ಕಿರಿಯರಿಗೆ ಒಲಿಯಿತು ಏಕದಿನ ಸರಣಿ


Team Udayavani, Feb 7, 2017, 3:45 AM IST

06-SPO-6.jpg

ಮುಂಬಯಿ: ಪ್ರವಾಸಿ ಇಂಗ್ಲೆಂಡ್‌ ಮೇಲೆ ಭಾರತದ ಕಿರಿಯರೂ ಸವಾರಿ ಮಾಡಿದ್ದಾರೆ. 5 ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡು ಮೆರೆದಿದ್ದಾರೆ.

ಪ್ರತಿಭಾನ್ವಿತ ಓಪನರ್‌ ಶುಭಂ ಗಿಲ್‌ ಬಾರಿಸಿದ ಸತತ 2ನೇ ಶತಕ, ವನ್‌ಡೌನ್‌ ಬ್ಯಾಟ್ಸ್‌ಮನ್‌ ಪೃಥ್ವಿ ಶಾ ಅವರ 105 ರನ್‌ ಸಾಹಸದಿಂದ ಅಂಡರ್‌-19 ಸರಣಿಯ 4ನೇ ಏಕದಿನ ಪಂದ್ಯವನ್ನು ಭಾರತ 230 ರನ್ನುಗಳ ಬೃಹತ್‌ ಅಂತರದಿಂದ ಗೆದ್ದು ಸರಣಿ ಮೇಲೆ ಹಕ್ಕು ಸ್ಥಾಪಿಸಿತು.

“ವಾಂಖೇಡೆ ಸ್ಟೇಡಿಯಂ’ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತದ ಕಿರಿಯರು 9 ವಿಕೆಟಿಗೆ 382 ರನ್‌ ಸೂರೆಗೈದರೆ, ಈ ಬೃಹತ್‌ ಮೊತ್ತವನ್ನು ಕಂಡು ಬೆದರಿದಂತೆ ಆಡಿದ ಇಂಗ್ಲೆಂಡ್‌ 37.4 ಓವರ್‌ಗಳಲ್ಲಿ 152ಕ್ಕೆ ಆಲೌಟ್‌ ಆಯಿತು. 5ನೇ ಹಾಗೂ ಅಂತಿಮ ಪಂದ್ಯ ಫೆ. 8ರಂದು ಮುಂಬಯಿಯಲ್ಲೇ ನಡೆಯಲಿದೆ.

ಗಿಲ್‌ ಜೀವನಶ್ರೇಷ್ಠ ಸಾಧನೆ
ಪಂಜಾಬ್‌ ಆರಂಭಕಾರ ಶುಭಂ ಗಿಲ್‌ ಮತ್ತೂಮ್ಮೆ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶಿಸಿ 160 ರನ್‌ ಸಿಡಿಸಿದರು. ಇದು ಈ ಸರಣಿಯಲ್ಲಿ ಗಿಲ್‌ ಬಾರಿಸಿದ ಸತತ 2ನೇ ಶತಕ ಹಾಗೂ ಜೀವನಶ್ರೇಷ್ಠ ಸಾಧನೆ. 3ನೇ ಪಂದ್ಯದಲ್ಲಿ ಗಿಲ್‌ ಅಜೇಯ 138 ರನ್‌ ಮಾಡಿ ಇಂಗ್ಲೆಂಡ್‌ ಬೌಲರ್‌ಗಳನ್ನು ಕಾಡಿದ್ದರು. ಸೋಮವಾರದ ಮುಖಾಮುಖೀಯಲ್ಲಿ ಇವರಿಗೆ ಮುಂಬಯಿಯ ಪೃಥ್ವಿ ಶಾ ಉತ್ತಮ ಬೆಂಬಲವಿತ್ತರು. ವನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬಂದ ಶಾ ಗಳಿಕೆ 105 ರನ್‌. ಇವರಿಬ್ಬರ 3ನೇ ವಿಕೆಟ್‌ ಜತೆಯಾಟದಲ್ಲಿ 231 ರನ್‌ ಹರಿದು ಬಂತು. 

ಗಿಲ್‌ 160 ರನ್ನಿಗೆ ಎದುರಿಸಿದ್ದು ಕೇವಲ 120 ಎಸೆತ. ಸಿಡಿಸಿದ್ದು 23 ಬೌಂಡರಿ ಹಾಗೂ ಒಂದು ಸಿಕ್ಸರ್‌. ಶಾ 89 ಎಸೆತಗಳಿಂದ ತಮ್ಮ ಇನ್ನಿಂಗ್ಸ್‌ ಕಟ್ಟಿದರು. ಇದರಲ್ಲಿ 12 ಬೌಂಡರಿ, 2 ಸಿಕ್ಸರ್‌ ಸೇರಿತ್ತು. 16ನೇ ಓವರಿನಲ್ಲಿ ಜತೆಗೂಡಿದ ಈ ಜೋಡಿ 43ನೇ ಓವರ್‌ ತನಕವೂ ಕ್ರೀಸಿಗೆ ಅಂಟಿಕೊಂಡು ನಿಂತಿತು.

ಇಂಗ್ಲೆಂಡ್‌ ಬ್ಯಾಟಿಂಗ್‌ ಸರದಿಗೆ ಗಂಡಾಂತರ ತಂದಿತ್ತವರು ರಾಜಸ್ಥಾನದ ಮಧ್ಯಮ ವೇಗಿ ಕಮಲೇಶ್‌ ನಾಗರ್ಕೋಟಿ (31ಕ್ಕೆ 4). ಜತೆಗೆ ವಿವೇಕಾನಂದ ತಿವಾರಿ (20ಕ್ಕೆ 3) ಮತ್ತು ಶಿವಂ ಮಾವಿ (18ಕ್ಕೆ 2) ಕೂಡ ಮಿಂಚಿನ ಬೌಲಿಂಗ್‌ ನಡೆಸಿದರು. 16 ರನ್‌ ಆಗುವಷ್ಟರಲ್ಲಿ 3 ವಿಕೆಟ್‌ ಉದುರಿಸಿಕೊಂಡ ಇಂಗ್ಲೆಂಡ್‌ ಯಾವ ಹಂತದಲ್ಲೂ ಹೋರಾಟದ ಲಕ್ಷಣ ತೋರಲಿಲ್ಲ. ಕೀಪರ್‌ ಒಲೀ ಪೋಪ್‌ 59, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ ವಿಲ್‌ ಜಾಕ್ಸ್‌ 44 ರನ್‌ ಮಾಡಿದ್ದೇ ದೊಡ್ಡ ಮೊತ್ತಗಳಾಗಿ ದಾಖಲಾದವು.

ಸಂಕ್ಷಿಪ್ತ ಸ್ಕೋರ್‌: ಭಾರತದ ಕಿರಿಯರು-9 ವಿಕೆಟಿಗೆ 382 (ಗಿಲ್‌ 160, ಶಾ 105, ರಾಣ 33, ಬ್ರೂಕ್ಸ್‌ 58ಕ್ಕೆ 2, ಗೋಡ್ಸಲ್‌ 78ಕ್ಕೆ 2, ರಾಲಿನ್ಸ್‌ 78ಕ್ಕೆ 2). ಇಂಗೆಂಡ್‌ ಕಿರಿಯರು-37.4 ಓವರ್‌ಗಳಲ್ಲಿ 152 (ಪೋಪ್‌ 59, ಜಾಕ್ಸ್‌ 44, ನಾಗರ್ಕೋಟಿ 31ಕ್ಕೆ 4, ತಿವಾರಿ 20ಕ್ಕೆ 3, ಮಾವಿ 18ಕ್ಕೆ 2).

ಟಾಪ್ ನ್ಯೂಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.