ಸವಾರಿಯ ತಯಾರಿಯಲ್ಲಿ  ಡೆಲ್ಲಿ-ರಾಜಸ್ಥಾನ್‌ 


Team Udayavani, Apr 22, 2022, 6:15 AM IST

Untitled-1

ಮುಂಬಯಿ: “ಕೊರೊನಾ ಕೋ ಗೋಲಿ ಮಾರೋ’ ಎಂಬ ರೀತಿಯಲ್ಲಿ ಒಮ್ಮೆಲೇ ಸಿಡಿದು ನಿಂತ ಡೆಲ್ಲಿ ಕ್ಯಾಪಿಟಲ್ಸ್‌ ಬುಧವಾರ ರಾತ್ರಿಯ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ಗೆ ಯಾವ ರೀತಿ ಹೊಡೆತವಿಕ್ಕಿತು ಎಂಬುದನ್ನು ಎಲ್ಲರೂ ಬಲ್ಲರು. ರಿಷಭ್‌ ಪಂತ್‌ ಪಡೆಯ ಬೌಲಿಂಗ್‌ ಹಾಗೂ ಬ್ಯಾಟಿಂಗ್‌ ಅಷ್ಟೊಂದು ಘಾತಕವಾಗಿ ಪರಿಣಮಿಸಿತ್ತು. ಇದೇ ಜೋಶ್‌ನಲ್ಲಿ ಶುಕ್ರವಾರ ಬಲಿಷ್ಠ ರಾಜಸ್ಥಾನ್‌ ರಾಯಲ್ಸ್‌ಗೂ ಹೊಡೆತವಿಕ್ಕುವ ಯೋಜನೆ ಡೆಲ್ಲಿಯದ್ದು.

ಸಂಜು ಸ್ಯಾಮ್ಸನ್‌ ಸಾರಥ್ಯದ ರಾಜಸ್ಥಾನ್‌ ರಾಯಲ್ಸ್‌ ಈ ಕೂಟದ ಅತ್ಯಂತ ಬಲಿಷ್ಠ ತಂಡ ಎಂಬುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ತಕ್ಕ ಪ್ರದರ್ಶನ ನೀಡುತ್ತಲೇ ಬಂದಿದೆ. ಆಡಿದ ಆರರಲ್ಲಿ ನಾಲ್ಕನ್ನು ಜಯಿಸಿದ್ದು, ಎರಡನ್ನಷ್ಟೇ ಸೋತಿದೆ. ಆರೇಂಜ್‌ ಹಾಗೂ ಪರ್ಪಲ್‌ ಕ್ಯಾಪ್‌ಧಾರಿಗಳಿಬ್ಬರೂ ರಾಜಸ್ಥಾನ್‌ ತಂಡದಲ್ಲೇ ಇದ್ದಾರೆಂಬುದು ವಿಶೇಷ. ಇವರೆಂದರೆ ಅವಳಿ ಶತಕವೀರ ಜಾಸ್‌ ಬಟ್ಲರ್‌ (375 ರನ್‌) ಮತ್ತು ಹ್ಯಾಟ್ರಿಕ್‌ ಹೀರೋ ಯಜುವೇಂದ್ರ ಚಹಲ್‌ (17 ವಿಕೆಟ್‌). ಇನ್ನೊಂದೆಡೆ ಡೆಲ್ಲಿ ಆರರರಲ್ಲಿ 3 ಪಂದ್ಯಗಳನ್ನು ಜಯಿಸಿದೆ.

ರಾಜಸ್ಥಾನ್‌ ಅಮೋಘ ಆಟ :

ಡೆಲ್ಲಿಯಂತೆ ರಾಜಸ್ಥಾನ್‌ ಕೂಡ ಕಳೆದ ಪಂದ್ಯದಲ್ಲಿ ಅತ್ಯಮೋಘ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ. ಕೆಕೆಆರ್‌ ವಿರುದ್ಧದ ಬ್ಯಾಟಿಂಗ್‌ ಮೇಲಾಟದಲ್ಲಿ ಅದು 7 ರನ್ನುಗಳ ರೋಚಕ ಜಯ ಸಾಧಿಸಿತ್ತು. ಬಟ್ಲರ್‌ ಅವರ ಶತಕ, ಚಹಲ್‌ ಅವರ ಹ್ಯಾಟ್ರಿಕ್‌ ಸಾಧನೆ ಹಾಗೂ 5 ವಿಕೆಟ್‌ ಬೇಟೆಯಿಂದ ರಾಜಸ್ಥಾನ್‌ಗೆ ಗೆಲುವು ಒಲಿದಿತ್ತು. ಒಂದೇ ಓವರ್‌ನಲ್ಲಿ ಹ್ಯಾಟ್ರಿಕ್‌ ಸೇರಿದಂತೆ 4 ವಿಕೆಟ್‌ ಉಡಾಯಿಸಿದ ಚಹಲ್‌ “ಮ್ಯಾಚ್‌ ಟರ್ನರ್‌’ ಆಗಿ ಮೂಡಿಬಂದಿದ್ದರು. ಚಹಲ್‌ ಅವರ ಈ ಮ್ಯಾಜಿಕಲ್‌ ಸ್ಪೆಲ್‌ ಅಲ್ಲದೇ ಹೋಗಿದ್ದರೆ ರಾಜಸ್ಥಾನ್‌ಗೆ ಗೆಲುವು ಒಲಿಯುವುದು ಅನುಮಾನವಿತ್ತು.

ಈ ಪಂದ್ಯದಲ್ಲಿ ಟಾಸ್‌ ಪಾತ್ರ ಅಷ್ಟೇನೂ ಮಹತ್ವದ್ದಲ್ಲ. ಬೃಹತ್‌ ಮೊತ್ತವನ್ನು ಪೇರಿಸುವ ಸಾಮರ್ಥ್ಯ ಎರಡೂ ತಂಡಗಳಿಗಿದೆ. ರಾಜಸ್ಥಾನ್‌ ಬಳಗ ಬಟ್ಲರ್‌, ಪಡಿಕ್ಕಲ್‌, ಸ್ಯಾಮ್ಸನ್‌, ಹೆಟ್‌ಮೈರ್‌ ಅವರನ್ನು ನಂಬಿದೆ. ಡೆಲ್ಲಿಯಲ್ಲಿ ವಾರ್ನರ್‌, ಪೃಥ್ವಿ ಶಾ, ಪಂತ್‌, ಪೊವೆಲ್‌ ಇದ್ದಾರೆ. ಆದರೆ ಎರಡೂ ತಂಡಗಳ ಮಿಡ್ಲ್ ಆರ್ಡರ್‌ ಹೇಳುವಷ್ಟು ಗಟ್ಟಿಯಾಗಿಲ್ಲ. ಅಕಸ್ಮಾತ್‌ ಅಗ್ರ ಕ್ರಮಾಂಕ ವೈಫ‌ಲ್ಯ ಅನುಭವಿಸಿದ್ದೇ ಆದರೆ ಅಪಾಯ ತಪ್ಪಿದ್ದಲ್ಲ.

ಬೌಲಿಂಗ್‌ ಘಾತಕ :

ಎರಡೂ ತಂಡಗಳ ಬೌಲಿಂಗ್‌ ಘಾತಕ ಹಾಗೂ ವೈವಿಧ್ಯಮಯ. ಫಾಸ್ಟ್‌, ಸ್ಪಿನ್‌, ಆಲ್‌ರೌಂಡರ್ ಹೇರಳವಾಗಿದ್ದಾರೆ. ಡೆಲ್ಲಿ ತಂಡದ ಶಾದೂìಲ್‌ ಠಾಕೂರ್‌, ಖಲೀಲ್‌ ಅಹ್ಮದ್‌, ಲಲಿತ್‌ ಯಾದವ್‌, ಕುಲದೀಪ್‌ ಯಾದವ್‌, ಅಕ್ಷರ್‌ ಪಟೇಲ್‌, ಮುಸ್ತಫಿಜುರ್‌ ಕಳೆದ ಪಂದ್ಯದಲ್ಲಿ ಜಾದೂ ಮಾಡಿದ್ದಾರೆ. ಇವರೆಲ್ಲ ಸೇರಿ ರಾಜಸ್ಥಾನ್‌ ತಂಡದ ಬಲಿಷ್ಠ ಬ್ಯಾಟಿಂಗ್‌ ಸರದಿಯನ್ನು ನಿಯಂತ್ರಿಸಿದರೆ ಅದು ಡೆಲ್ಲಿಗೆ ಸಲ್ಲಲಿರುವ ದೊಡ್ಡ ಯಶಸ್ಸು.

ಹಾಗೆಯೇ ಡೆಲ್ಲಿಯ ಬ್ಯಾಟಿಂಗ್‌ ಕೂಡ ಸ್ಫೋಟಕ. ಇವರನ್ನ ತಡೆದು ನಿಲ್ಲಲು ಟ್ರೆಂಟ್‌ ಬೌಲ್ಟ್, ಪ್ರಸಿದ್ಧ್ ಕೃಷ್ಣ, ಸ್ಪಿನ್‌ದ್ವಯರಾದ ಅಶ್ವಿ‌ನ್‌, ಚಹಲ್‌ ಯಶಸ್ವಿಯಾಗಬೇಕಿದೆ.

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.