ಪ್ರಶಾಂತ್‌ ಚೋಪ್ರಾ: ಹುಟ್ಟುಹಬ್ಬದಂದೇ ತ್ರಿಶತಕ!


Team Udayavani, Oct 8, 2017, 7:00 AM IST

PRASHANTH-CHOPRA.jpg

ಧರ್ಮಶಾಲಾ: ಕ್ರಿಕೆಟಿಗನೊಬ್ಬನ ಹುಟ್ಟುಹಬ್ಬಕ್ಕೆ ತ್ರಿಶತಕಕ್ಕಿಂತ ಮಿಗಿಲಾದ ಉಡುಗೊರೆ ಖಂಡಿತ ಇರಲಿಕ್ಕಿಲ್ಲ. ಈ ಭರ್ಜರಿ ಉಡುಗೊರೆಯೊಂದು ಹಿಮಾಚಲ ಪ್ರದೇಶದ ಆರಂಭಕಾರ ಪ್ರಶಾಂತ್‌ ಚೋಪ್ರಾ ಪಾಲಾಗಿದೆ. ಶನಿವಾರ “25ನೇ ಬರ್ತ್‌ಡೇ’ಯಂದೇ ಅವರು ಪಂಜಾಬ್‌ ವಿರುದ್ಧದ ರಣಜಿ ಪಂದ್ಯದಲ್ಲಿ 338 ರನ್‌ ಬಾರಿಸಿ ಮಿಂಚಿದರು.

ಚೋಪ್ರಾ ಸಾಹಸದಿಂದ ಹಿಮಾಚಲ 8ಕ್ಕೆ 729 ರನ್‌ ಬಾರಿಸಿ ಮೊದಲ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿತು. ಜವಾಬಿತ್ತ ಪಂಜಾಬ್‌ 2ನೇ ದಿನದಾಟದ ಮುಕ್ತಾಯಕ್ಕೆ ಒಂದು ವಿಕೆಟ್‌ ಕಳೆದುಕೊಂಡು 110 ರನ್‌ ಮಾಡಿದೆ.

ಧರ್ಮಶಾಲಾದಲ್ಲಿ ನಡೆಯುತ್ತಿರುವ ಈ ರಣಜಿ ಪಂದ್ಯದ ಮೊದಲ ದಿನ ಪ್ರಶಾಂತ್‌ ಚೋಪ್ರಾ 271 ರನ್‌ ಬಾರಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದರು. ದ್ವಿತೀಯ ದಿನ ತ್ರಿಶತಕದ ಅಭಿಯಾನವನ್ನು ಪೂರ್ತಿಗೊಳಿಸಿದರು. ಆದರೆ ಭಾರತ “ಎ’ ತಂಡಕ್ಕೆ ಆಯ್ಕೆಯಾಗಿರುವ ಚೋಪ್ರಾ ಮುಂದಿನ ರಣಜಿ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಜನ್ಮದಿನದಂದೇ ತ್ರಿಶತಕ ಹೊಡೆದ ಕೇವಲ 3ನೇ ಅದೃಷ್ಟಶಾಲಿ ಪ್ರಶಾಂತ್‌ ಚೋಪ್ರಾ. 2ನೇ ಭಾರತೀಯನೂ ಹೌದು. 1932ರ ಡಿ. 24ರಂದು ಎಂಸಿಸಿ ಪರ ಆಡುತ್ತಿದ್ದ ಕಾಲಿನ್‌ ಕೌಡ್ರಿ ಸೌತ್‌ ಆಸ್ಟ್ರೇಲಿಯ ವಿರುದ್ಧ 307 ರನ್‌ ಹೊಡೆದಿದ್ದರು. ಬಳಿಕ ಈ ಸಾಲಿಗೆ ಸೇರ್ಪಡೆಗೊಂಡವರು ಭಾರತದ ರಮಣ್‌ ಲಾಂಬಾ. ದಿಲ್ಲಿ ಪರ ರಣಜಿ ಪಂದ್ಯ ಆಡುತ್ತಿದ್ದ ಲಾಂಬಾ 1995ರ ಜ. 2ರಂದು ಹಿಮಾಚಲ ಪ್ರದೇಶ ವಿರುದ್ಧ 312 ರನ್‌ ಬಾರಿಸಿದ್ದರು. 
ಈ ಇನ್ನಿಂಗ್ಸ್‌ ವೇಳೆ ಪ್ರಶಾಂತ್‌ ಚೋಪ್ರಾ ನಿರ್ಮಿಸಿದ ಕೆಲವು ದಾಖಲೆಗಳನ್ನು ಇಲ್ಲಿ ಉಲ್ಲೇಖೀಸಲಾಗಿದೆ.

ಚೋಪ್ರಾ ಶುಕ್ರವಾರ 271 ರನ್‌ ಮಾಡಿ ಅಜೇಯರಾಗಿ ಉಳಿದಿದ್ದರು. ಇದು ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯದ ಮೊದಲ ದಿನದಾಟದಲ್ಲಿ ದಾಖಲಾದ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. 1935ರಲ್ಲಿ ಇಂಡಿಯನ್‌ ಯುನಿವರ್ಸಿಟಿ ಒಕೇಶನಲ್ಸ್‌ ಪರ ಆಡುತ್ತಿದ್ದ ವಜೀರ್‌ ಅಲಿ “ವಿಕೆರಾಯ್ಸ ಇಲೆವೆನ್‌’ ವಿರುದ್ಧ ಅಜೇಯ 268 ರನ್‌ ಬಾರಿಸಿದ ದಾಖಲೆ ಪತನಗೊಂಡಿತು.

ಇದು ಭಾರತದ ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯದ ದಿನದಾಟವೊಂದರಲ್ಲಿ ದಾಖಲಾದ 2ನೇ ಸರ್ವಾಧಿಕ ವೈಯಕ್ತಿಕ ಗಳಿಕೆ. 1948-49ರ ರಣಜಿ ಪಂದ್ಯದ 2ನೇ ದಿನದಾಟದಲ್ಲಿ ಬಿ.ಬಿ. ನಿಂಬಾಳ್ಕರ್‌ 277 ರನ್‌ ಬಾರಿಸಿದ್ದು ದಾಖಲೆ.

ಚೋಪ್ರಾ ಅವರ 338 ರನ್‌ 363 ಎಸೆತಗಳಲ್ಲಿ ಬಂತು. ಇದರಲ್ಲಿ 44 ಬೌಂಡರಿ ಹಾಗೂ 2 ಸಿಕ್ಸರ್‌ ಒಳಗೊಂಡಿತ್ತು. ಚೋಪ್ರಾ ಭಾರತದ ಪ್ರಥಮ ದರ್ಜೆ ಇನ್ನಿಂಗ್ಸ್‌ ಒಂದರಲ್ಲಿ ಸರ್ವಾಧಿಕ ಬೌಂಡರಿ ಹೊಡೆದ 4ನೇ ಬ್ಯಾಟ್ಸ್‌ಮನ್‌. ಉಳಿದ ಮೂವರೆಂದರೆ ಕೇದಾರ್‌ ಜಾಧವ್‌ (54), ಲಕ್ಷ್ಮಣ್‌ (52) ಮತ್ತು ಸಂಜಯ್‌ ಮಾಂಜ್ರೆàಕರ್‌ (50 ಬೌಂಡರಿ).

ಚೋಪ್ರಾ ಹಿಮಾಚಲ ಪ್ರದೇಶ ಪರ ತ್ರಿಶತಕ ಬಾರಿಸಿದ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು. 1999-2000ದ ಋತುವಿನಲ್ಲಿ ಜಮ್ಮು-ಕಾಶ್ಮೀರ ವಿರುದ್ಧ ರಾಜೀವ್‌ ನಯ್ಯರ್‌ 271 ರನ್‌ ಬಾರಿಸಿದ ದಾಖಲೆ ಮುರಿಯಲ್ಪಟ್ಟಿತು.

ಇದು ರಣಜಿ ಇತಿಹಾಸದ 41ನೇ ತ್ರಿಶತಕ ಪ್ಲಸ್‌ ಸಾಧನೆ, 10ನೇ ಅತೀ ಹೆಚ್ಚಿನ ವೈಯಕ್ತಿಕ ಗಳಿಕೆ. ಚೋಪ್ರಾ 36ನೇ ತ್ರಿಶತಕವೀರ. ಮಹಾರಾಷ್ಟ್ರದ ಬಿ.ಬಿ. ನಿಂಬಾಳ್ಕರ್‌ ಖತಿಯವಾರ್‌ ತಂಡದ ವಿರುದ್ಧ ಅಜೇಯ 443 ರನ್‌ ಬಾರಿಸಿದ್ದು ದಾಖಲೆ. 

ಚೋಪ್ರಾ ಪಂಜಾಬ್‌ ವಿರುದ್ಧ ಅತ್ಯಧಿಕ ರನ್‌ ಬಾರಿಸಿದ ಕ್ರಿಕೆಟಿಗನಾಗಿಯೂ ಮೂಡಿಬಂದರು. ಕಳೆದ ರಣಜಿ ಋತುವಿನಲ್ಲಿ ಗುಜರಾತ್‌ನ ಪ್ರಿಯಾಂಕ್‌ ಪಾಂಚಾಲ್‌ ಅಜೇಯ 314 ರನ್‌ ಹೊಡೆದ ದಾಖಲೆ ಪತನಗೊಂಡಿತು.

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

1-wqqwqwqeqwe

Kodava Hockey: ಚೇಂದಂಡಕ್ಕೆ 3ನೇ ಪ್ರಶಸ್ತಿ

1-wwwewqe

IPL; ವಿಲ್‌ ಜಾಕ್ಸ್‌ ಭಾರೀ ಸಂಚಲನ: ಆರೇ ನಿಮಿಷದಲ್ಲಿ ಅರ್ಧ ಶತಕ!

BCCI

T20 World Cup: ಇಂದು ಭಾರತ ತಂಡ ಪ್ರಕಟ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.