ಕೊಹ್ಲಿ, ಧೋನಿಗೆ ವಿಶ್ರಾಂತಿ,ರೋಹಿತ್ ಶರ್ಮ ನಾಯಕ
Team Udayavani, Feb 26, 2018, 6:40 AM IST
ನವದೆಹಲಿ: ಶ್ರೀಲಂಕಾದಲ್ಲಿ ಮಾ.6ರಿಂದ ಆರಂಭವಾಗಲಿರುವ ನಿದಹಾಸ್ ಟಿ20 ತ್ರಿಕೋನ ಸರಣಿಗೆ ಭಾರತ ಕ್ರಿಕೆಟ್ ತಂಡದಾಯ್ಕೆ ನಡೆದಿದೆ. ನಿರೀಕ್ಷೆಯಂತೆ ನಾಯಕ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ, ವೇಗಿಗಳಾದ ಭುವನೇಶ್ವರ್ ಕುಮಾರ್, ಜಸಿøàತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ರೋಹಿತ್ ಶರ್ಮ ನಾಯಕರಾಗಿ ಆಯ್ಕೆಯಾಗಿದ್ದರೆ, ಶಿಖರ್ ಧವನ್ ಉಪನಾಯಕರಾಗಿದ್ದಾರೆ.
ತಂಡದಿಂದ ಎಡಗೈ ಲೆಗ್ಸ್ಪಿನ್ನರ್ ಕುಲದೀಪ್ ಯಾದವ್ರನ್ನೂ ಕೈಬಿಡಲಾಗಿದೆ. ಇದಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ. ಆಫ್ರಿಕಾ ಪ್ರವಾಸದಲ್ಲಿ ಕಡೆಯೆರಡು ಟಿ20 ಪಂದ್ಯದಲ್ಲೂ ಕುಲದೀಪ್ ಆಡಿರಲಿಲ್ಲ. ಆದರೆ ಯಜುವೇಂದ್ರ ಚಹಲ್ ಮತ್ತೆ ಸ್ಥಾನ ಪಡೆದಿದ್ದಾರೆ. ವಿಶ್ರಾಂತಿಯ ಕಾರಣ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹೊರಬಿದ್ದಿದ್ದಾರೆ. ಕನ್ನಡಿಗರಾದ ಕೆ.ಎಲ್.ರಾಹುಲ್, ಮನೀಶ್ ಪಾಂಡೆ ಸ್ಥಾನ ಪಡೆದಿದ್ದಾರೆ.
ಈ ಸರಣಿಯ ಅಚ್ಚರಿಯ ಆಯ್ಕೆಯೆಂದರೆ ದೆಹಲಿಯ ಸ್ಫೋಟಕ ಯುವ ಆಟಗಾರ ರಿಷಭ್ ಪಂತ್ ಸ್ಥಾನ ಪಡೆದಿದ್ದು. ಧೋನಿ ಸ್ಥಾನಕ್ಕೆ ಆಯ್ಕೆಯಾಗಬಲ್ಲ ಸಮರ್ಥ ಕ್ರಿಕೆಟಿಗ ಎಂದು ಊಹಿಸಲ್ಪಟ್ಟಿರುವ ಈ ಕ್ರಿಕೆಟಿಗ ತಂಡದಲ್ಲಿ ಸ್ಥಾನ ಖಾಯಂ ಸ್ಥಾನ ಪಡೆಯಲು ಇದುವರೆಗೆ ವಿಫಲರಾಗಿದ್ದಾರೆ. ಇದಕ್ಕೂ ಮುನ್ನ 2 ಪಂದ್ಯ ಆಡಿದ್ದರೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿರಲಿಲ್ಲ. ತಮ್ಮ ಸಾಮರ್ಥ್ಯ ತೋರಿಸಲು ಇದು ಅವರಿಗೆ ಸೂಕ್ತ ಅವಕಾಶ. ಆದರೆ ಲಂಕಾ ಪ್ರವಾಸದಲ್ಲಿ ಅವರು ವಿಕೆಟ್ ಕೀಪಿಂಗ್ ಮಾಡುವುದಿಲ್ಲ. ಬದಲಿಗೆ ದಿನೇಶ್ ಕಾರ್ತಿಕ್ ಆ ಸ್ಥಾನ ತುಂಬಲಿದ್ದಾರೆ.
ಈ ತಂಡದ ವಿಶೇಷವೆಂದರೆ 2017ರ ಡಿಸೆಂಬರ್ನಲ್ಲಿ ಭಾರತದಲ್ಲಿ ಶ್ರೀಲಂಕಾ ವಿರುದ್ಧ ಆಡಿದ್ದ ತಂಡವನ್ನೇ ಮತ್ತೆ ಆಯ್ಕೆ ಮಾಡಿದೆ. ಆಫ್ಸ್ಪಿನ್ನರ್ ವಾಷಿಂಗ್ಟನ್ ಸುಂದರ್, ವೇಗಿ ಮೊಹಮ್ಮದ್ ಸಿರಾಜ್, ಆಲ್ರೌಂಡರ್ ದೀಪಕ್ ಹೂಡಾ, ವಿಜಯ್ ಶಂಕರ್ ಆ ಸರಣಿಯಲ್ಲಿ ಸ್ಥಾನ ಪಡೆದಿದ್ದ ಆಟಗಾರರು.
ರಾಜ್ಯದ ಮಾಯಾಂಕ್ಗೆ ಬೇಸರ
ಈ ಎಲ್ಲ ಆಯ್ಕೆ ವೇಳೆ ಬೇಸರಗೊಂಡ ಕ್ರಿಕೆಟಿಗನೆಂದರೆ ಕರ್ನಾಟಕದ ಮಾಯಾಂಕ್ ಅಗರ್ವಾಲ್. ಅವರು ಈ ಋತುವಿನಲ್ಲಿ ನಡೆದ ದೇಶೀಯ ಕ್ರಿಕೆಟ್ನಲ್ಲಿ 2000 ರನ್ ಗಳಿಸಿ ದೇಶದಲ್ಲೇ ಗರಿಷ್ಠ ಸಾಧನೆ ಮಾಡಿದ್ದಾರೆ. ಇತ್ತೀಚೆಗೆ ನಡೆದ ವಿಜಯ್ ಹಜಾರೆಯಲ್ಲಿ ಸತತವಾಗಿ ಅತ್ಯುತ್ತಮ ಪ್ರದರ್ಶನ ನೀಡಿದ್ದರೂ, ಐಪಿಎಲ್ನಲ್ಲೂ ಟಿ20ಗೆ ಸೂಕ್ತ ಆಟಗಾರ ಎಂಬಂತೆ ಪ್ರದರ್ಶನ ನೀಡಿದ್ದರೂ ರಾಷ್ಟ್ರೀಯ ತಂಡದ ಕದ ತಟ್ಟಲು ಅವರು ವಿಫಲರಾಗಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಸಿಸಿಐ ಕ್ರಿಕೆಟ್ ಸಮಿತಿ ಮೂಲಗಳು, ನಾವು ನಿರ್ದಿಷ್ಟ ಮಾದರಿ ಅನುಸರಿಸುತ್ತಿದ್ದೇವೆ. ಯಾವುದೇ ದೇಶೀಯ ಕ್ರಿಕೆಟಿಗ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮುನ್ನ ಭಾರತ ಎ ತಂಡದ ಪರ ಆಡಿರಬೇಕು ಎಂದು ಹೇಳಿವೆ.
ತಂಡ ಹೀಗಿದೆ: ರೋಹಿತ್ ಶರ್ಮ (ನಾಯಕ), ಶಿಖರ್ ಧವನ್ (ಉಪನಾಯಕ), ಕೆ.ಎಲ್.ರಾಹುಲ್, ಸುರೇಶ್ ರೈನಾ, ಮನೀಶ್ ಪಾಂಡೆ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಅಕ್ಷರ್ ಪಟೇಲ್, ವಿಜಯ್ ಶಂಕರ್, ಶಾದೂìಲ್ ಠಾಕೂರ್, ಜೈದೇವ್ ಉನಾಡ್ಕತ್, ಮೊಹಮ್ಮದ್ ಸಿರಾಜ್, ರಿಷಭ್ ಪಂತ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?