2nd T20I ; ಐರ್ಲೆಂಡ್ ಎದುರು ಭಾರತಕ್ಕೆ 33 ರನ್ಗಳ ಜಯ
Team Udayavani, Aug 20, 2023, 11:24 PM IST
ಡಬ್ಲಿನ್: ಐರ್ಲೆಂಡ್ ಎದುರಿನ ದ್ವಿತೀಯ ಟಿ20 ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಭಾರತ 33 ರನ್ಗಳ ಜಯ ಸಾಧಿಸಿದೆ.
ಬೌಲಿಂಗ್ ಆಯ್ದುಕೊಂಡ ಐರ್ಲೆಂಡ್ ಪವರ್ ಪ್ಲೇಯಲ್ಲಿ ಮೇಲುಗೈ ಸಾಧಿಸಿತು. ಸ್ಫೋಟಿಸುವ ಸೂಚನೆ ನೀಡಿದ ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮ ಅವರನ್ನು 34 ರನ್ ಆಗುವಷ್ಟರಲ್ಲಿ ಪೆವಿಲಿಯನ್ಗೆ ರವಾನಿಸಿತು. 5 ವಿಕೆಟಿಗೆ 185 ರನ್ ಪೇರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಐರ್ಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 152 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ರಿಂಕು ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಬುಮ್ರಾ, ಪ್ರಸಿಧ್ ಕೃಷ್ಣ, ರವಿ ಬಿಷ್ನೋಯ್ ತಲಾ ಎರಡು ವಿಕೆಟ್ ಪಡೆದರೆ, ಅರ್ಶದೀಪ್ ಸಿಂಗ್ ಒಂದು ವಿಕೆಟ್ ಪಡೆದರು. ಆರಂಭಿಕ ಆಟಗಾರ ಆಂಡ್ರ್ಯೂ ಬಲ್ಬಿರ್ನಿ 72 ರನ್ ಗಳಿಸಿ ಅಬ್ಬರಿಸಿದರು. ಹ್ಯಾರಿ ಟೆಕ್ಟರ್ 7, ಕರ್ಟಿಸ್ ಕ್ಯಾಂಫರ್ 18, ಜಾರ್ಜ್ ಡಾಕ್ರೆಲ್13 ,ಮಾರ್ಕ್ ಅಡೇರ್ 23 ರನ್ ಗಳಿಸಿ ಔಟಾದರು.
ಗಾಯಕ್ವಾಡ್ ಅರ್ಧ ಶತಕ, ಸಂಜು ಸ್ಯಾಮ್ಸನ್ ಮತ್ತು ರಿಂಕು ಸಿಂಗ್ ಅವರ ಬಿರುಸಿನ ಆಟ ಭಾರತೀಯ ಸರದಿಯ ಆಕರ್ಷಣೆ ಆಗಿತ್ತು.16ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಗಾಯಕ್ವಾಡ್ ಸರ್ವಾಧಿಕ 58 ರನ್ ಬಾರಿಸಿದರು. ಎದುರಿಸಿದ್ದು 43 ಎಸೆತ, ಸಿಡಿಸಿದ್ದು 6 ಬೌಂಡರಿ ಮತ್ತು ಒಂದು ಸಿಕ್ಸರ್.
4ನೇ ಓವರ್ನಲ್ಲಿ ಸ್ಕೋರ್ 29 ರನ್ ಆಗಿದ್ದಾಗ ಯಶಸ್ವಿ ಜೈಸ್ವಾಲ್ ವಿಕೆಟ್ ಬಿತ್ತು. ಇವರ ಗಳಿಕೆ 11 ಎಸೆತಗಳಿಂದ 18 ರನ್ (2 ಬೌಂಡರಿ, 1 ಸಿಕ್ಸರ್). ತಿಲಕ್ ವರ್ಮ ಸತತ 2ನೇ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದರು. ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿ ಔಟಾಗಿದ್ದ ವರ್ಮ, ಇಲ್ಲಿ 2 ಎಸೆತಗಳಿಂದ ಒಂದು ರನ್ ಮಾಡಿ ನಿರಾಸೆ ಮೂಡಿಸಿದರು.
3ನೇ ವಿಕೆಟಿಗೆ ಜತೆಗೂಡಿದ ರುತುರಾಜ್ ಗಾಯಕ್ವಾಡ್ ಮತ್ತು ಸಂಜು ಸ್ಯಾಮ್ಸನ್ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಕ್ರೀಸ್ ಆಕ್ರಮಿಸಿಕೊಂಡು ಬಿರುಸಿನ ಆಟಕ್ಕೆ ಮುಂದಾದರು. ತಂಡಕ್ಕೆ ಹೆಚ್ಚಿನ ಹಾನಿಯೇನೂ ಸಂಭವಿಸಲಿಲ್ಲ. 10 ಓವರ್ ಅಂತ್ಯಕ್ಕೆ ತಂಡದ ಸ್ಕೋರ್ 81ಕ್ಕೆ ಏರಿತು.
ಜೋಶುವ ಲಿಟ್ಲ ಎಸೆದ 11ನೇ ಓವರ್ನಲ್ಲಿ ಸ್ಯಾಮ್ಸನ್ ಸಿಡಿದು ನಿಂತರು. 3 ಫೋರ್, ಒಂದು ಸಿಕ್ಸರ್ ಸೇರಿದಂತೆ 18 ರನ್ ಸೂರೆಗೈದರು. ಸ್ಯಾಮ್ಸನ್ ಗಳಿಕೆ 26 ಎಸೆತಗಳಿಂದ 40 ರನ್ (5 ಬೌಂಡರಿ, 1 ಸಿಕ್ಸರ್). ಗಾಯಕ್ವಾಡ್-ಸ್ಯಾಮ್ಸನ್ 3ನೇ ವಿಕೆಟಿಗೆ 8.1 ಓವರ್ಗಳಿಂದ 71 ರನ್ ಪೇರಿಸಿದರು. ರಿಂಕು ಸಿಂಗ್ ಗಳಿಕೆ 21 ಎಸೆತಗಳಿಂದ 38 ರನ್. ಮೊದಲ ಸಲ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಬ್ಯಾಟಿಂಗ್ ಅವಕಾಶ ಪಡೆದ ಅವರು 3 ಸಿಕ್ಸರ್, 2 ಬೌಂಡರಿಗಳೊಂದಿಗೆ ಅಬ್ಬರಿಸಿದರು.ಈ ಪಂದ್ಯಕ್ಕೆ ಎರಡೂ ತಂಡ ಗಳು ಯಾವುದೇ ಬದಲಾವಣೆ ಮಾಡಿಕೊಳ್ಳಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು