IPL Fixing;ಭ್ರಷ್ಟಾಚಾರ ತಡೆ ಕಾನೂನಿನ ಕೊರತೆಯೇ ಶ್ರೀಶಾಂತ್ ಪಾರಾಗಲು ಕಾರಣ
Team Udayavani, Apr 8, 2024, 6:20 AM IST
ಹೊಸದಿಲ್ಲಿ: “ನಮ್ಮಲ್ಲಿ ಕ್ರೀಡಾ ಭ್ರಷ್ಟಾಚಾರ ವನ್ನು ತಡೆಯಲು ಸೂಕ್ತ ಕಾನೂನುಗಳಿಲ್ಲ. ಇದ್ದಿದ್ದರೆ 2013ರ ಐಪಿಎಲ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಎಸ್. ಶ್ರೀಶಾಂತ್, ಅಜಿತ್ ಚಂಡೀಲಾ, ಅಂಕಿತ್ ಚವಾಣ್ರಂತಹ ಆಟಗಾರರು ಪಾರಾಗಲು ಸಾಧ್ಯ ವಿರಲಿಲ್ಲ… ‘ ಹೀಗೆಂದು ದಿಲ್ಲಿ ಮಾಜಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳಿದ್ದಾರೆ.
ನೀರಜ್ ನೇತೃತ್ವದಲ್ಲೇ ಕಾರ್ಯಾಚರಣೆ ನಡೆ ಸಿದ್ದ ವಿಶೇಷ ತಂಡವೊಂದು, 2013ರಲ್ಲಿ ಎಸ್. ಶ್ರೀಶಾಂತ್, ಚಂಡೀಲಾ, ಅಂಕಿತ್ ಚವಾಣ್ರನ್ನು ಬಂಧಿಸಿತ್ತು. ಇದೀಗ ಅಷ್ಟೂ ಜನ ಬಿಸಿಸಿಐ ನಿಷೇಧದಿಂದ ಪಾರಾಗಿದ್ದಾರೆ. ಶ್ರೀಶಾಂತ್ ವಿರುದ್ಧ ಬಲವಾದ ಸಾಕ್ಷ್ಯಗಳಿದ್ದರೂ, ಅವರ ವಿರುದ್ಧದ ಆಜೀವ ನಿಷೇಧವನ್ನು 7 ವರ್ಷಕ್ಕಿಳಿಸಲು 2019ರಲ್ಲಿ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು. ಪರಿಣಾಮ, ಶ್ರೀಶಾಂತ್ 2020ರಲ್ಲೇ ನಿಷೇಧದಿಂದ ಹೊರಬಂದಿದ್ದರು. ಅನಂತರ ಕೇರಳ ಪರ ರಣಜಿ ಆಡಿ ನಿವೃತ್ತಿ ಹೇಳಿದ್ದರು.
ನೀರಜ್ ಹೇಳಿದ್ದೇನು?
ಕ್ರೀಡೆಯಲ್ಲಿ ಭ್ರಷ್ಟಾಚಾರ ತಡೆಯಲು ನಮ್ಮ ದೇಶದಲ್ಲಿ ಸೂಕ್ತ ಕಾನೂನುಗಳಿಲ್ಲ. ಹೀಗಾಗಿ ಅಂತಹ ಪ್ರಕರಣಗಳು ನಿಲ್ಲುವುದಿಲ್ಲ. ಜಿಂಬಾಬ್ವೆಯಂತಹ ದೇಶದಲ್ಲೂ ಭ್ರಷ್ಟಾಚಾರ ತಡೆಯಲು ಬಲವಾದ ನಿಯಮಗಳಿವೆ. ಯೂರೋಪ್ ರಾಷ್ಟ್ರಗಳಲ್ಲೂ ನಿಯಮಗಳಿವೆ. ಕಾರಣ ಅಲ್ಲಿನ ಕ್ರಿಕೆಟ್ನಲ್ಲಿ ಮಾತ್ರವಲ್ಲ, ಫುಟ್ಬಾಲ್, ಟೆನಿಸ್ನಲ್ಲೂ ಭ್ರಷ್ಟಾಚಾ ರವಿದೆ ಎಂದು ನೀರಜ್ ಹೇಳಿದರು. 37 ವರ್ಷ ದಿಲ್ಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿರುವ ನೀರಜ್, 2000ರಲ್ಲಿ ನಡೆದ ಹ್ಯಾನ್ಸಿ ಕ್ರೋನ್ಯೆ ಫಿಕ್ಸಿಂಗ್ ಪ್ರಕರಣದಲ್ಲೂ ಕಾರ್ಯ ನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ