![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
New Zealand vs Australia: 1ನೇ ಟೆಸ್ಟ್; ಕಿವೀಸ್ ಎದುರು ಗ್ರೀನ್ ಶತಕ
Team Udayavani, Feb 29, 2024, 9:20 PM IST
![New Zealand vs Australia: 1ನೇ ಟೆಸ್ಟ್; ಕಿವೀಸ್ ಎದುರು ಗ್ರೀನ್ ಶತಕ](https://www.udayavani.com/wp-content/uploads/2024/02/18-6-620x372.jpg)
ವೆಲ್ಟಿಂಗ್ಟನ್: ಕ್ಯಾಮೆರಾನ್ ಗ್ರೀನ್ ಅವರ ಅಜೇಯ ಶತಕದ ಸಾಧನೆಯಿಂದ ಪ್ರವಾಸಿ ಆಸ್ಟ್ರೇಲಿಯ ತಂಡವು ನ್ಯೂಜಿಲ್ಯಾಂಡ್ ತಂಡೆದುರಿನ ಪ್ರಥಮ ಟೆಸ್ಟ್ ಪಂದ್ಯದ ಮೊದಲ ದಿನ 9 ವಿಕೆಟಿಗೆ 279 ರನ್ನುಗಳ ಸಾಧಾರಣ ಮೊತ್ತ ಪೇರಿಸಿದೆ.
ಮ್ಯಾಟ್ ಹೆನ್ರಿ ಸಹಿತ ನ್ಯೂಜಿಲೆಂಡಿನ ಬಿಗುದಾಳಿಯೆದುರು ರನ್ ಗಳಿಸಲು ಪರದಾಡಿದ ಆಸ್ಟ್ರೇಲಿಯದ ಆಟಗಾರರು ನಿಧಾನವಾಗಿ ಎಚ್ಚರಿಕೆಯಿಂದ ಆಡಿದರು. ಆಗಾಗ್ಗೆ ವಿಕೆಟ್ ಕಳೆದುಕೊಂಡಿದ್ದರಿಂದ ತಂಡ ಒತ್ತಡಕ್ಕೂ ಬಿತ್ತು. ಆರಂಭಿಕರ ಬಳಿಕ ಗ್ರೀನ್ ಮತ್ತು ಮಿಚೆಲ್ ಮಾರ್ಷ್ ಅವರ ಉತ್ತಮ ಆಟದಿಂದಾಗಿ ಆಸ್ಟ್ರೇಲಿಯ ಸಾಧಾರಣ ಮೊತ್ತ ಪೇರಿಸಲು ಯಶಸ್ವಿಯಾಯಿತು.
ಇನಿಂಗ್ಸ್ ಆರಂಭಿಸಿದ ಉಸ್ಮಾನ್ ಖವಾಜ ಮತ್ತು ಸ್ಟೀವನ್ ಸ್ಮಿತ್ ಅವರು ಮೊದಲ ವಿಕೆಟಿಗೆ 61 ರನ್ ಪೇರಿಸಿದರು. ಆಬಳಿಕ ಕುಸಿದ ಆಸ್ಟ್ರೇಲಿಯ 89 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಈ ಹಂತದಲ್ಲಿ ಗ್ರೀನ್ ಅವರನ್ನು ಸೇರಿಕೊಂಡ ಮಿಚೆಲ್ ಮಾರ್ಷ್ ಐದನೇ ವಿಕೆಟಿಗೆ 67 ರನ್ನುಗಳ ಜತೆಯಾಟ ನಡೆಸಿದರು. ಮಾರ್ಷ್ 40 ರನ್ನಿಗೆ ಔಟಾದರೆ ಗ್ರೀನ್ 103 ರನ್ ಗಳಿಸಿ ಅಜೇಯರಾಗಿ ಉಳಿದರು. 155 ಎಸೆತ ಎದುರಿಸಿದ ಅವರು 16 ಬೌಂಡರಿ ಬಾರಿಸಿದ್ದರು.
ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್: 9 ವಿಕೆಟಿಗೆ 279 (ಸ್ಟೀವನ್ ಸ್ಮಿತ್ 31, ಉಸ್ಮಾನ್ ಖ್ವಾಜಾ 33, ಕ್ಯಾಮರೂನ್ ಗ್ರೀನ್ 103 ಔಟಾಗದೆ, ಮಿಚೆಲ್ ಮಾರ್ಷ್ 40, ಮ್ಯಾಟ್ ಹೆನ್ರಿ 43ಕ್ಕೆ 4).
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.