![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
Panaji; ಮಹೇಂದ್ರ ಸಿಂಗ್ ಧೋನಿ-ಪತ್ನಿ ಸಾಕ್ಷಿ ಜೊತೆಗೆ ಗೋವಾ ಭೇಟಿ
Team Udayavani, Feb 12, 2024, 4:38 PM IST
![ಮಹೇಂದ್ರ ಸಿಂಗ್ ಧೋನಿ-ಪತ್ನಿ ಸಾಕ್ಷಿ ಜೊತೆಗೆ ಗೋವಾ ಭೇಟಿ](https://www.udayavani.com/wp-content/uploads/2024/02/ms-620x392.jpg)
ಪಣಜಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಪತ್ನಿ ಸಾಕ್ಷಿಯೊಂದಿಗೆ ರಜೆಯನ್ನು ಆನಂದಿಸಲು ಗೋವಾಕ್ಕೆ ಬಂದಿದ್ದಾರೆ. ಅವರು ಧೋನಿಯೊಂದಿಗೆ ವಿಶೇಷ ಸ್ನೇಹಿತರನ್ನು ಸಹ ಕರೆತಂದಿದ್ದಾರೆ. ಧೋನಿ ಗೋವಾಕ್ಕೆ ಬಂದಿರುವ ಪೋಟೊ ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಐಪಿಎಲ್ 2024 ಕ್ಕಿಂತ ಮೊದಲು, ಧೋನಿ ಅವರ ಗೋವಾ ಪ್ರವಾಸವು ಸುದ್ದಿಯಲ್ಲಿದೆ ಮತ್ತು ಅವರ ಗೋವಾ ಪ್ರವಾಸದ ಫೋಟೋಗಳು ವೈರಲ್ ಆಗುತ್ತಿವೆ. ಮಹೇಂದ್ರ ಸಿಂಗ್ ಧೋನಿ ಉತ್ತರ ಗೋವಾದ ಮನೋಹರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಧೋನಿ ಗೋವಾಕ್ಕೆ ಆಗಮಿಸಿದ ಬಳಿಕ ವಿಮಾನ ನಿಲ್ದಾಣದಲ್ಲಿ ಇರುವ ವಿಡಿಯೋವನ್ನು ಅಭಿಮಾನಿಯೊಬ್ಬರು ಹಂಚಿಕೊಂಡಿದ್ದಾರೆ. ಗೋವಾ ವಿಮಾನ ನಿಲ್ದಾಣದಲ್ಲಿ ಧೋನಿ ಬಿಳಿ ಶರ್ಟ್ ಮತ್ತು ನೀಲಿ ಜೀನ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರ ಜೊತೆಯಲ್ಲಿ ಆತನ ಸ್ನೇಹಿತರು ಕೂಡ ಕಾಣಿಸಿಕೊಂಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಅವರ ಪತ್ನಿ ಸಾಕ್ಷಿ ಧೋನಿ ಮತ್ತು ಸ್ನೇಹಿತರಾದ ಪೂರ್ಣಾ ಪಟೇಲ್, ಸಿಮಂತ್ ಲೋಹಾನಿ ಮತ್ತು ಇತರ ಸ್ನೇಹಿತರೊಂದಿಗೆ ಕಾಣಿಸಿಕೊಂಡಿದ್ದಾರೆ. ಧೋನಿ ಗೋವಾದಲ್ಲಿ ವಿಶ್ರಾಂತಿ ಸಮಯವನ್ನು ಕಳೆಯುತ್ತಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಧೋನಿಗೆ ಇದೊಂದು ರಿಫ್ರೆಶ್ಮೆಂಟ್ ಟ್ರಿಪ್ ಆಗಿದೆ. ಈ ಬಾರಿಯ ಐಪಿಎಲ್ ಅವರ ಪಾಲಿಗೆ ವಿಶೇಷವಾಗಲಿದೆ. ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಚರ್ಚೆಗಳ ಪ್ರಕಾರ ಇದು ಧೋನಿಗೆ ಕೊನೆಯ ಐಪಿಎಲ್ ಸೀಸನ್ ಆಗುವ ಸಾಧ್ಯತೆ ಇದೆ. ಧೋನಿ ಭಾರತೀಯ ಕ್ರಿಕೆಟ್ ತಂಡ ಮತ್ತು ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್ನ ಪ್ರಸಿದ್ಧ ನಾಯಕರಾಗಿದ್ದಾರೆ.
ಧೋನಿ ಅವರ ಸಾಮರ್ಥ್ಯವು ತಂಡಕ್ಕೆ ಪದೇ ಪದೇ ದೊಡ್ಡ ಗೆಲುವುಗಳನ್ನು ತಂದುಕೊಟ್ಟಿದೆ, ಅವರು ತಂಡವನ್ನು ಹಲವು ಬಾರಿ ಗೆಲುವಿನ ಸಮೀಪದಲ್ಲಿ ಇರಿಸಿದ್ದಾರೆ. ಈ ಬಾರಿಯೂ ಎಲ್ಲರ ಗಮನ ಅವರ ಹಾಗೂ ತಂಡದ ಪ್ರದರ್ಶನದ ಮೇಲಿದೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.