WPL 2024; ಪೆರ್ರಿ ದಾಳಿಗೆ ಮುಂಬೈ ಇಂಡಿಯನ್ಸ್‌ ಪಲ್ಟಿ; ಪ್ಲೇ ಆಫ್ ಗೆ ಆರ್‌ಸಿಬಿ


Team Udayavani, Mar 13, 2024, 12:28 AM IST

WPL 2024; ಪೆರ್ರಿ ದಾಳಿಗೆ ಮುಂಬೈ ಇಂಡಿಯನ್ಸ್‌ ಪಲ್ಟಿ; ಪ್ಲೇ ಆಫ್ ಗೆ ಆರ್‌ಸಿಬಿ

ಹೊಸದಿಲ್ಲಿ: ಆಸ್ಟ್ರೇಲಿಯದ ಸ್ಟಾರ್‌ ಆಲ್‌ರೌಂಡರ್‌ ಎಲ್ಲಿಸ್‌ ಪೆರ್ರಿ ಅವರ ಘಾತಕ ಬೌಲಿಂಗ್‌ ಹಾಗೂ ಉಪಯುಕ್ತ ಬ್ಯಾಟಿಂಗ್‌ ನೆರವಿನಿಂದ ಮುಂಬೈ ಇಂಡಿಯನ್ಸ್‌ಗೆ 7 ವಿಕೆಟ್‌ ಸೋಲುಣಿಸಿದ ಆರ್‌ಸಿಬಿ ವನಿತಾ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯ ಪ್ಲೇ ಆಫ್ ಸುತ್ತನ್ನು ಪ್ರವೇಶಿಸಿದೆ. ಈ ಫ‌ಲಿತಾಂಶದೊಂದಿಗೆ ಯುಪಿ ವಾರಿಯರ್ ಮತ್ತು ಗುಜರಾತ್‌ ಜೈಂಟ್ಸ್‌ ಕೂಟದಿಂದ ನಿರ್ಗಮಿಸಿವೆ.

ಮುಂಬೈ 19 ಓವರ್‌ಗಳಲ್ಲಿ 113ಕ್ಕೆ ಕುಸಿದರೆ, ಆರ್‌ಸಿಬಿ 15 ಓವರ್‌ಗಳಲ್ಲಿ 3 ವಿಕೆಟಿಗೆ 115 ರನ್‌ ಬಾರಿಸಿತು. ಇದರೊಂದಿಗೆ ಮಂಧನಾ ಪಡೆ ಲೀಗ್‌ ಅಂಕಪಟ್ಟಿಯಲ್ಲಿ 3ನೇ ಸ್ಥಾನ ಪಡೆಯಿತು. ಎಲಿಮಿನೇಟರ್‌ ಪಂದ್ಯದಲ್ಲಿ ಮತ್ತೆ ಆರ್‌ಸಿಬಿ-ಮುಂಬೈ ಮುಖಾಮುಖೀಯಾಗುವ ಸಾಧ್ಯತೆ ಇದೆ.

ಪೆರ್ರಿ 6 ವಿಕೆಟ್‌ ಸಾಧನೆ
ಆರ್‌ಸಿಬಿಯ ಬೌಲಿಂಗ್‌ ಆಯ್ಕೆಯ ನಿರ್ಧಾರವನ್ನು ಎಲ್ಲಿಸ್‌ ಪೆರ್ರಿ ಭರ್ಜರಿಯಾಗಿ ಸಮರ್ಥಿಸಿದರು. 4 ಓವರ್‌ಗಳಲ್ಲಿ ಅವರು ಕೇವಲ 15 ರನ್‌ ನೀಡಿ 6 ವಿಕೆಟ್‌ ಉಡಾಯಿಸಿದರು. ಇದು ಡಬ್ಲ್ಯುಪಿಎಲ್‌ನಲ್ಲಿ ದಾಖಲಾದ ಸರ್ವಶ್ರೇಷ್ಠ ಬೌಲಿಂಗ್‌. ಡೆಲ್ಲಿಯ ಮರಿಜಾನ್‌ ಕಾಪ್‌ ಕಳೆದ ವರ್ಷ ಗುಜರಾತ್‌ ವಿರುದ್ಧ 15 ರನ್ನಿಗೆ 5 ವಿಕೆಟ್‌ ಕೆಡವಿದ್ದು ಹಿಂದಿನ ದಾಖಲೆ ಆಗಿತ್ತು. ಆಶಾ ಸೋಭನಾ, ಟಾರಾ ನೋರಿಸ್‌ ಮತ್ತು ಜೆನ್ನಿಫ‌ರ್‌ ಗಾರ್ತ್‌ ಕೂಡ 5 ವಿಕೆಟ್‌ ಕೆಡವಿದ್ದಾರೆ.

ಮುಂಬೈ ಪರ ಎಸ್‌. ಸಾಜನಾ ಸರ್ವಾಧಿಕ 30, ಹ್ಯಾಲಿ ಮ್ಯಾಥ್ಯೂಸ್‌ 26 ರನ್‌ ಮಾಡಿದರು. ಇವರ ಮೊದಲ ವಿಕೆಟ್‌ ಜತೆಯಾಟದಲ್ಲಿ 6 ಓವರ್‌ಗಳಿಂದ 43 ರನ್‌ ಒಟ್ಟುಗೂಡಿತು. ಒಂದು ಹಂತದಲ್ಲಿ ಮುಂಬೈ ಒಂದೇ ವಿಕೆಟಿಗೆ 65 ರನ್‌ ಮಾಡಿ ದೊಡ್ಡ ಮೊತ್ತದ ಸೂಚನೆ ನೀಡಿತ್ತು. ಆದರೆ 48 ರನ್‌ ಅಂತರದಲ್ಲಿ 9 ವಿಕೆಟ್‌ ಉರುಳಿತು.

ಆರ್‌ಸಿಬಿ ಚೇಸಿಂಗ್‌ ಆಶಾದಾಯಕವಾಗೇನೂ ಇರಲಿಲ್ಲ. ಸಣ್ಣ ಗುರಿ ಎದುರಿಗಿದ್ದರೂ ರನ್‌ ಗಳಿಸಲು ಪರದಾಡಿತು. ಆರಂಭಿಕರಾದ ಸೋಫಿ ಮೊಲಿನಾಕ್ಸ್‌ (9), ಸ್ಮತಿ ಮಂಧನಾ (11) 25 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿಕೊಂಡರು. ಸೋಫಿ ಡಿವೈನ್‌ ಆಟ ನಾಲ್ಕೇ ರನ್ನಿಗೆ ಮುಗಿಯಿತು. 39 ರನ್ನಿಗೆ 3 ವಿಕೆಟ್‌ ಬಿತ್ತು.

ಆಲ್‌ರೌಂಡ್‌ ಶೋ
ಬೌಲಿಂಗ್‌ನಲ್ಲಿ ಮಿಂಚಿದ ಎಲ್ಲಿಸ್‌ ಪೆರ್ರಿಯೇ ಆರ್‌ಸಿಬಿಯ ಬ್ಯಾಟಿಂಗ್‌ ರಕ್ಷಣೆಗೆ ನಿಲ್ಲಬೇಕಾಯಿತು. ಇವರಿಗೆ ರಿಚಾ ಘೋಷ್‌ ಉತ್ತಮ ಬೆಂಬಲವಿತ್ತರು. ಇಬ್ಬರೂ ಮುಂಬೈ ಬೌಲಿಂಗ್‌ ದಾಳಿಯನ್ನು ಯಾವುದೇ ಒತ್ತಡವಿಲ್ಲದೆ ಎದುರಿಸಿ ತಂಡದ ಮೊತ್ತವನ್ನು ಏರಿಸುತ್ತ ಹೋದರು. ಈ ಜೋಡಿಯಿಂದ ಮುರಿಯದ 4ನೇ ವಿಕೆಟಿಗೆ 53 ಎಸೆತಗಳಿಂದ 76 ರನ್‌ ಒಟ್ಟುಗೂಡಿತು.

ಎಲ್ಲಿಸ್‌ ಪೆರ್ರಿ 38 ಎಸೆತಗಳಿಂದ ಅಜೇಯ 40 ರನ್‌ (5 ಬೌಂಡರಿ, 1 ಸಿಕ್ಸರ್‌) ಮತ್ತು ರಿಚಾ ಘೋಷ್‌ 28 ಎಸೆತಗಳಿಂದ ಅಜೇಯ 36 ರನ್‌ ಮಾಡಿದರು (4 ಬೌಂಡರಿ, 2 ಸಿಕ್ಸರ್‌).ಆಲ್‌ರೌಂಡ್‌ ಸಾಹಸಕ್ಕಾಗಿ ಎಲ್ಲಿಸ್‌ ಪೆರ್ರಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಡೆಲ್ಲಿ-ಗುಜರಾತ್‌: ಇಂದು ಕೊನೆಯ ಲೀಗ್‌ ಪಂದ್ಯ
ವನಿತಾ ಪ್ರೀಮಿಯರ್‌ ಲೀಗ್‌ನ ಕೊನೆಯ ಲೀಗ್‌ ಪಂದ್ಯ ಬುಧವಾರ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ನಡುವೆ ನಡೆಯಲಿದೆ. ಅಂತಿಮ ಸ್ಥಾನದಲ್ಲಿರುವ ಗುಜರಾತ್‌ ತಂಡಕ್ಕೆ ಇದು ಕೇವಲ ಪ್ರತಿಷ್ಠೆಯ ಪಂದ್ಯ. ಲೆಕ್ಕಾಚಾರವಿಲ್ಲದೆ ಅಗ್ರಸ್ಥಾನಕ್ಕೇರಬೇಕಾದರೆ ಡೆಲ್ಲಿಗೆ ಗೆಲುವು ಅಗತ್ಯವಿದೆ. ಗೆದ್ದರೆ ಅದು ನೇರವಾಗಿ ಫೈನಲ್‌ ತಲುಪಲಿದೆ. 2ನೇ ಹಾಗೂ 3ನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್‌ ಸುತ್ತಿನಲ್ಲಿ ಆಡಲಿವೆ. ಇಲ್ಲಿ ಗೆದ್ದ ತಂಡ ಫೈನಲ್‌ ತಲುಪಲಿದೆ.

ಡೆಲ್ಲಿ 7 ಪಂದ್ಯಗಳನ್ನಾಡಿದ್ದು, ಐದನ್ನು ಗೆದ್ದು 2 ಪಂದ್ಯಗಳನ್ನು ಸೋತಿದೆ. ಗುಜರಾತ್‌ನದ್ದು ಡೆಲ್ಲಿಗೆ ತದ್ವಿರುದ್ಧ ಸಾಧನೆ. 7 ಪಂದ್ಯಗಳಲ್ಲಿ ಗೆದ್ದದ್ದು ಎರಡನ್ನು ಮಾತ್ರ. ಉಳಿದ ಐದನ್ನು ಸೋತಿದೆ.

ಶುಕ್ರವಾರ ಎಲಿಮಿನೇಟರ್‌ ಪಂದ್ಯ, ರವಿವಾರ ಫೈನಲ್‌ ಪಂದ್ಯ ನಡೆಯಲಿದೆ.

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.