡೆಯಲಿದೆ. ಐಸಿಸಿ ವನಿತಾ ಟಿ20 ವಿಶ್ವಕಪ್ ಕೂಟವು ದಕ್ಷಿಣ ಆಫ್ರಿಕಾದಲ್ಲಿ ಜನವರಿ 14ರಿಂದ ಆರಂಭವಾಗುವ ಕಾರಣ ಈ ಸರಣಿ ಭಾರತದ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್
ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ
Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್ ನಲ್ಲಿ ಪತ್ತೆ!
W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ
Muddebihal: ಹೆಂಡತಿಗೆ ಚೂರಿ ಇರಿದು ಪರಾರಿಯಾದ ಗಂಡ