ರೋಚಕ ಜಯ ಸಾಧಿಸಿದ ಲಕ್ನೋ ಜೈಂಟ್ಸ್‌ ಪ್ಲೇಆಫ್ ಗೆ ಖಚಿತ

ಪ್ಲೇಆಫ್ ನಿಂದ ಹೊರಬಿದ್ದ ಕೋಲ್ಕತ

Team Udayavani, May 18, 2022, 11:41 PM IST

ರೋಚಕ ಜಯ ಸಾಧಿಸಿದ ಲಕ್ನೋ ಜೈಂಟ್ಸ್‌ ಪ್ಲೇಆಫ್ ಗೆ ಖಚಿತ

ನವೀ ಮುಂಬೈ: ಕೆ.ಎಲ್‌.ರಾಹುಲ್‌ ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಬುಧವಾರ ಕೋಲ್ಕತ ನೈಟ್‌ರೈಡರ್ಸ್‌ ಎದುರು ರೋಚಕ ಜಯ ಸಾಧಿಸಿದೆ.

ಅಲ್ಲಿಗೆ ಅದರ ಪ್ಲೇಆಫ್ ಪ್ರವೇಶ ಅಧಿಕೃತಗೊಂಡಿದೆ. ಸೋತಿರುವ ಕೋಲ್ಕತ ತಂಡ ಹೊರಬಿದ್ದಿದೆ. ಬಾಕಿಯುಳಿದಿರುವ ಎರಡು ಸ್ಥಾನಗಳಲ್ಲಿ ಒಂದು ರಾಜಸ್ಥಾನಕ್ಕೆ ಖಚಿತವಾಗಿದೆ. ಇನ್ನೊಂದು ಸ್ಥಾನಕ್ಕಾಗಿ ಬೆಂಗಳೂರು, ಡೆಲ್ಲಿ, ಹೈದರಾಬಾದ್‌ ನಡುವೆ ಪೈಪೋಟಿಯಿದೆ.

ಬುಧವಾರ ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ಒಂದೂ ವಿಕೆಟ್‌ ಕಳೆದುಕೊಳ್ಳದೇ 20 ಓವರ್‌ಗಳಲ್ಲಿ 210 ರನ್‌ ಪೇರಿಸಿತು. ಇದನ್ನು ಬೆನ್ನತ್ತಿದ ಕೋಲ್ಕತ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 208 ರನ್‌ ಗಳಿಸಿತು. ಇಡೀ ಪಂದ್ಯ ಅತ್ಯಂತ ರೋಚಕವಾಗಿ ನಡೆಯಿತು. ಕಡೆಯ ಓವರ್‌ನ ಕಡೆಯ ಎಸೆತದವರೆಗೂ ಕೋಲ್ಕತ ಗೆಲುವು ಸಾಧಿಸಲು ಪೂರ್ಣ ಅವಕಾಶಗಳಿತ್ತು. ಆದರೆ ಕಡೆಯೆರಡು ಎಸೆತಗಳಲ್ಲಿ ಮಾರ್ಕಸ್‌ ಸ್ಟಾಯಿನಿಸ್‌ ಎರಡು ವಿಕೆಟ್‌ ಕಿತ್ತು ಪರಿಸ್ಥಿತಿಯನ್ನು ಬದಲಿಸಿದರು.

ಕೋಲ್ಕತ ಪರ ರಿಂಕು ಸಿಂಗ್‌ (40 ರನ್‌, 15 ಎಸೆತ), ಸುನೀಲ್‌ ನಾರಾಯಣ್‌ (21 ರನ್‌, 7 ಎಸೆತ) ಕೊನೆಯಲ್ಲಿ ಅದ್ಭುತ ಬ್ಯಾಟಿಂಗ್‌ ಮೂಲಕ ಲಕ್ನೋಗೆ ನಡುಕ ಹುಟ್ಟಿಸಿದ್ದರು. ಇನ್ನು ನಿತೀಶ್‌ ರಾಣಾ (42), ಶ್ರೇಯಸ್‌ ಐಯ್ಯರ್‌ (50) ಕೂಡ ಉತ್ತಮವಾಗಿ ಬ್ಯಾಟ್‌ ಬೀಸಿದ್ದರು. ಲಕ್ನೋ ಪರ ಮೋಹ್ಸಿನ್‌ ಖಾನ್‌, ಮಾರ್ಕಸ್‌ ಸ್ಟಾಯಿನಿಸ್‌ ತಲಾ 3 ವಿಕೆಟ್‌ ಕಿತ್ತು ಮಿಂಚಿದರು.

ಡಿ ಕಾಕ್‌, ರಾಹುಲ್‌ ಸ್ಫೋಟ: ಮೊದಲು ಬ್ಯಾಟ್‌ ಮಾಡಿದ ಲಕ್ನೋ ಪರ ಕೆ.ಎಲ್‌.ರಾಹುಲ್‌, ಕ್ವಿಂಟನ್‌ ಡಿ ಕಾಕ್‌ ಸ್ಫೋಟಿಸಿದರು. ಇದು ಐಪಿಎಲ್‌ ಇತಿಹಾಸದಲ್ಲಿ ಹಲವು ದಾಖಲೆಗಳ ನಿರ್ಮಾಣಕ್ಕೆ ಕಾರಣವಾಯಿತು. ಕೋಲ್ಕತದ ಯಾವ ಬೌಲರ್‌ಗಳಿಗೂ ಬಗ್ಗದ ಡಿ ಕಾಕ್‌-ರಾಹುಲ್‌ ಭರ್ಜರಿ ಬ್ಯಾಟಿಂಗ್‌ ಮೂಲಕ ಐಪಿಎಲ್‌ನ ಸ್ಮರಣೀಯ ಇನಿಂಗ್ಸ್‌ ಒಂದನ್ನು ಕಟ್ಟಿದರು.

12 ರನ್‌ ಮಾಡಿದ್ದಾಗ ಉಮೇಶ್‌ ಯಾದವ್‌ ಬೌಲಿಂಗ್‌ನಲ್ಲಿ ಅಭಿಜಿತ್‌ ತೋಮರ್‌ ಬಿಟ್ಟ ಕ್ಯಾಚ್‌ನ ಭರಪೂರ ಲಾಭವೆತ್ತಿದ ಡಿ ಕಾಕ್‌, ಐಪಿಎಲ್‌ನಲ್ಲಿ ತಮ್ಮ ದ್ವಿತೀಯ ಶತಕ ಸಂಭ್ರಮವನ್ನಾಚರಿಸಿದರು. ಅವರ 140 ರನ್‌ ಕೇವಲ 70 ಎಸೆತಗಳಿಂದ ದಾಖಲಾಯಿಸಿತು. ಸಿಡಿಸಿದ್ದು 10 ಸಿಕ್ಸರ್‌, 10 ಬೌಂಡರಿ. ಈ ಹೊಡೆತಗಳ ಮೂಲಕವೇ ಡಿ ಕಾಕ್‌ ಭರ್ತಿ 100 ರನ್‌ ರಾಶಿ ಹಾಕಿದರು. ಇದು ಡಿ ಕಾಕ್‌ ಅವರ ಸರ್ವಶ್ರೇಷ್ಠ ಬ್ಯಾಟಿಂಗ್‌ ಆಗಿದೆ.

ರಾಹುಲ್‌ 500 ರನ್‌: ಕೆ.ಎಲ್‌.ರಾಹುಲ್‌ 51 ಎಸೆತ ಎದುರಿಸಿ 68 ರನ್‌ ಹೊಡೆದರು. ಇದು 3 ಫೋರ್‌, 4 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಈ ಕಪ್ತಾನನ ಆಟದ ವೇಳೆ ರಾಹುಲ್‌ ಪ್ರಸಕ್ತ ಋತುವಿನಲ್ಲಿ 500 ರನ್‌ ಪೂರ್ತಿಗೊಳಿಸಿದರು. ಇದರೊಂದಿಗೆ ಅವರು ಐಪಿಎಲ್‌ ಸೀಸನ್‌ ಒಂದರಲ್ಲಿ 5ನೇ ಸಲ 500 ರನ್‌ ಪೇರಿಸಿದಂತಾಯಿತು. ಈ ಸಾಧನೆಯಲ್ಲಿ ಅವರಿಗೆ ವಿರಾಟ್‌ ಕೊಹ್ಲಿ, ಶಿಖರ್‌ ಧವನ್‌ ಅವರೊಂದಿಗೆ ಜಂಟಿ ದ್ವಿತೀಯ ಸ್ಥಾನ. ಡೇವಿಡ್‌ ವಾರ್ನರ್‌ 6 ಋತುಗಳಲ್ಲಿ 500 ರನ್‌ ಪೇರಿಸಿರುವುದು ದಾಖಲೆ.

ಸಂಕ್ಷಿಪ್ತ ಸ್ಕೋರ್‌: ಲಕ್ನೋ 20 ಓವರ್‌, 210 (ಡಿ ಕಾಕ್‌ 140, ರಾಹುಲ್‌ 68). ಕೋಲ್ಕತ 20 ಓವರ್‌, 208/8 (ಶ್ರೇಯಸ್‌ 50, ರಿಂಕು ಸಿಂಗ್‌ 40, ಮೊಹ್ಸಿನ್‌ ಖಾನ್‌ 20ಕ್ಕೆ 3, ಸ್ಟಾಯಿನಿಸ್‌ 23ಕ್ಕೆ 3).

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.