ಅಜರುದ್ದೀನ್-ಅಂಬಾಟಿ ನಡುವೆ ಈಗ ವಾಗ್ವಾದ
Team Udayavani, Nov 27, 2019, 12:27 AM IST
ಹೈದರಾಬಾದ್: ಹೈದರಾಬಾದ್ ಕ್ರಿಕೆಟ್ ತಂಡದ ನಾಯಕ ಅಂಬಾಟಿ ರಾಯುಡು ಹಾಗೂ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಅಜರುದ್ದೀ ನ್ ನಡುವೆ ಈಗ ವಾಗ್ವಾದ ಶುರು ವಾಗಿದೆ. ಶನಿವಾರವಷ್ಟೇ ಅಂಬಾಟಿ, ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಭ್ರಷ್ಟಾಚಾರದ ಕೂಪ ಎಂದಿದ್ದರು. ಇದಕ್ಕೆ ಅಜರುದ್ದೀನ್, ಅಂಬಾಟಿ ಹತಾಶೆಗೊಂಡಿರುವ ಆಟಗಾರ ಎಂದು ಪ್ರತಿಕ್ರಿಯಿಸಿದ್ದರು ಎನ್ನಲಾ ಗಿದೆ. ಇದಕ್ಕೆ ಮತ್ತೆ ಟ್ವೀಟ್ನಲ್ಲಿ ಅಂಬಾಟಿ ಪ್ರತಿಕ್ರಿಯಿಸಿದ್ದಾರೆ.
ಅಜರುದ್ದೀನ್ ಅವರೇ, ನನ್ನ ಮಾತನ್ನು ವೈಯಕ್ತಿಕವಾಗಿ ತೆಗೆದು ಕೊಳ್ಳಬೇಡಿ. ವಿವಾದ ನಮ್ಮಿಬ್ಬರನ್ನು ಮೀರಿದ ಸಂಗತಿ. ನಮ್ಮಿಬ್ಬರಿಗೂ ಹೈದರಾಬಾದ್ ಕ್ರಿಕೆಟ್ ಸಂಸ್ಥೆಯಲ್ಲಿ ಏನು ನಡೆಯುತ್ತಿದೆ ಎಂದು ಗೊತ್ತಿದೆ. ಆಗಾಗ ಬಂದುಹೋಗುವ ದಗಾಕೋರರಿಂದ ನೀವು ಸಂಪೂರ್ಣ ಅಂತರ ಕಾಯ್ದುಕೊಳ್ಳಿ. ಆಗ ನೀವು ಭವಿಷ್ಯದ ಕ್ರಿಕೆಟಿಗರನ್ನು ಉಳಿಸುತ್ತೀರಿ’ ಎಂದು ರಾಯುಡು ಅಜರುದ್ದೀನ್ಗೆ ಹೇಳಿದ್ದಾರೆ.
ಕಳೆದ ಏಕದಿನ ವಿಶ್ವಕಪ್ ಅನಂತರ ರಾಯುಡು ಮಾಡುತ್ತಿರುವ 2ನೇ ಟ್ವೀಟ್ ಇದು. ವಿಶ್ವಕಪ್ ವೇಳೆ ತಮ್ಮನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಅವರು ಆಕ್ರೊ àಶ ವ್ಯಕ್ತಪಡಿಸಿದ್ದರು. ಅನಂತರ ಬೇಸತ್ತು ಎಲ್ಲ ಮಾದರಿಯ ಕ್ರಿಕೆಟ್ಗೂ ನಿವೃತ್ತಿ ಹೇಳಿದ್ದರು. ಅನಂತರ ಕೆಲ ಮಾಜಿ ಕ್ರಿಕೆಟಿಗರ ಮನವೊಲಿಕೆಗೆ ಒಪ್ಪಿ, ಮತ್ತೆ ನಿವೃತ್ತಿ ಯಿಂದ ಹೊರಬಂದಿದ್ದರು.