500ನೇ ರಣಜಿ ಪಂದ್ಯ ಆಡಲಿರುವ ಮುಂಬಯಿ


Team Udayavani, Nov 9, 2017, 7:40 AM IST

Mumbai-500-match.jpg

ಮುಂಬಯಿ: ಇಲ್ಲಿನ ವಾಂಖೇಡೆ ಕ್ರೀಡಾಂಗಣದಲ್ಲಿ ಗುರುವಾರದಿಂದ ಆರಂಭವಾಗುವ ಬರೋಡ ವಿರುದ್ಧದ ರಣಜಿ ಟ್ರೋಫಿ ಕ್ರಿಕೆಟ್‌ ಕೂಟದ “ಸಿ’ ಬಣದ ಪಂದ್ಯವು ನಮ್ಮ ಪಾಲಿಗೆ “ವಿಶೇಷ’ ಎಂದು ಮುಂಬಯಿ ತಂಡದ ನಾಯಕ ಆದಿತ್ಯ ತಾರೆ ಹೇಳಿದ್ದಾರೆ. 

ಈ ಪಂದ್ಯ ರಣಜಿ ಟ್ರೋಫಿಯ ಸುದೀರ್ಘ‌ ಇತಿಹಾಸದಲ್ಲಿ 41 ಬಾರಿಯ ಚಾಂಪಿಯನ್‌ ಆಗಿರುವ ಮುಂಬಯಿ ಆಡಲಿರುವ 500ನೇ ರಣಜಿ ಪಂದ್ಯವಾಗಲಿದೆ.

ಇದೊಂದು ನಮ್ಮ ಪಾಲಿಗೆ ವಿಶೇಷ ಪಂದ್ಯವಾಗಿದೆ. ಬಲಿಷ್ಠ ತಂಡವೊಂದು 500ನೇ ರಣಜಿ ಟ್ರೋಫಿ ಪಂದ್ಯ ಆಡುತ್ತಿರುವುದು ತುಂಬ ಖುಷಿ ನೀಡುತ್ತಿದೆ. ಇದೊಂದು ನಮ್ಮ ಪಾಲಿಗೆ ಬಲುದೊಡ್ಡ ಸ್ಮರಣೀಯ ಪಂದ್ಯವಾಗಲಿದೆ ಎಂದು ತಾರೆ ಹೇಳಿದ್ದಾರೆ. ಅಜಿಂಕ್ಯ ರಹಾನೆ ಮತ್ತು ಶ್ರೇಯ್‌ ಅಯ್ಯರ್‌ ಮರಳಿರುವ ಕಾರಣ ಮುಂಬಯಿ ಪರಿಪೂರ್ಣ ಶಕ್ತಿಯೊಂದಿಗೆ ಬರೋಡ ವಿರುದ್ಧ ಹೋರಾಡಲಿದೆ. ಹೀಗಾಗಿ ತಾರೆ ಬಹಳಷ್ಟು ಈ ಪಂದ್ಯ ಆಡಲು ಉತ್ಸುಕರಾಗಿದ್ದಾರೆ.

ರಣಜಿ ಟ್ರೋಫಿಯ ಆರಂಭದಿಂದ ಇಲ್ಲಿಯತನಕ ಮುಂಬಯಿ ತಂಡಕ್ಕೆ ಬಹಳಷ್ಟು ಮಂದಿ ಕೊಡುಗೆ ಸಲ್ಲಿಸಿದ್ದಾರೆ. ಅದೃಷ್ಟವಶಾತ್‌ ನಮ್ಮ ಪಾಲಿಗೆ 500ನೇ ಪಂದ್ಯವನ್ನಾಡುವ ಅವಕಾಶ ಸಿಕ್ಕಿದೆ. ಮುಂಬಯಿ ತಂಡವನ್ನು ಪ್ರತಿನಿಧಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ತಾರೆ ಹೇಳಿದರು.

ಮುಂಬಯಿ ಕಳೆದ ಋತುವಿನಲ್ಲಿ ರನ್ನರ್‌ ಅಪ್‌ ಸ್ಥಾನ ಪಡೆದಿತ್ತು. ಫೈನಲ್‌ನಲ್ಲಿ ಮುಂಬಯಿ ತಂಡವನ್ನು ಕೆಡಹಿದ ಗುಜರಾತ್‌ ಚೊಚ್ಚಲ ಬಾರಿ ಪ್ರಶಸ್ತಿ ಜಯಿಸಿತ್ತು. ಈ ಬಾರಿ ಮುಂಬಯಿ 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಬರೋಡ 4 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಎರಡೂ ತಂಡಗಳು ಮೂರು ಪಂದ್ಯಗಳನ್ನಾಡಿವೆ.

ಇದೊಂದು ತೀವ್ರ ಪೈಪೋಟಿಯ ಪಂದ್ಯವಾಗಿರಬಹುದು. ಆದರೆ ನಾವು ಪ್ರತಿಯೊಂದು ಪಂದ್ಯವನ್ನು ಹೊಸ ಪಂದ್ಯವೆಂದು ಭಾವಿಸುತ್ತೇವೆ. ಇದು ನಮಗೆ ಮುಖ್ಯ ಕೂಡ ಮತ್ತು ಗೆಲುವೊಂದು ನಮ್ಮ ಗುರಿ. ಸಕಾರಾತ್ಮಕವಾಗಿ ಆಡಿ ಗರಿಷ್ಠ ಅಂಕ ಗೆಲ್ಲಲು ಪ್ರಯತ್ನಿಸಲಿದ್ದೇವೆ ಎಂದು ತಾರೆ ಹೇಳಿದರು.ದೀರ್ಘ‌ ಸಮಯದ ಬಳಿಕ ನಾವು ವಾಂಖೇಡೆಯಲ್ಲಿ ಆಡುತ್ತಿದ್ದೇವೆ. ತವರಿನ ಡ್ರೆಸ್ಸಿಂಗ್‌ ಕೊಠಡಿಗೆ ಆಗಮಿಸುವುದು ತಂಡವೂ ಬಲಿಷ್ಠವೂ ಆಗಿರುವುದು ಖುಷಿಯ ವಿಷಯ ಎಂದವರು ವಿವರಿಸಿದರು.

ಪ್ರತಿಯೊಂದು ಪಂದ್ಯ ನಮ್ಮ ಪಾಲಿಗೆ ಮುಖ್ಯವಾಗಿದೆ. ಯಾಕೆಂದರೆ ಅಂಕಪಟ್ಟಿಯಲ್ಲಿ ನಮಗಿಂತ ಎರಡು ತಂಡಗಳು ಮುನ್ನಡೆಯಲ್ಲಿವೆ. ಅಗ್ರಸ್ಥಾನಕ್ಕೇರುವುದು ನಮ್ಮ ಗುರಿಯಾಗಿದೆ ಎಂದ ಅವರು ನಾವು ಈಗಾಗಲೇ ಐದು ಶತಕ ಬಾರಿಸಿದ್ದೇವೆ. ಬ್ಯಾಟಿಂಗ್‌ ಶಕ್ತಿ ಬಲಿಷ್ಠವಾಗಿದೆ ಮತ್ತು ನಾವು ಉತ್ತಮ ಫಾರ್ಮ್ನಲ್ಲಿದ್ದೇವೆ ಎಂದರು.

ಬರೋಡ ತಂಡವನ್ನು ದೀಪಕ್‌ ಹೂಡ ಮುನ್ನಡೆಸಲಿದ್ದಾರೆ. ತಂಡ ಪಾಂಡ್ಯ ಸಹೋದರ ಸಹಿತ ಪಠಾಣ್‌ ಸಹೋದರರ ಸೇವೆಯಿಂದ ವಂಚಿತವಾಗಿದೆ. ಇರ್ಫಾನ್‌ ಪಠಾಣ್‌ ಕಳೆದ ವರ್ಷ ಬರೋಡ ತಂಡದ ನಾಯಕತ್ವ ವಹಿಸಿದ್ದರು. ಆದರೆ ಪಠಾಣ್‌ ಸಹೋದರರ ಅನುಪಸ್ಥಿತಿ ಬಗ್ಗೆ ಹೂಡ ಅಥವಾ ಮುಖ್ಯ ಕೋಚ್‌ ಅತುಲ್‌ ಬೆಡಾಡೆ ಅವರು ಕಾರಣಗಳನ್ನು ತಿಳಿಸಿಲ್ಲ.

ಟಾಪ್ ನ್ಯೂಸ್

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.