Malaysia Open Badminton: ಕ್ರಿಸ್ಟಿಗೆ ಆಘಾತವಿಕ್ಕಿದ ಶ್ರೀಕಾಂತ್
Team Udayavani, Jan 9, 2024, 11:27 PM IST
ಕೌಲಾಲಂಪುರ: “ಮಲೇಷ್ಯಾ ಓಪನ್ ಸೂಪರ್ 1000′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಭಾರತದ ಕೆ. ಶ್ರೀಕಾಂತ್ ದೊಡ್ಡದೊಂದು ಏರುಪೇರಿನ ಫಲಿತಾಂಶ ದಾಖಲಿಸಿ ಮುಂದಡಿ ಇರಿಸಿದ್ದಾರೆ. ಅವರು ವಿಶ್ವದ 5ನೇ ರ್ಯಾಂಕಿಂಗ್ ಆಟಗಾರ, ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿಗೆ ಆಘಾತವಿಕ್ಕಿದರು.
ಕೆ. ಶ್ರೀಕಾಂತ್ ಈ ಪಂದ್ಯವನ್ನು 12-21, 21-18, 21-16 ಅಂತರದಿಂದ ತಮ್ಮದಾಗಿಸಿಕೊಂಡರು. 65 ನಿಮಿಷಗಳ ಕಾಲ ಇವರ ಹೋರಾಟ ಸಾಗಿತು. ಶ್ರೀಕಾಂತ್ ಅವರಿನ್ನು ಮಾಜಿ ನಂ.1 ಆಟಗಾರ, ಹಾಂಕಾಂಗ್ನ ಎನ್ಜಿ ಲಾಂಗ್ ಆ್ಯಂಗುಸ್ ವಿರುದ್ಧ ಸೆಣಸಲಿದ್ದಾರೆ.
ಮೊದಲ ಗೇಮ್ ಕಳೆದುಕೊಂಡಾಗ, 2ನೇ ಗೇಮ್ ಅತ್ಯಂತ ನಿಕಟ ಸ್ಪರ್ಧೆ ಕಂಡಾಗ ಶ್ರೀಕಾಂತ್ ಮೊದಲ ಸುತ್ತಿನ ಆಘಾತಕ್ಕೆ ಸಿಲುಕುವ ಸಾಧ್ಯತೆ ಇತ್ತು. ದ್ವಿತೀಯ ಗೇಮ್ನ ಆರಂಭದಲ್ಲಿ ಶ್ರೀಕಾಂತ್ 4-0 ಮುನ್ನಡೆ ಸಾಧಿಸಿದರೂ ಬಳಿಕ ಕ್ರಿಸ್ಟಿ ತಿರುಗಿ ಬಿದ್ದರು. 11-7, 17-14ರ ಮುನ್ನಡೆಯನ್ನೂ ಸಾಧಿಸಿದರು. ಆದರೆ ಅದೃಷ್ಟ ಭಾರತೀಯನ ಕಡೆ ಇತ್ತು.
ನಿರ್ಣಾಯಕ ಗೇಮ್ನಲ್ಲಿ ಶ್ರೀಕಾಂತ್ ಆಕ್ರಮಣಕಾರಿ ರಿಟರ್ನ್ಸ್ ಮೂಲಕ ಗಮನ ಸೆಳೆದರು. ಕ್ರಿಸ್ಟಿ ಕೂಡ ಕೆಲವು ತಪ್ಪುಗಳನ್ನೆಸಗಿದರು.
ಕ್ರಿಸ್ಟಿ ವಿರುದ್ಧ ಆಡಿದ 11 ಪಂದ್ಯಗಳಲ್ಲಿ ಶ್ರೀಕಾಂತ್ ದಾಖಲಿಸಿದ 6ನೇ ಜಯ ಇದಾಗಿದೆ. ಆದರೆ ಪ್ರಥಮ ಸುತ್ತಿನಲ್ಲೇ ಜಯ ಒಲಿದದ್ದು ಇದೇ ಮೊದಲು.
ತನಿಷಾ-ಅಶ್ವಿನಿ ಮುನ್ನಡೆ
ವನಿತಾ ಡಬಲ್ಸ್ನಲ್ಲಿ ತನಿಷಾ ಕ್ರಾಸ್ಟೊ-ಅಶ್ವಿನಿ ಪೊನ್ನಪ್ಪ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ. ಇವರು ಅಮೆರಿಕದ ಫ್ರಾನ್ಸೆಸ್ಕಾ ಕಾರ್ಬೆಟ್-ಅಲಿಸನ್ ಲೀ ವಿರುದ್ಧ 21-13, 21-16 ಅಂಕಗಳ ಜಯ ಸಾಧಿಸಿದರು. ಆದರೆ ವನಿತಾ ಸಿಂಗಲ್ಸ್ನಲ್ಲಿ ಆಕರ್ಷಿ ಕಶ್ಯಪ್, ಪುರುಷರ ಡಬಲ್ಸ್ನಲ್ಲಿ ಎಂ.ಆರ್. ಅರ್ಜುನ್-ಧ್ರುವ ಕಪಿಲ ಮೊದಲ ಸುತ್ತಲ್ಲೇ ಸೋಲನುಭವಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ
BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ